ಶನಿವಾರ, ಫೆಬ್ರವರಿ 18, 2023

ರಮಾಬಾಯಿ ಅಂಬೇಡ್ಕರ್‌ (ಕವನ) - ತರುಣ ಈಶಪ್ಪ ಪೂಜಾರ.

ಎಲ್ಲರ ಮನೆಯ ಬೆಳಗಿಸಿದ ತಾಯಿ ನೀನು, ದೇಶದ ಶ್ರೇಯಸ್ಸಿಗೆ ಮಡಿಯಲು ಕೊಟ್ಟಿರುವ ಹೆಣ್ಣು ನೀನು,
 ಎಲ್ಲಿ ನೋಡಿದರೂ ನಿನ್ನ ನೆನಪುಗಳ ಸೃಷ್ಟಿಸಿ ತುಂಬ್ಧೆ ಸಾಕಷ್ಟು ಧೈರ್ಯವನ್ನು ನೀಡಿದವಳು ನೀನು !!!

ದೇಶದ ಜನರಲ್ಲಿ ಮನೆ ಮಾಡಿ ದೇಶದಾದ್ಯಂತ ಪ್ರೀತಿಯ ಮಗಳಾಗಿರುವ ನೀನು ನಿನ್ನ ಕುಡಿ ಬಾಯಿ ಬಿಟ್ಟೊಡನೆ ಜಗತ್ತಿನ ಹೂವು ಅರಳಿತು ಹೇ ನನ್ನ ತಾಯಿ !!!

ನಿನ್ನ ಕುಡಿ ಕಂಡ ಕೇಳಿದೊಡನೆ ನಮ್ಮೆಲ್ಲರ ಬಾಳಿನ ಬೆಳಕು ಹರಿದಿತ್ತು ಸತ್ಯದ ದಾರಿಗೆ ನಡೆಸುವ ಶಾಂತಿಯ ಮನೆ ತೆರೆದಿತ್ತು ಈ ನನ್ನ ತಾಯಿ!!!

ದೇಶದ ಸರ್ವತೋಮುಖಕ್ಕೆ ಮಡಿಪಾಗಿ ಇಟ್ಟ ಈ ನಿನ್ನ ದೇಹ ಬರಿ ನೆನಪಾಗಿ ಉಳಿದಿದೆ ಹೇ ತಾಯಿ ಸಾಕು ಸಾಕಾಗಿದೆ ಈ ಬೇಸರದ ಮಾತಿಗಾಗಿ ಆದರೂ ಕ್ಷಮಿಸುವ ಋಣವಾಗಿ ಇಟ್ಟೆ!!!

ಹಸಿದು ಮಲಗಿದ ಬಡಪಾಯಿಗಳಿಗೆ ಆಕಾಶವಾದದ ಹೋಳಿಗೆ ಉಳಣಿಸಿದವಳು ನೀನು ವಿದ್ಯೆಇಲ್ಲದೆ ತೊಳಲಾಡುತ್ತಿದ್ದ ಜೀವಗಳಿಗೆ ಜೀವ ವಿರೋಧಿ ಮನುತ್ವ
ಕಿತ್ತಾಕಿ ಜೀವ ಪರ ಮನುಷ್ಯತ್ವ ಚಿಗಿರಿಸಿದವಳು ನೀನು, ಏ ತಾಯಿ ಈ ನಿನ್ನ ನೆನಪು ಅಜರಾಮರ!!!

- ತರುಣ ಈಶಪ್ಪ ಪೂಜಾರ.
 ಹಾವೇರಿ ಜಿಲ್ಲೆ.
# 8884996149.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...