ಬುಧವಾರ, ಮೇ 17, 2023

ಸಿನಿಮಾ ಒಂದು ಜನಪದ ಕಲೆ‌ (ಕೃತಿ ವಿಮರ್ಶೆ) - ಕಾಶಿನಾಥ ಮುದ್ದಾಗೋಳ.

ಸಿನಿಮಾ ಒಂದು ಜನಪದ ಕಲೆ ಪುಸ್ತಕ ಬರೆದವರು ಬರಗೂರು ರಾಮಚಂದ್ರಪ್ಪ.
ಈ ಪುಸ್ತಕವು 2005ರಲ್ಲಿ ಮೊದಲ ಮುದ್ರಣ 2016ರಲ್ಲಿ ಎರಡನೇ ಮುದ್ರಣವಾಗಿದೆ. ಪುಸ್ತಕ ಅರ್ಪಣೆ ಶ್ರೀ ಸುರೇಶ್ ಅರಸು ಅವರಿಗೆ ಎಂದು ಆರಂಭಗೊಳ್ಳುವ ಈ ಪುಸ್ತಕವು ಮುನ್ನುಡಿಯ ಬದಲಿಗೆ 'ಯಾತನೆ -ಚಿಂತನೆ'ಎಂದು ಪ್ರಾರಂಭಗೊಂಡು ಕೊನೆಯಲ್ಲಿ ಬರಗೂರು ರಾಮಚಂದ್ರಪ್ಪ ಅವರ ಸಂದರ್ಶನಗಳ ಕೆಲ ಆಯ್ದ ಭಾಗಗಳ ಮೂಲಕ ಮುಗಿಯುತ್ತದೆ.

ಬರಗೂರು ತಮ್ಮ ಜೀವನದಲ್ಲಿ ಸಿನಿಮಾ ಕಡೆ ವಾಲಿದ ಅನುಭವದಿಂದ ತಾವೇ ನಿರ್ಮಾಪಕರು ನಿರ್ದೇಶಕರು ಆಗಿ ಕೆಲಸ ಮಾಡಿರುವ ಹಂತಗಳನ್ನು ಇಲ್ಲಿ ವಿವರಿಸಿದ್ದಾರೆ. ಅವರು ಬರೆದ ಮತ್ತು ಕೆಲವು ಪ್ರಕಟಕೊಂಡ ಲೇಖನಗಳು ಇಲ್ಲಿ ಸಾಕ್ಷಿಪಡಿಸಿದ್ದಾರೆ ಅಥವಾ ಸಂಪಾದಿಸಿದ್ದಾರೆ.
ಪುಸ್ತಕದ ಹೆಸರು 'ಸಿನಿಮಾ ಒಂದು ಜನಪದ ಕಲೆ 'ಎನ್ನುವುದು ನೋಡಿದಾಗ ವಯಕ್ತಿಕವಾಗಿ ನನಗೆ ತುಂಬಾ ಆಶ್ಚರ್ಯವನಿಸಿತು ಮತ್ತು ಅಷ್ಟೇ ಕುತೂಹಲವು ಇತ್ತು. ಇದೇನಿದು ಹೊಸ ತರಹದ ಶೀರ್ಷಿಕೆ ಎನಿಸಿತು. ಮೊದಲನೆಯ ಭಾಗದಲ್ಲಿ ಸಿನಿಮ ಒಂದು ಜನಪದ ಕಲೆ ಜನಪದ ಮತ್ತು ಜಾನಪದದ ವ್ಯತ್ಯಾಸವನ್ನು ವಿವರಿಸುತ್ತಾ, ಸಾಹಿತ್ಯ ಮತ್ತು ಸಿನಿಮಾ ಒಂದಕ್ಕೊಂದು ಹೇಗೆ ಬಿಗಿದುಕೊಂಡಿವೆ ಮತ್ತು ಅವು ಎಷ್ಟರಮಟ್ಟಿಗೆ ಅವಲಂಬಿತವಾದವು ಅದನ್ನ ಅರಿತುಕೊಂಡು ಬರಗೂರರು ಮಾಡಿದಂತಹ ಕಾರ್ಯಗಳ ಬಗ್ಗೆ ಸಾಹಿತ್ಯದ ಜೊತೆ ಜೊತೆಗೆ ಸಿನಿಮಾ ಕಟ್ಟುವ ಪರಿಯನ್ನ ಇಲ್ಲಿ ರಾಮಚಂದ್ರಪ್ಪನವರು ವಿವರಿಸುವ ರೀತಿ ತುಂಬಾ ಸ್ವಾರಸ್ಯಕರವಾದದ್ದು.
