ಶನಿವಾರ, ಫೆಬ್ರವರಿ 25, 2023

ಜಗವ ಪಾಲಿಸು ಶಿವನೇ (ಕವಿತೆ) - ಶಾರದ ದೇವರಾಜ್, ಎ. ಮಲ್ಲಾಪುರ.

ಸಲಿಲದೊಳು ಮಿಂದೆದ್ದು
 ವಲ್ಕಲವ ಧರಿಸಿದ್ದು
 ಉದಯದ ತಂಗಾಳಿಯಲಿ
 ಹರನ ಶೋಭಿಯ  ಸ್ರವಿಸುತ್ತಿರಲುl

 ಜಗದೊಡೆಯನ ಶೋಭಿಯ 
ಕಣ್ತುಂಬಿಕೊಳ್ಳಲು ವಿಭಕ್ತಿಯಿಂದ
 ಕೂಡಿದ್ದು ಇಂಚರದಿ ಬೇಡುತಾ  ಸನ್ನಡತೆಯ ಕೋರಿದೆನು ವಾಗ್ದಾನ ಬೇಡುತl

 ಜಗದೊಳಿಹ ಜನರ ದುಗುಡವ
 ಕಂಡು ಚಕಿತವು ಜನಿಸಿದ್ದು
 ಮನದಿ ಕಾರ್ಮೋಡವು ಜರುಗಿ
 ಕಣ್ಗಳಲ್ಲಿ  ಅಶ್ರೂರಸ ತುಂಬಿದ್ದು
 ಲೋಪವಾಯಿತು ಎನ್ ಮನದ 
ವ್ಯಾಪದ ಸಮಷ್ಟಿ  ಬಯಕೆಗಳುl

 ಬೆಸೆಯುವೆ ಭಗವಂತನೇ
 ದೌರ್ಜನ್ಯವ ನಿಷೇಧಿಸಿ   ನಿಸ್ಸಾರವಾಗಿ ನುಡಿಯುವ ಆಣತಿಗೆ
 ಭಂಗಿಸಿ ಆಡುವವರಿಗೆ ಪುಂಜ  ನೀಡು
  ಸಮಸ್ಟಿಯ ಕೀಳು ಗೈಮೆಗೆ
 ಸಿದಿಗೆ ಕಟ್ಟಿ ತಿಲಾನ್ನ ಬಿಡುl
 - ಶಾರದ ದೇವರಾಜ್, ಎ. ಮಲ್ಲಾಪುರ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...