ಏನು ಆಯಿತು ಈ ಕಾಲಕ್ಕೆ...
ಮನ ಮನಗಳು ಬೇರೆಯದಂಗಾಯಿತ್ತು
ನಾನು ನೀನು ಭಾಯಿ ಭಾಯಿ ಚಾಚಾ ಮಾಮು ಅಂದವರು...
ಇಂದು ನಾ ಹಿಂದೂ ನೀ ಮುಸ್ಲಿಂ ಅಂದಾಯ್ತು....
ಏನು ಆಯಿತು ಈ ಕಾಲಕ್ಕೆ...
ಈ ಮನಸುಗಳಿಗೆ ಬಿರುಕು ಮೂಡಿಸಿದವರು ಯಾರು?...
ಯಾಕಾಯ್ತು ಹೇಗಾಯಿತು ಸೌಹಾರ್ದ ಮನಸ್ಸುಗಳಿಗೆ ನೋವಾಯಿತು...
ಏನು ಆಯಿತು ಈ ಕಾಲಕ್ಕೆ...
ಮತ್ತೆ ಮನ ಮನಗಳು ಬೆರೆಯಬೇಕು...
ಮನದಲ್ಲಿ ನಗುವಿನ ರಂಗೋಲಿ ಮೂಡಬೇಕು...
ನಾನು ಅಣ್ಣಾ ತಮ್ಮ ಅಕ್ಕ ತಂಗಿ ಅಂದು ಬೇರೆಯುವಂತಾಗಬೇಕು...
ಜಗತುಂಬ ಸೌಹಾರ್ದದ ನಗು ಹರಡಬೇಕು....
- ಬಿನಿತ ಜಿ. ಕಲಬುರಗಿ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