ಮಂಗಳವಾರ, ಫೆಬ್ರವರಿ 21, 2023

ನಿಮಗಿದು ಬೇಕಿತ್ತಾ ಶಿವನೆ (ಕವಿತೆ) - ಬಸವರಾಜ ಮೈದೂರ ಚಿಕ್ಕಮರಳಿಹಳ್ಳಿ.

ಅವನು ಅಸವಾಲದ
ದೇವರು ಅಂತಿವಿ..

ಅದೆ ದೇವಸ್ಥಾನದಲ್ಲಿ ನಮ್ಮನ್ನು 
ಕಾಯಲು ಸಿ ಸಿ ಕ್ಯಾಮೆರಾ ಇಡತಿವಿ..

ಹೆಣ್ಣು ಗಂಡು 
ಎರಡೇ ಜಾತಿ ಅಂತಿವಿ..

ಊರ ತುಂಬಾ ನೂರೆಂಟು 
ಜಾತಿಯ ಹುಟ್ಟು ಹಾಕ್ತಿವಿ..

ಸರಾಯಿ ಊರಿಗೆ 
ಮಾರಕ ಅಂತಿವಿ..

ಅದೆ ಸರಾಯಿನ ಅಗಸಿ ಬಗಸಿ
ಬಾಗಿಲಲ್ಲಿ ತಂದು ಇಡತಿವಿ.. 

ನಾವು ಇಲ್ಲಿಂದ ಏನನ್ನೂ 
ತೊಗೊಂಡು ಹೋಗಲ್ಲ ಅಂತಿವಿ..

ಕದ್ದು ಮುಚ್ಚಿ ಕೋಣೆಯಲ್ಲಿ 
ದುಡ್ಡಿನ ಬಣವಿ ವಟ್ಟತವಿ..

- ಬಸವರಾಜ ಮೈದೂರ ಚಿಕ್ಕಮರಳಿಹಳ್ಳಿ, 7259326361.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...