ಗುರುವಾರ, ಏಪ್ರಿಲ್ 27, 2023

ಭಾರತ ರತ್ನ (ಕವಿತೆ) - ಕಾಜಲ ಎ. ಹೆಗಡೆ.

ಏಪ್ರಿಲ್ 14, 1891 ರ  ವಿಸವಿಯಲಿ
ತಾಯಿ ಭೀಮಾಬಾಯಿಯ ಪುಣ್ಯ ಉದರದಲಿ
ರಾಮಜಿಯವರ ಬಡ ಬಾಳ ಬಳ್ಳಿಯಲಿ
ಜನ್ಮತಾಳಿತು ಭೀಮ ಎಂಬ ಗಂಡು ಹುಲಿ...

ಮೇಲು-ಕೀಳು ಎಂಬ ಭೇದ -ಭಾವದಲಿ
ಜೀವನ ಕಳೆದರು ಕಷ್ಟದ ದಿನಗಳಲಿ
ಅಕ್ಷರ ಕಲೆತರು ಶಾಲೆಯ ಹೋರಾಂಗಣದಲಿ
ಧೈರ್ಯ ದಿಂದ ನಡೆದರು ವಿದ್ಯಾ ಕ್ಷೇತ್ರದಲಿ...

ಬಾಲ ಭೀಮನ ಚಿಗುರುವ  ವಯಸ್ಸಿನಲಿ
ಮಡದಿ ರಮಾಬಾಯಿಯ ಸಂಗಾತಿಯಲಿ
ಹೃದಯವಂತಿಕೆಯ ದೇಶಪ್ರೇಮದಲಿ
ಭಾರತದ ಸಂವಿಧಾನ ಶಿಲ್ಪಿಯಾದರಿಲ್ಲಿ...

ಕರಡು ಸಮಿತಿಯ ಅಧ್ಯಕ್ಷರ ನಾಯಕತ್ವದಲಿ
ಪ್ರೇಮ ಬಿಹಾರಿ ನರೇನ ಅವರ ಹಸ್ತಾಕ್ಷರದಲಿ
2 ವರ್ಷ 11 ತಿಂಗಳು 18 ದಿನಗಳ ಅವಧಿಯಲಿ
ಬರೆದ ಸಂವಿಧಾನವು ಬೆಳಕಿಗೆ ಬಂದಿತಿಲ್ಲಿ...

ಈ ಭೀಮನ ಜನುಮ ದಿನ ಭಾರತದಲ್ಲಿ
ಸಂಭ್ರಮ ಸಡಗರದ ಹಬ್ಬವಾಯಿತು ನಮ್ಮಲ್ಲಿ
ಅಸ್ಪೃಶ್ಯತೆ ಎಂಬ ಹುಟ್ಟಿ ಬೆಳೆದ ಕುಲದಲ್ಲಿ
ಅವರೇ ಭೀಮರಾವ್ ಅಂಬೇಡ್ಕರ್ ಮಹಾನಾಯಕರಿಲ್ಲಿ...

- ಕಾಜಲ ಎ. ಹೆಗಡೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...