ಭಾನುವಾರ, ಫೆಬ್ರವರಿ 19, 2023

ಮಾತನಾಡುವವರಿಗೇನು ಗೊತ್ತು ಮೌನದ ಕಿಮ್ಮತ್ತ (ಕವಿತೆ) - ಬಸವರಾಜ್ ಎಚ್. ಹೊಗರನಾಳ.

ಸುಮ್ಮನಿರು ನೀನು ನೂರು ಜನ ನೋರೊಂದು ಮಾತನಾಡಲಿ
ಸುಮ್ಮನಿರು ನೀನು ನಿನ್ನ ಕನಸು ನನಸಾಗುವವರೆಗೂ
ಸುಮ್ಮನಿರು ನೀನು ನೀ ಅಂದುಕೊಂಡಂತಹ ಕಾರ್ಯ ನೆರವೇರುವವರೆಗೂ
ಬಿಡದೇ ಕಾಣುತ್ತಿರು ನೀ ಸಧಾ ಸಾಧನೆಯ ಹಾದಿಯನು ll

ಸುಮ್ಮನಿರು ನೀನು ಹಲವಾರು ಅಪಮಾನಗಳನ್ನ ಸಹಿಸಿಕೊಂಡು
ಸುಮ್ಮನಿರು ನೀನು ಎಲ್ಲರೂಳಗೊಂದಾಗಿ ಮಂಕುತಿಮ್ಮನಂತೆ
ಸುಮ್ಮನಿರು ನೀನು ದಬ್ಬಾಳಿಕೆಯನು ಸಹಿಸಿಕೊಂಡು
ಬಿಡದೇ ಕಾಣುತ್ತಿರು ನೀ ಸಧಾ ಸಾಧನೆಯ ಹಾದಿಯನು ll 

ಸುಮ್ಮನಿರು ನೀನು ನಿನ್ನ ಮಾತಿಗೆ ಬೆಲೆ ಸಿಗುವವರೆಗೂ
ಸುಮ್ಮನಿರು ನೀನು ಬೇರೆಯವರ ಮಾತಿಗೆ ಕಿವಿ ಕೆಳದಂತೆ ಕಿವುಡನಾಗಿ 
ಸುಮ್ಮನಿರು ನೀನು ನಿನ್ನ ಬಗ್ಗೆ ಮಾತಾಡಿದ ಎಲ್ಲರಿಗೂ ಉತ್ತರ ಸಿಗುವವರೆಗೂ
ಬಿಡದೇ ಕಾಣುತ್ತಿರು ನೀ ಸಧಾ ಸಾಧನೆಯ ಹಾದಿಯನು ll

ಸುಮ್ಮನಿರು ನೀನು ಮಾತನಾಡುವವರ ಮಾತು ಮುಗಿಯುವವರೆಗೂ
ಸುಮ್ಮನಿರು ನೀನು ನಿನ್ನನ್ನು ಎಲ್ಲರೂ ಗೌರವದಿಂದ ಕಾಣುವವರೆಗೂ
ಸುಮ್ಮನಿರು ನೀನು ನಿನ್ನನ್ನು ಅತಿಥಿಯಾಗಿ ಆಹ್ವಾನಿಸುವವರೆಗೂ
ಬಿಡದೇ ಕಾಣುತ್ತಿರು ನೀ ಸಧಾ ಸಾಧನೆಯ ಹಾದಿಯನು ll 

ಸುಮ್ಮನಿರು ನೀನು ಮಾತನಾಡುವವರ ಮಾತು ಮುಗಿಯುವವರೆಗೂ
ಸುಮ್ಮನಿರು ನೀನು ನಿನ್ನ ಮೌನದ ಹಿಂದೆ ಇರುವ ಮಹತ್ವ ತಿಳಿಯುವವರೆಗೂ
ಸುಮ್ಮನಿರು ನೀನು ಸಾಧನೆಯ ನೋಡಿ ಸಿಳ್ಳೆ ಹಾಕಿ ಶಾಲು ಹೊದಿಸುವವರೆಗೂ
ಬಿಡದೇ ಕಾಣುತ್ತಿರು ನೀ ಸಧಾ ಸಾಧನೆಯ ಹಾದಿಯನು ll

- ಬಸವರಾಜ್ ಎಚ್. ಹೊಗರನಾಳ.

1 ಕಾಮೆಂಟ್‌:

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...