ಬುಧವಾರ, ಮೇ 17, 2023

ಇಂದಿನ ಶಿಕ್ಷಣ ಪದ್ಧತಿ (ಲೇಖನ) - ಮಲ್ಲಿಕಾರ್ಜುನ ಕೊಳ್ಳುರ.

ಬದಲಾಗಬೇಕಿದೆ  ಇಂದಿನ ಶಿಕ್ಷಣ ಪದ್ಧತಿ, ಸಿಗಬೇಕು ಎಲ್ಲರಿಗೂ ಸಮಾನ ಶಿಕ್ಷಣ.

ನಮ್ಮದು ಕಲಬುರಗಿಯ ಚಿಕ್ಕದೊಂದು ಹಳ್ಳಿ ಹಳ್ಳಿಯಲ್ಲಿ ಪ್ರತಿದಿನ ವಿದ್ಯಾರ್ಥಿಗಳು ಶಾಲೆಗೆ ಹೋಗಿ ಬರುವ ದೃಶ್ಯ ನೋಡುವುದೇ ಒಂದು ಚಂದ. ಆದರೆ ನಮ್ಮ ಊರಿನ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ತಕ್ಕಂತೆ ಶಾಲಾ ಕೊಠಡಿಗಳಿದ್ದರು ಕೂಡ ಗುಣಮಟ್ಟದ ಶಿಕ್ಷಣ ಕಲಿಸುವ ಸಿಬ್ಬಂದಿಗಳ ಕೊರತೆ ಇದೆ. ತಾವು ಕಲಿಯದೆ ಇದ್ದರು ತಮ್ಮ ಮಕ್ಕಳು ಕಲಿತು ಒಂದೊಳ್ಳೆ ನೌಕರಿ ಪಡೆದು ನಮ್ಮನ್ನು ನೋಡಿಕೊಳ್ಳುವರೆಂಬ ಭಾವನೆಯಿಂದ ಕಲಿಸುತ್ತಿದ್ದಾರೆ. ವಿಶ್ವಾದ್ಯಾಂತ ಮತ್ತು ಭಾರತದಲ್ಲಿ ಹರಡಿದ ಕರೊನ ಕಾರಣದಿಂದಾಗಿ ಶಾಲೆಗಳು ಮುಚ್ಚಿದವು ಇದರ ನೇರ ಪರಿಣಾಮ ಗ್ರಾಮೀಣ ಪ್ರದೇಶದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಕ ವರ್ಗದ ವಿದ್ಯಾರ್ಥಿಗಳು ಎರಡು ವರ್ಷಗಳ ಕಾಲ ಔಪಚಾರಿಕ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಇವರಲ್ಲಿ  “ಬಹುತೇಕ ಈ ಎಲ್ಲಾ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗೆ" ಸೇರಿದವರಾಗಿದ್ದಾರೆ. ಕರೋನ ಕಾಲದಲ್ಲಿ ವಿದ್ಯಾರ್ಥಿಗಳಿಗೆ ಕೆಲವು ಕಡೆ ಆನ್ಲೈನ್ ತರಗತಿಗಳನ್ನು ತೆಗಕೊಳ್ಳಲಾಗುತ್ತಿತ್ತು ಶ್ರೀಮಂತರ ಮಕ್ಕಳು ಸುಲಭವಾಗಿ ತರಗತಿಗಳನ್ನ ಕೇಳುತ್ತಿದ್ದರೆ ಫೋನ್ ಇಲ್ಲದ ಕಾರಣಕ್ಕೆ ಕ್ಲಾಸಿಗೆ ಹಾಜರಾಗುವುದಕ್ಕೆ ಆಗುತ್ತಿರಲಿಲ್ಲ. ಇದರ ಜಾರಿಗೆ ತಂದ NEP2020 (ಹೊಸ ರಾಷ್ಟ್ರೀಯ ಶಿಕ್ಷಣ ನೀತಿ)ಯು ಆಗಾಗಲೇ ಪಠ್ಯದಲ್ಲಿ ಇದ್ದ ಸ್ವಾಮರಸ್ಯವನ್ನು ಮೂಡಿಸುವಂತಹ ಪಾಠಗಳಿಗೆ ಕಡಿತ ಹಾಕಲಾಯಿತು. ಈ ರಾಷ್ರೀಯ ಶಿಕ್ಷಣನೀತಿಯು  ಕೇಸರಿಕರಣ  ಮಾಡುವ ಹಾಗೆ ರಚಿಸಲಾಗಿದೆ ಎಂದು ಹೇಳಲಾಗುತ್ತಿದೆ. 

