ಮಂಗಳವಾರ, ಮಾರ್ಚ್ 21, 2023

ಯುಗಾದಿ (ಕವಿತೆ) - ತುಳಸಿದಾಸ ಬಿ. ಎಸ್.

ಮಡಿಗೊಂಡ ಮನೆ ಮನದಿ
ಸ್ವಾಗತವು ಬಾರೊ
ಬ್ರಹ್ಮ ಬ್ರಹ್ಮಾಂಡವನು
ಸೃಷ್ಟಿಸಿದ ದಿನ ಬಾರೊ

ಆ ರವಿಗೆ ನಮಿಸುತ
ಪಂಚಾಂಗ ಕೇಳುತ
ಸಿಹಿ ಕಹಿಯ ಸವಿಯುವ
ಹೊಸ ದಿನವೆ ಬಾರೊ

ಚೈತ್ರ ಮಾಸದಿ ಭಾವ
ಚಿಗುರಿಸುತ ಬಾರೊ
ಸಮೃದ್ಧಿ ಸಂಪತ್ತು
ಸಂತಸವ ತಾರೊ

ಎಲ್ಲ ಪ್ರಾಯದ ಜನಕೆ
ಮಲ್ಲಿಗೆಯಾಗುತ ಬಾರೊ
ಸಮರಸಕೆ ಹೊಂದುವ
ಶಕ್ತಿ ತುಂಬಲು ಬಾರೊ

ಅಳಿಸಿ ಉಳಿಸಿತ ಜೀವಿ
ತಿಳಿದು ನಡೆಸಲು ಬಾರೊ
ಜಗವ ಕದಿಲಿಸುತಲಿ
ಜಡವ ಓಡಿಸು ಬಾರೊ
- ತುಳಸಿದಾಸ ಬಿ. ಎಸ್.,
ಶಿಕ್ಷಕರು, ಸಿಂಧನೂರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...