ಮಂಗಳವಾರ, ಮಾರ್ಚ್ 21, 2023

ಮತ್ತೆ ಬಂತು ಯುಗಾದಿ (ಕವಿತೆ) - ಆಶಾ ಎಲ್. ಎಸ್.

ನವವರುಷಕೆ ನಾಂದಿ ಯುಗಾದಿಯು
ಚೈತ್ರದಲಿ ವಸಂತಾಗಮನ ಆಗಿಹುದು
ನವಸಂವತ್ಸರದ ಸಂಭ್ರಮದಿ ಸರ್ವರು
ಶುಭಕೃತವು ತರಲಿ ಶುಭವೆಲ್ಲರಿಗೂ 

ಎಲ್ಲೆಡೆ ತಳಿರು ತೋರಣವು
ನಾಡು ಹಸಿರಿನಿಂದ ಸಿಂಗಾರಗೊಂಡಿಹುದು
ನವ ಉಲ್ಲಾಸ ಹರಷವು ಮೇಳೈಸಿಹುದು
ಮಧುವರಸಿ ಬಂದಿಹವು ದುಂಬಿಗಳು

ಮಾವು ಬೇವು ಗಿಡಮರಗಳು
ಚಿಗುರೊಡೆಯುವ ಪರ್ವವಿದು
ಕೋಗಿಲೆಗಿದುವೆ ಮುದವು
ಕುಹೂಗಾನ ಮನಕಾನಂದವು

ಹಸಿರು ಮಾವು ಬೇವಿನ ತೋರಣಕಟ್ಟಿ
ಎಲ್ಲರೂ ಕೂಡಿ ಹೋಳಿಗೆ ಸವಿದು
ಸಂಭ್ರಮದಿ ಕಾತುರದಿ ಚಂದಿರನ ನೋಡಿ
ಬೇವು ಬೆಲ್ಲವ ಹಂಚಿ ಹಿರಿಯರ 
ಆಶೀರ್ವಾದವ ಪಡೆಯುವ

ಬೇವು ಬೆಲ್ಲದಂತೆ ಸಮನಾಗಿ
ಜೀವನವ ನಡೆಸೋಣ
ಹಳೆ ಎಲೆ ಕಳಚಿ ಹೊಸದಾಗಿ
 ಚಿಗುರುವ ಪ್ರಕೃತಿಯಂತೆ

ಹಳೆಯದೆಲ್ಲಾ ಮರೆತು ಹೊಸತು
ಅಳವಡಿಸಿಕೊಳ್ಳೋಣ
ಹಸಿರು ತುಂಬಿರುವ ಪ್ರಕೃತಿಯಂತೆ
ಎಲ್ಲರ ಜೀವನವು ನಳನಳಿಸಲಿ

ಈ ಹೊಸ ವರುಷ ಹೊಸ ಹರುಷ
ಹೊಸ ಹುರುಪು ತರಲಿ ಎಲ್ಲರ ಬಾಳಲಿ
- ಆಶಾ ಎಲ್ ಎಸ್, ಶಿವಮೊಗ್ಗ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...