ಮಂಗಳವಾರ, ಫೆಬ್ರವರಿ 21, 2023

ಮೊಗವಾಡ ಲೋಕ (ಕವಿತೆ) - ಕಾಜಲ ಆನಂದ ಹೆಗಡೆ.

ಲೇ ಮಾನವಾ ಬಂದೇ ಬಿಟ್ಟೀಯಾ ಈ ಜನುಮಕ
ನೀನು ಲೋಕವನ್ನೇ ಆಳುತಿದೆಯಲ್ಲಾ ನಿನ್ನ ಸ್ವಾರ್ಥಕ
ಮಾಡುವುದನ್ನೇ ಮರೆತು ಬಿಟ್ಟೆಯಲ್ಲಾ  ದೇವರ ಕಾಯಕ
ಮಾನವೀಯತೆ ಎಂಬುದು ಇಲ್ಲಾ ಈ ಜನಕ
ಎಷ್ಟು ಹೇಳಿದರು ಅಷ್ಟೇ ಇದೆ ನಿನ್ನ ಕರ್ಮಕ
ಒಳ್ಳೆಯವನಾಗಿ  ಬಾಳು ಈ ಜಗಕ
ಅಳೆಯದಿರು ಎಂದಿಗೂ ಆಸ್ತಿ ಪಾಸ್ತಿ ಸಿರಿತನದ ಕನಕ
ಚಿರುರುಣಿ ಯಾಗಿರು ಸದಾ ಬಡವರ ಪಾಲಕ
ದುಡಿಸಿಕೊಳ್ಳುವವರನ್ನು  ಕೊಲ್ಲದಿರು ನೀ ಮಾಲೀಕ
ತಳ್ಳದಿರು ಯಾರನ್ನು ಪಾತಾಳಕ
ಕರೆದರೂ ಓ ಎನ್ನದಿರುವನು ಆ ನಾಯಕ
ಕಳೆದುಕೊಳ್ಳುವೆ ಎಲ್ಲವನು ವಯಸ್ಸಾದ ಬಳಿಕ
ಸೇರುವೆ ಒಂದು ದಿನ ಆ ಸ್ವರ್ಗಕ
ಎಲೆ ಮಾನವಾ ಏನೆಂದು ಹೋಗಳಲಿ ನಿನ್ನ ನಾಮಕ
ಇದುವೇ ಈ ಪ್ರಪಂಚದ ನಾಟಕ...

- ಕಾಜಲ ಆನಂದ ಹೆಗಡೆ, ನವಲಿಹಾಳ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...