ಗುರುವಾರ, ಏಪ್ರಿಲ್ 27, 2023

ಸಂಭ್ರಮಿಸದ ಬದುಕೊಂದು ಬದುಕೇ (ನ್ಯಾನೋ ಕತೆ) - ಸೌಜನ್ಯ ದಾಸನಕೊಡಿಗೆ.

ಒಮ್ಮೆ ಕಾಗೆಮರಿಯೊಂದು ತನ್ನ ಸುತ್ತಾಟವನ್ನು ಮುಗಿಸಿ ಬಂದಾಗ ಅದರ ಕಪ್ಪು ಪುಕ್ಕಗಳ ನಡುವೆ ಒಂದೇ ಒಂದು  ಹಸಿರು ಪುಕ್ಕ ಸಿಕ್ಕಿಕೊಂಡಿತಂತೆ, ಕಾಗೆ ಮರಿಗೆ ಆ ಗಿಳಿಯ ಹಸಿರುಪುಕ್ಕವನ್ನು ಕಂಡು ಅತೀ ಆಶ್ಚರ್ಯವು ಆನoದವು ಆಯಿತoತೆ.

ಒಂದೇ ಒಂದು ಗಿಳಿಯ ಗರಿಯನ್ನು ಪಡೆದ ನಾನು ಇಷ್ಟೊಂದು ಸಂತೋಷಪಡುತ್ತಿರಲು, ಇಂತಹ ಸೊಗಸಾದ ಗರಿಗಳನ್ನು ಮೈ ತುಂಬಾ ಹೊದ್ದಿರುವ ಆ ಗಿಳಿ ಪ್ರತಿದಿನ ತನ್ನ ಮೈಬಣ್ಣವನ್ನು ನೆನೆದು  ಇನ್ನೆಷ್ಟು ಸಂಭ್ರಮಿಸಬಹುದು ಎಂಬ ಕುತೂಹಲದಿಂದ ಗಿಳಿಯನ್ನು ನೋಡಲು ಆ ಕಾಗೆ  ಹೋದಾಗ,

"ನವಿಲುಗಳ ಬಣ್ಣ ಬಣ್ಣದಗರಿಗಳು ಅದೆಷ್ಟು ಚೆನ್ನ, ನನ್ನ ಪುಕ್ಕಗಳು ಇವೆ ಬರೀ ಒಂದೇ  ಬಣ್ಣ"ಎಂದು ಶೋಕಿಸುತ್ತ ಕುಳಿತಿತ್ತು ಆ ಗಿಳಿ.

ನಾವು ದೂರುವ ನಮ್ಮ ಬದುಕು ಅದೆಷ್ಟೋ ಜೀವಗಳ ದೂರದ ಬಯಕೆ.
ನಮ್ಮ ಬದುಕನ್ನು  ನಾವೆ  ಸಂಭ್ರಮಿಸದೆ ಬದುಕುವುದೂ  ಒಂದು ಬದುಕೇ..?

-ಸೌಜನ್ಯ ದಾಸನಕೊಡಿಗೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...