ಸೋಮವಾರ, ಜನವರಿ 30, 2023

ದೇಶವ ಕಟ್ಟೋಣ (ಕವನ) - ನಾಝೀಮಾ ಹಾಸನ.

ಗೆಜ್ಜೆಯ ಕಟ್ಟೋಣ  ನಾವು
ಹೆಜ್ಜೆಯ ಹಾಕೋಣ
ಹೆಜ್ಜೆಯ ಹಾಕುತ
ಸದ್ದನು  ಮಾಡುತ
ದೇಶವ  ಕಟ್ಟೋಣ
ನಾವು  ದೇಶವ   ಕಟ್ಟೋಣ

ಜ್ಞಾನವ  ಹಂಚೋಣ  ನಾವು
ಸಂವಿಧಾನ ಓದೋಣ
ಸಂವಿಧಾನ  ಓದುತ
ಜ್ಞಾನವ  ಬೆಳೆಸುತ
ದೇಶವ  ಕಟ್ಟೋಣ
ನಾವು  ದೇಶವ  ಕಟ್ಟೋಣ

ಮತಭೇದ ಅಳಿಸೋಣ  ನಾವು
ಏಕತೆ  ಸಾರೋಣ
ಏಕತೆ  ಸಾರುತ
ಭ್ರಾತೃತ್ವ   ಬೆಳೆಸುತ
ದೇಶವ  ಕಟ್ಟೋಣ
ನಾವು ದೇಶವ  ಕಟ್ಟೋಣ

ಒಗ್ಗಟ್ಟನ್ನು  ಮೂಡಿಸೋಣ ನಾವು
ಜಾತಿಯತೆ  ಅಳಿಸೋಣ
ಜಾತಿಯತೆ  ಅಳಿಸುತ
ಒಗ್ಗಟ್ಟನ್ನು  ಜಪಿಸುತ
ದೇಶವ  ಕಟ್ಟೋಣ
ನಾವು  ದೇಶವ ಕಟ್ಟೋಣ

ಅನೀತಿಯ  ಓಡಿಸೋಣ  ನಾವು
ನೀತಿಯ  ಬಿತ್ತೋಣ
ನೀತಿಯ  ಬಿತ್ತುತ
ಪ್ರೀತಿಯ ಹರಡುತ 
ದೇಶವ ಕಟ್ಟೋಣ
ನಾವು  ದೇಶವ ಕಟ್ಟೋಣ.
  - ನಾಝೀಮಾ ಹಾಸನ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...