ಭಾರತದಲ್ಲಿ ಶೇ. 70ರಷ್ಟು ಮಂದಿ ಹಳ್ಳಿಗಳಲ್ಲೇ ವಾಸವಿದ್ದಾರೆ. ಹಾಗೆ ಗ್ರಾಮೀಣ ಶಾಲೆಗಳು ಇರುವುದು ಹೆಣ್ಣುಮಕ್ಕಳಿಗಾಗಿ ಎಂಬುವುದು ಗಮನಿಸಬೇಕು, ಸಣ್ಣರೈತರ, ಕಾರ್ಮಿಕರ, ಕೆಳ ಹಾಗೂ ದುರ್ಬಲ ವರ್ಗದವರ ಮಕ್ಕಳಿಗಾಗಿ. ಈ ಪೈಕಿ ಬಹುತೇಕ ಮಕ್ಕಳು ಸಾಧಾರಣ ಆರ್ಥಿಕ ಹಿನ್ನೆಲೆಯಿಂದ ಬಂದವರು ಮತ್ತು ಕುಟುಂಬಗಳಲ್ಲಿ ಮೊದಲ ಸಲ ಕಲಿಯುವವರು. ಧ್ವನಿ ಇಲ್ಲದ, ಗ್ರಾಮೀಣ ಓದು, ಬರಹ ಬಾರದ ತಂದೆತಾಯಂದಿರು ಸರ್ಕಾರಿ ಶಾಲೆಗಳು ನೀಡುವ ಶಿಕ್ಷಣದ ಗುಣಮಟ್ಟದ ಬಗ್ಗೆ ತಿಳಿದಿರುವುದಿಲ್ಲ. ದುರದೃಷ್ಟವಶಾತ್ ಗ್ರಾಮೀಣ ಪ್ರದೇಶದ ಶ್ರೀಮಂತ ಕುಟುಂಬಗಳು ನಗರಗಳತ್ತ ವಲಸೆ ಹೋಗುವುದರಿಂದ ಇಂಥ ಕುಟುಂಬಗಳ ಮಕ್ಕಳು ಮಾತ್ರ ಉತ್ತಮ ಗುಣಮಟ್ಟದ ಶಿಕ್ಷಣ ಪಡೆಯುತ್ತಿದ್ದು ಆದರೆ ಕೆಲವು ಸಲ ಶ್ರೀಮಂತ ಕುಳವಂತರು ಒಂದಿಷ್ಟು ಕಡೆ ಖಾಸಗಿ ಶಾಲೆಗಳನ್ನು ಸ್ಥಾಪಿಸಿ ಇರುವಂತಹ ಸ್ವಾಮರಸ್ಯವನ್ನು ಕೆಡುವ ಹಾಗೆ ಮಾಡಲಾಗುತ್ತಿದೆ. ಶಾಲಾ ಶಿಕ್ಷಣವು, ಜೀವನದ ಮೊದಲ 10-14 ವರ್ಷದ ಅವಧಿಯಲ್ಲಿ ಮಕ್ಕಳ ಭವಿಷ್ಯದ ಜೀವನಕ್ಕೆ, ವ್ಯಕ್ತಿತ್ವ ವಿಕಸನಕ್ಕೆ, ಮನೋಪ್ರವೃತ್ತಿ, ಆತ್ಮವಿಶ್ವಾಸ, ಹವ್ಯಾಸ, ಕಲಿಕಾ ಕೌಶಲ ಹಾಗೂ ಸಂವಹನ ಸಾಮರ್ಥ್ಯಕ್ಕೆ ಅಡಿಗಲ್ಲು, ಈ ಹಂತದ ಓದುವ, ಬರೆಯುವ, ಲೆಕ್ಕದ ಮೂಲಭೂತ ಕೌಶಲಗಳು ಉನ್ನತ ಶಿಕ್ಷಣದ ಭದ್ರ ಬುನಾದಿಯಾಗುತ್ತವೆ. ಮನೆ ಹಾಗೂ ಶಾಲೆಗಳ ಆರಂಭಿಕ ಅನುಭವಗಳ ಪರಿಣಾಮಗಳು ಭವಿಷ್ಯದಲ್ಲಿ ಮಗುವಿನ ಸಾಮಾಜಿಕ ಸ್ಥಾನಮಾನವನ್ನು ನಿರ್ಧರಿಸುವಲ್ಲಿ ಸಹಕಾರಿಯಾಗುತ್ತವೆ. ಪೋಷಕರು ಶಿಕ್ಷಣದಲ್ಲಿ ಪಾತ್ರ ವಹಿಸದಿರುವುದು ಹಾಗೂ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ದೊರಕದ ಕಾರಣದಿಂದ, ಮಕ್ಕಳು ಅನಕ್ಷರಸ್ಥರಾಗಿ, ನಿರುದ್ಯೋಗಿಗಳಾಗಿ ಹಾಗೂ ಬಡವರಾಗಿ ರೂಪುಗೊಳ್ಳುತ್ತಾರೆ.

ಹಾಗಾದರೆ ಗ್ರಾಮೀಣ ಶಿಕ್ಷಣ ಏಕೆ ಮುಖ್ಯ?

