ಅಹುದಹುದು
ಗೆಳತಿ.....
ನಿನ್ನಂತರಾಳದ
ದಣಿಯು
ನನ್ನ ಮನದೊಳಗೆ
ನುಸುಳಿ.....
ನೀನನ್ನ ಕರೆಯುವ
ಪರಿಯು ಇರಿಯುತಿಹುದು.
ನನ್ನ ಬರುವಿಕೆಗಾಗಿ
ಪರಿತಪಿಪ
ನಿನ್ನ ತನುಮನವ
ನಾನೆಂತು
ಸಂತೈಪೆನೆಂಬ
ಕೊರಗಲಿಹೆನೂ.
ನನ್ನ ಬದುಕಿನ
ಹಾದಿ ,ಸವೆಸವೆದು
ಹೋಗುವ ಮುನ್ನ
ಬಂದು ಸೇರುವೆ ನಾನು
ಆ ನಿನ್ನ
ಹೃದಯದರಮನೆಯನು.
ಬಿಟ್ಟುಬಿಡು
ನಿನ್ನೆಲ್ಲ ಹಮ್ಮುಬಿಮ್ಮುಗಳ
ಚಿಂತೆ ಚೀತ್ಕಾರಗಳ
ತೊರೆದುಬಿಡು
ನಿನ್ನ ಸಕಲ
ದು:ಖ ದುಮ್ಮಾನಗಳ.
ನಾನಿರಲು ನಿನ್ನೊಡನೆ
ಬೇರೇನು ಬೇಕಿನ್ನು
ನಾಕವೇ ಬಂದಂತೆ
ನಿನ್ನೆದುರಿಗೇ.
-ಖಾಶೀ, (ಖಾದ್ರಿ ವೆಂಕಟ ಶ್ರೀನಿವಾಸನ್).
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