ಶನಿವಾರ, ಫೆಬ್ರವರಿ 25, 2023

ಗೆಳತಿಗೊಂದು ಉತ್ತರ (ಕವಿತೆ) - ಖಾಶೀ.

ಅಹುದಹುದು
ಗೆಳತಿ.....
ನಿನ್ನಂತರಾಳದ
ದಣಿಯು
ನನ್ನ ಮನದೊಳಗೆ
ನುಸುಳಿ.....
ನೀನನ್ನ ಕರೆಯುವ
ಪರಿಯು ಇರಿಯುತಿಹುದು.

ನನ್ನ ಬರುವಿಕೆಗಾಗಿ
ಪರಿತಪಿಪ
ನಿನ್ನ ತನುಮನವ
ನಾನೆಂತು 
ಸಂತೈಪೆನೆಂಬ
ಕೊರಗಲಿಹೆನೂ.

ನನ್ನ ಬದುಕಿನ
ಹಾದಿ ,ಸವೆಸವೆದು
ಹೋಗುವ ಮುನ್ನ
ಬಂದು ಸೇರುವೆ ನಾನು
ಆ ನಿನ್ನ 
ಹೃದಯದರಮನೆಯನು.

ಬಿಟ್ಟುಬಿಡು
ನಿನ್ನೆಲ್ಲ ಹಮ್ಮುಬಿಮ್ಮುಗಳ
ಚಿಂತೆ ಚೀತ್ಕಾರಗಳ
ತೊರೆದುಬಿಡು
ನಿನ್ನ ಸಕಲ
ದು:ಖ ದುಮ್ಮಾನಗಳ.

ನಾನಿರಲು ನಿನ್ನೊಡನೆ
ಬೇರೇನು ಬೇಕಿನ್ನು
ನಾಕವೇ ಬಂದಂತೆ
ನಿನ್ನೆದುರಿಗೇ.
-ಖಾಶೀ, (ಖಾದ್ರಿ ವೆಂಕಟ ಶ್ರೀನಿವಾಸನ್).


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...