ಸಾವಿರದ ಶರಣರು
ಈ ಮಹಾಸಂತರು
ಹುಡುಕಿದರು ಮತ್ತೆಲ್ಲು
ಸಿಗದ ಶಿವ ಶರಣರು
ಬಸವೇಶ್ವರರ ಹಾದಿಯನ್ನೆ
ಹಿಡಿದವರು
ಸಕಲೆಲ್ಲ ಭೋಗಗಳ
ತೊರೆದು ನಿಂತವರು
ಧರೆಗಿಳಿದು ಬಂದಂಥ
ನಡೆದಾಡೊ ದೇವರು
ಆಡಂಬರವ ದೂಡಿ
ಸರಳತೆ ಮೆರೆದವರು
ಸಂತರಿಗೆ ಸಂತರು
ಈ ಮಹಾ ಋಷಿಗಳು
ಕರುನಾಡಿನಲ್ಲಿದ್ದ
ಕರುಣೆಯ ಯತಿಗಳು
ಶುದ್ಧ ಮನಸಿನ ಸಿದ್ಧ
ಸಾಧಕರು ಇವರು
ಶ್ವೇತ ಉಡುಪನು ತೊಟ್ಟು
ಜ್ಞಾನದೀವಿಗೆಯಾದರು
ಹೆಸರಿಗೆ ತಕ್ಕಂತೆ ಇರುವ
ಸಿದ್ದೇಶ್ವರರು
ಎಲ್ಲ ಸಿದ್ಧಿಯನು ಪಡೆದು
ದಂತ ಕಥೆಯಾದರು
- ಸಬ್ಬನಹಳ್ಳಿ ಶಶಿಧರ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