ಸೋಮವಾರ, ಜನವರಿ 30, 2023

ನಮಗೆ ನಾವೇ ಜೋಡಿ (ಕವನ) - ಸವಿತಾ ಆರ್ ಅಂಗಡಿ

ನಮ್ಮವರೀಗ ಯಾರು ನಮಗಿಲ್ಲ
ನಮಗೆ ನಾವೇ ಜೋಡಿಯೆಲ್ಲ
ದಿನಗಳು ಕಳೆದುದು ಗೊತ್ತಾಗಲಿಲ್ಲ
ಉದುರಿ ಹೋದವು ವರ್ಷಗಳು ಹೇಗೆಲ್ಲ

ಕಷ್ಟದಿಂದ ಜೀವನವು ಬೆಂದು ಹೋಗಿದೆ
ದುಡಿಯುವ ಶಕ್ತಿ ಮೀರಿಹೋಗಿದೆ
ಮಕ್ಕಳು ನೋಡುವವರೆಂಬ ಆಸೆ
ತೀರಿಹೋಗಿದೆ
ನಮಗೆ ನಾವೇ ಜೋಡಿ ಎಂದು ತಿಳಿದಾಗಿದೆ

ಹೂವೆಂದು ಸಾಕಿಸಲುಹಿದೆವು
ಹಾವಾಗಿ ತಿರುಗಿ ಬುಸುಗುಟ್ಟಿದವು
ಬಂಧು ಬಳಗದ ಅಕ್ರಂದನ ವಿಲ್ಲದಿಹುದು
ಮುಪ್ಪಾವಸ್ಥೆಗೆ ಜೊತೆಗೆ ಇಲ್ಲದಿಹುದು
ಜೀವನವೇ ತೂಗುಯ್ಯಾಲೆ ಯಾಗಿಹುದು

ನೋವಿನಲ್ಲೂ ನಗುವಲ್ಲೂ ಜೊತೆಯಾಗಿರೋಣ
ಕಷ್ಟ ಸುಖಗಳನ್ನು ಹಂಚಿಕೊಳ್ಳೋಣ
ದಾರಿ ತೋರಿಸಿದವರೊಡನೆ ಸಾಗೋಣ
ಭಗವಂತನಿಗೆ ಸೆರಗೊಡ್ಡಿ ನಮಿಸೋಣ.

- ಸವಿತಾ ಆರ್ ಅಂಗಡಿ, ಮುಧೋಳ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...