ಗುರುವಾರ, ಏಪ್ರಿಲ್ 27, 2023

ಭಾರತ ರತ್ನ (ಕವಿತೆ) - ಕಾಜಲ ಎ. ಹೆಗಡೆ.

ಏಪ್ರಿಲ್ 14, 1891 ರ  ವಿಸವಿಯಲಿ
ತಾಯಿ ಭೀಮಾಬಾಯಿಯ ಪುಣ್ಯ ಉದರದಲಿ
ರಾಮಜಿಯವರ ಬಡ ಬಾಳ ಬಳ್ಳಿಯಲಿ
ಜನ್ಮತಾಳಿತು ಭೀಮ ಎಂಬ ಗಂಡು ಹುಲಿ...

ಮೇಲು-ಕೀಳು ಎಂಬ ಭೇದ -ಭಾವದಲಿ
ಜೀವನ ಕಳೆದರು ಕಷ್ಟದ ದಿನಗಳಲಿ
ಅಕ್ಷರ ಕಲೆತರು ಶಾಲೆಯ ಹೋರಾಂಗಣದಲಿ
ಧೈರ್ಯ ದಿಂದ ನಡೆದರು ವಿದ್ಯಾ ಕ್ಷೇತ್ರದಲಿ...

ಬಾಲ ಭೀಮನ ಚಿಗುರುವ  ವಯಸ್ಸಿನಲಿ
ಮಡದಿ ರಮಾಬಾಯಿಯ ಸಂಗಾತಿಯಲಿ
ಹೃದಯವಂತಿಕೆಯ ದೇಶಪ್ರೇಮದಲಿ
ಭಾರತದ ಸಂವಿಧಾನ ಶಿಲ್ಪಿಯಾದರಿಲ್ಲಿ...

ಕರಡು ಸಮಿತಿಯ ಅಧ್ಯಕ್ಷರ ನಾಯಕತ್ವದಲಿ
ಪ್ರೇಮ ಬಿಹಾರಿ ನರೇನ ಅವರ ಹಸ್ತಾಕ್ಷರದಲಿ
2 ವರ್ಷ 11 ತಿಂಗಳು 18 ದಿನಗಳ ಅವಧಿಯಲಿ
ಬರೆದ ಸಂವಿಧಾನವು ಬೆಳಕಿಗೆ ಬಂದಿತಿಲ್ಲಿ...

ಈ ಭೀಮನ ಜನುಮ ದಿನ ಭಾರತದಲ್ಲಿ
ಸಂಭ್ರಮ ಸಡಗರದ ಹಬ್ಬವಾಯಿತು ನಮ್ಮಲ್ಲಿ
ಅಸ್ಪೃಶ್ಯತೆ ಎಂಬ ಹುಟ್ಟಿ ಬೆಳೆದ ಕುಲದಲ್ಲಿ
ಅವರೇ ಭೀಮರಾವ್ ಅಂಬೇಡ್ಕರ್ ಮಹಾನಾಯಕರಿಲ್ಲಿ...

- ಕಾಜಲ ಎ. ಹೆಗಡೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...