ಶುಕ್ರವಾರ, ಏಪ್ರಿಲ್ 21, 2023

ಬಿ.ಆರ್. ಅಂಬೇಡ್ಕರ್ (ಕವಿತೆ) - ಶಾರದ ದೇವರಾಜ್, ಎ. ಮಲ್ಲಾಪುರ.

ಭಾರತ ಭೂಮಿಯಲ್ಲಿ ಜನಿಸಿ
 ಭಾರತ ಮಾತೆಗೆ ನಮಿಸಿ
 ಭಾರತೀಯ ನಾನೆಂದು ಘೋಷಿಸಿ
 ಭಾರತೀಯರೆಲ್ಲರಿಗೊಂದಿಸಿl

 ಇಟ್ಟ ಹೆಜ್ಜೆಯ ಹಿಂದೆ ಸರಿಸದೆ
 ಮಟ್ಟಗೊಳಿಸುವವರನ್ನು ಬಿಡದೆ
 ಪಟ್ಟು ಹಿಡಿದು ನಿಂತೆ ನೀನು
 ತೊಲಗಿಸಲು  ಅಸ್ಪೃಶ್ಯತೆಯನುl

 ಕಾಟಕೊಟ್ಟವರೆಲ್ಲರನು
 ಕೀಟದಂತೆ ಹೊಸರುತಲಿ
 ನೀತಿ ನಿಲುವಿನ ಮೆಟ್ಟಿಲನು
 ಎಲ್ಲ ಜನರಿಗೂ ತೋರಿಸುತಲಿl

 ಅನ್ನ ನೀರನು ಕೊಡದೆ ಕಾಡಿ
 ನಿಂತ ನೆಲಕೆ ನೀರು ಎರಚಿ
   ತುತ್ತು ಅನ್ನಕು   ಕುತ್ತು ಹೊಡ್ಡಿ
  ಬಡಿದು ಕಾಡುತ ಮನವ ಕಲಚಿl

 ಕಾಡಿ ಕಲ್ಲಿರಿದ ಮನುಜರು
 ಬೇಡಿಕೊಂಡರೂ ನೂಕುತಿರುವರು
 ನಡೆವ ಹಾದಿಗೆ ಬೇಲಿ ಹಾಕಿ
 ಮಾನವತೆಯನು  ಚಿವುಟಿ  ಹಾಕಿl

 ನಿನ್ನ ದಾರಿಗೆ ಅಡ್ಡ ಗಟ್ಟಿ
 ನಿನ್ನ ಸಾಧನೆಗೆ ತೊಡರುಗಟ್ಟಿ
 ನಿನ್ನ ಕಾಣಲು ಮುಖವ ತಿರುಗಿಸಿ
 ನಿನ್ನ ಜನತೆಗೆ ಉಸಿರುಗಟ್ಟಿಸಿl

 ಉಸಿರುಗಟ್ಟಿದ ದಲಿತರೊಳಿತಿಗೆ
 ದಾರಿದೀಪವಾಗಲು ಯತ್ನಿಸಿ
 ನಿನ್ನ ನೀನೇ ಬಿಡದ ಬಯಕೆಗೆ
 ಅಬ್ಬರಿಸುತ ನಿಂತೆ ನೀ  ಘರ್ಜಿಸಿl

 ಎಲ್ಲ ಮನುಜರುಗಳೊಂದೇ ಭೂಮಿಯಲಿ
 ಮೇಲು ಕೇಳಿಲ್ಲ ಯಾವ ಮನುಜರಲಿ
 ಜಾತಿ ಮತಗಳ ಬಿಟ್ಟು ನಡೆಯಿರಿ
 ಮನುಕುಲದ ಒಳಿತಿಗೆ ಹರಸಿರಿl

 ಹಂಚಿ ತಿನ್ನುವ ಬದುಕ ಕಲಿಯಿರಿ
 ಮೋಸದ್ರೋಹ ಬಿಟ್ಟು ನಲಿಯಿರಿ
 ಭಾತೃ ಭಾವದ ಬಾಳು ಸವಿಯಿರಿ
 ನೀತಿಯ ಕರ್ಮದ ಕನಸು ಕಾಣಿರಿl

 ದ್ವೇಷಸೂಯೆಯ ಕಿತ್ತು ಹೊಗೆಯಿರಿ
 ಭಾರತೀಯರು ಒಂದೇ ಎನ್ನಿರಿ
 ಭರತಮಾತೆಯ ಪುತ್ರರೆಲ್ಲರೂ
 ಸಂತಸದಿ ಬದುಕಿ ಬಾಳೋಣ ಎಲ್ಲರೂl
- ಶಾರದ ದೇವರಾಜ್, ಎ. ಮಲ್ಲಾಪುರ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...