ಶಿಕ್ಷಣವು ಹೊಸ ಮಾಹಿತಿ ಮತ್ತು ತಂತ್ರಜ್ಞಾನವನ್ನು ಪ್ರವೇಶಿಸಲು ಹೊಸ ಅವಕಾಶಗಳನ್ನು ತೆರೆಯುತ್ತದೆ, ಅದು ವ್ಯಕ್ತಿಯನ್ನು ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತದೆ. ಇದು ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ನೀತಿಗಳು, ಹಕ್ಕುಗಳು, ಕಾನೂನುಗಳನ್ನು ಅರ್ಥಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ, ಅದು ಭವಿಷ್ಯದಲ್ಲಿ ಸಹಾಯಕವಾಗುತ್ತದೆ. ಭಾರತದ ಜನಸಂಖ್ಯೆಯ 65% ಗ್ರಾಮೀಣ ಪ್ರದೇಶಗಳಲ್ಲಿ ನೆಲೆಸಿರುವುದರಿಂದ, ಗ್ರಾಮೀಣ ಶಿಕ್ಷಣಕ್ಕೆ ಒತ್ತು ನೀಡುವುದರಿಂದ ಒಟ್ಟಾರೆ ಆರ್ಥಿಕತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಇದು ಗ್ರಾಮೀಣ ಪ್ರದೇಶಗಳಿಂದ ಉದ್ಯೋಗದ ಸ್ಥಳಗಳಿಗೆ ವಲಸೆ ಹೋಗುವುದನ್ನು ಕಡಿಮೆ ಮಾಡಲು ಮತ್ತು ಹೊಸ ಅವಕಾಶಗಳನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ.

ಶಿಕ್ಷಣ ಯಾರಿಗೆ ದೊರಕುತ್ತಿಲ್ಲ ? 
ಭಾರತವು ಹಿಂದಿನ ಕಾಲದಿಂದಲೂ ಅನೇಕ ರೂಢಿ ಸಂಪ್ರದಾಯಗಳನ್ನು ಆಚರಿಸಿಕೊಂಡು ಬರುತ್ತಿದೆ ಅದರಲ್ಲಿಯೂ ಮುಖ್ಯವಾಗಿ ಜಾತಿ ಪದ್ಧತಿಗಳಂತಹ ಆಚರಣೆಗಳು. ಮೇಲುಪಂಕ್ತಿಯಲ್ಲಿ ಕುಳಿತುಕೊಂಡಂತಹವರು ಕೇಳ ಸ್ತರದಲ್ಲಿ ಇರುವ ಸಮುದಾಯದ ಜನರಿಗೆ ಶಿಕ್ಷಣ ಕೊಡದಿರುವುದು ಒಂದು ಮುಖ್ಯ ಕಾರಣ. ಪಾಠಶಾಲೆಗಳ ಹತ್ತಿರ ಕೂಡ ಸುಳಿಯದಂತೆ ಆಗಿನ ಬ್ರಾಹ್ಮಣಶಾಹಿಗಳು ತಮ್ಮದೇ ಆದ ವ್ಯವಸ್ಥೆಯನ್ನು ರೂಪಿಸಿಕೊಂಡಿದ್ದರು. ಸ್ವಾತಂತ್ರ್ಯ ಪಡೆದು 75ವರ್ಷ ಕಳಿಯುತ್ತಿದ್ದಾಗಲು ಇತಂಹ ಸ್ಥಿತಿಗತಿಗಳು ಇಂದಿಗೂ ಕೂಡ ಬದಲಾಗುತ್ತಿಲ್ಲ. ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಆಗಾಗ ಕೇಳಿ ಬರುತ್ತಿರುವ ಸುದ್ದಿಗಳು ಒಮ್ಮೆಲೇ ಆತಂಕ್ಕೆ ಎಡೇ ಮಾಡಿಕೊಡುತ್ತವೆ.
ಈ ದಿಸೆಯಲ್ಲಿ ಎಲ್ಲರಿಗೂ ಶಿಕ್ಷಣ ಸಿಗುವಂತೆ ನಮ್ಮ ಭಾರತ ಸಂವಿಧಾನದಲ್ಲಿ 6-14 ವರ್ಷದ ಮಕ್ಕಳಿಗೆ ಉಚಿತ ಶಿಕ್ಷಣ ಕೊಡಬೇಕು ಎಂಬ ಕಾನೂನಿದೆ ಅದನ್ನು ಸರಿಯಾದ ಕ್ರಮದಲ್ಲಿ ಜಾರಿ ಗೊಳಿಸಿದರೆ ಎಲ್ಲರೂ ಶಿಕ್ಷಿತರಾಗುವರು.

- ಮಲ್ಲಿಕಾರ್ಜುನ,
ಕಲಬುರಗಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...