ಗುರುವಾರ, ಏಪ್ರಿಲ್ 27, 2023

ತನಗರಿಯದ ಮೋಸ (ಸಣ್ಣ ಕತೆ) - ಲಕ್ಷ್ಮೀ ಎ.ಸಿ.,ಮೊರಬ.

ಒಂದು ಹಳ್ಳಿಯಲ್ಲಿ ವಯಸ್ಸಾದ ಅಜ್ಜಿ - ತಾತ ಇದ್ದರು ಅವರಿಗೆ ಮಕ್ಕಳು ಇರಲಿಲ್ಲ. ಅವರು ಹಸುಗಳನ್ನು ಸಾಕಿದ್ದರು. ಹಾಲು ಮತ್ತು ಬೆಣ್ಣೆಯಿಂದ ಅವರ ಜೀವನ ನಡೆಸುತ್ತಿದ್ದರು.
           ಊರಲ್ಲಿ ಒಂದು ಕಿರಾಣಿ ಅಂಗಡಿಯ ಮಾಲೀಕನಿಗೆ ಬೆಣ್ಣೆ ಕೊಟ್ಟು ತನಗೆ ಬೇಕಾದ ಸಾಮಾನಗಳು ತರುತಿದ್ದರು. ಒಂದು ಕೆಜಿ ಬೆಣ್ಣೆಯನ್ನು ಪ್ಲಾಸ್ಟಿಕ್ ದಲ್ಲಿ ಪ್ಯಾಕ್ ಮಾಡಿ ಕೊಡುತ್ತಿದ್ದರು ಮಾಲೀಕನು ಅದನ್ನು ತೂಕ ಮಾಡುತ್ತಿರಲಿಲ್ಲ.
   ಹೀಗೆ ಹಲವಾರು ವರ್ಷಗಳಿಂದ ನಡೆಯುತಿತ್ತು ಒಂದು ದಿನ ಮಾಲೀಕನು ಆ ಬೆಣ್ಣೆಯನ್ನು ತೂಕ ಮಾಡಿದನು. ಅದರಲ್ಲಿ ಬೆಣ್ಣೆ ಕಡಿಮೆ ಇತ್ತು. ಮಾಲೀಕನಿಗೆ ತುಂಬಾ ಕೋಪ ಬಂದು ಏ... ಮೋಸಗಾರ ನಂಬಿಕೆ ದ್ರೋಹಿ ಎಸ್ಟು ದಿನದಿಂದ ಮೋಸ ಮಾಡಿದಿಯಾ ನಮಗೆ.
ಎಂದು ಬೈದು ಹೋಗು ಇಲ್ಲಿಂದ ಇನ್ಮುಂದೆ ಬೆಣ್ಣೆ ಬೇಡ ಎಂದು ಹೇಳಿದನು. 
  ಅವಾಗ ತಾತ ಹೇಳಿದನು ಕ್ಷಮಿಸಿ ಮಾಲೀಕರೇ ನಾನು ತಕ್ಕಡಿ ಕೊಳ್ಳುವಷ್ಟು ಶ್ರೀಮಂತನಲ್ಲ ಹಾಗಾಗಿ ನಿಮ್ಮ ಅಂಗಡಿಯಿಂದ ತಂದ ಒಂದು ಕೆಜಿ ಸಕ್ಕರೆ ಸಮವಾಗಿ ಒಂದು ಕೆಜಿ ಬೆಣ್ಣೆಯನ್ನು ಅಳೆಯುತ್ತೇವೆ. ಎಂದು ಮುಗ್ಧತೆಯಿಂದ ಹೇಳಿದನು. ನಂತರ ಗೊತ್ತಾಯಿತು ಮಾಲೀಕ ಸಕ್ಕರೆ ಕಡಿಮೆ ಕೊಡುತ್ತಾನೆ ಅಂತ. ತನ್ನ ತಪ್ಪು ತನಗೆ ಅರಿವಾಯಿತು. ತಾತನ ಹತ್ತಿರ ಕ್ಷಮೆ ಕೇಳಿದನು. 

     ಸ್ನೇಹಿತರೆ.. ನಾವು ಬೇರೆಯವರ ತಪ್ಪು ಹುಡುಕುವ ಮೊದಲು ನಮ್ಮ ತಪ್ಪು ಹುಡುಕಬೇಕು.
 - ಲಕ್ಷ್ಮೀ ಎ.ಸಿ.,ಮೊರಬ.(ರಾಯಬಾಗ).

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...