ಭಾಷೆ, ತಂತ್ರಜ್ಞಾನ ಮತ್ತು ಸಾಹಿತ್ಯ ಜಟಿಲಗೊಂಡ ಕೊಂಡಿಯಂತೆ ಬೆಸೆದುಗೊಂಡಿವೆ. ಒಂದು ಚಲನಚಿತ್ರಕ್ಕೆ ಈ ಮೂರರ ಮೇಲೆ ಎಷ್ಟು ಸಾಧ್ಯವೊ ಅಷ್ಟರಮಟ್ಟಿಗೆ ಕೆಲಸ ಮಾಡಬೇಕಾದ ಅಗತ್ಯತೆ ಮತ್ತು ಅನಿವಾರ್ಯತೆಗಳು ಕಾಣಬಹುದು.

ಸಿನಿಮಾ ಒಂದು ಕಲೋದ್ಯಮ ಎನ್ನುವುದನ್ನು ವಿವರಿಸುತ್ತಾ ಸಿನಿಮಾ ಜನಪದ ಎಂದು ಒಪ್ಪದ ಒಂದಿಷ್ಟು ಉದ್ಯಮಿಗಳಿಗೆ ಮತ್ತು ಬಂಡವಾಳಿಗರಿಗೆ ಉತ್ತರವಾಗಿ ಸಿನಿಮಾ ಒಂದು ಜನಪದ ಅದು ಕಲೆ ಜೊತೆಗೆ ಕಲೋದ್ಯಮ ಎಂದು ಹೇಳಿದ್ದಾರೆ.
ಒಬ್ಬ ವ್ಯಕ್ತಿಯನ್ನ ಸಿನಿಮಾ ಕೇವಲ ಆರ್ಥಿಕವಾಗಿ ಅಷ್ಟೇ ಅಲ್ಲದೆ ಮಾನಸಿಕವಾಗಿಯೂ ಗಟ್ಟಿಗೊಳಿಸುವ ಸಾಧನವೆಂದು ವಿವರಿಸುತ್ತಾರೆ. ಈ ಪುಸ್ತಕ ಓದುತ್ತಾ ಹೋದಂತೆ ನನಗೂ ಇದು ಸರಿ ಅನಿಸಿತು. ಕನ್ನಡ ಸಾಹಿತ್ಯ ಸಿನಿಮಾ ಉಪಧಾರೆ ಈ ಭಾಗದಲ್ಲಿ ಕನ್ನಡ ಸಾಹಿತ್ಯದ ಮತ್ತು ಸಿನಿಮಾ ಪರಂಪರೆ ಕುರಿತು ವಿವರಿಸುತ್ತಾ ಸರ್ಕಾರಗಳಿಂದ ಸಿನಿಮಾಗಳಿಗೆ ಸಿಗುವ ಸೌಲಭ್ಯಗಳು, ಸಬ್ಸಿಡಿಗಳು ಹಾಗೂ ಪರಭಾಷೆ ಸಿನಿಮಾಕು ಸ್ವಮೇಕ್ ಮತ್ತು ರಿಮೇಕ್ ಚಲನಚಿತ್ರಗಳು ಇವುಗಳ ಪರಿಣಾಮದಿಂದ ಕನ್ನಡ ಚಿತ್ರರಂಗದಲಾಗುವ ಪ್ರಭಾವ ಕುರಿತು ಮಾತನಾಡುತ್ತದೆ. ಅಷ್ಟೇ ಅಲ್ಲದೆ ಮುಂದುವರೆದು ಸಿನಿಮಾದಲ್ಲಿ ಜಾತಿ, ವರ್ಗ ಸಮುದಾಯಗಳ ಬಗ್ಗೆ ಅಲ್ಲಿ ಕಟ್ಟುಕೊಡಲಾದ ವಿಷಯಗಳ ಬಗ್ಗೆ ವಿವರಿಸುತ್ತಾರೆ. ಚಿತ್ರರಂಗದಲ್ಲಿ ಆಸಕ್ತಿ ಅಭಿರುಚಿ ಗಿಂತ ಮತ್ತು ಆರ್ಥಿಕ ಬಲಕ್ಕಿಂತ ಹೆಚ್ಚಾಗುವ ಜಾತಿ, ವರ್ಗ, ಸಮುದಾಯಗಳ ಪರಿಣಾಮ ಮತ್ತು ಇವುಗಳು ಉಂಟು ಮಾಡುವ ಅಳುಕುಗಳ ಬಗ್ಗೆ ತಮ್ಮ ಸಂದರ್ಶನದಲ್ಲಿಯೂ ಮತ್ತು ಈ ಭಾಗದಲ್ಲಿಯೂ ಹೇಳಹರಟ್ಟಿದ್ದಾರೆ. ಕನ್ನಡ ಮತ್ತು ಕರ್ನಾಟಕದಂತಹ ಸಂದರ್ಭದಲ್ಲಿ ಸಮೂಹ ಮಾಧ್ಯಮ ಸಂಸ್ಕೃತಿ ಮತ್ತು ಮಹಿಳೆ, ಪ್ರದರ್ಶಕನ ಕಲೆ ಸ್ವರೂಪ, ದೂರದರ್ಶನ ಸಂಸ್ಕೃತಿ, ಕನ್ನಡ ಪರ ಸಿನಿಮಾ ನೀತಿಗೆ ಮೂಲ ಮಾತು, ಕನ್ನಡ ಚಿತ್ರರಂಗದ ಬಿಕ್ಕಟ್ಟು, ಕನ್ನಡ ಕೇಂದ್ರೀತ ಸಿನಿಮಾ ನೀತಿ, ರೀಮೇಕ್ ರಾಜಕೀಯ, ಡಾ. ರಾಜ್ ಕುಮಾರ್ ರೂಪದೊಳಗಿನ ರೂಪಕ, ಹೀಗೆ ಮುಂದುವರೆದು ಅವರ ನಿರ್ದೇಶನದಲ್ಲಿ ಮೂಡಿ ಬಂದ ತಾಯಿ, ಕೋಟೆ, ಒಂದು ಊರಿನ ಕಥೆ ಇವುಗಳ ಬಗ್ಗೆ ಮತ್ತು ಈ ಚಿತ್ರಗಳಿಗೆ ದೊರೆತ ಪ್ರಶಸ್ತಿ ಹಾಗೂ ಅವರ ನಿರ್ದೇಶನಕ್ಕೆ ದೊರೆತ ರಾಷ್ಟ್ರೀಯ ಪ್ರಶಸ್ತಿ ಅವುಗಳ ಬಗ್ಗೆ ತಮ್ಮ ಅನುಭವ ಮತ್ತು ಅಭಿಪ್ರಾಯವನ್ನು ಇಲ್ಲಿ ವ್ಯಕ್ತಪಡಿಸಿದ್ದಾರೆ. ಬರಗೂರ ರಾಮಚಂದ್ರಪ್ಪ ಮತ್ತು ಕನ್ನಡ ಚಿತ್ರರಂಗದ ನಾಯಕ ನಟ ಡಾಕ್ಟರ್ ರಾಜಕುಮಾರ್ ಅವರ ಒಡನಾಟದ ಬಗ್ಗೆ ಮತ್ತು ರಾಜಕುಮಾರ ಅವರ ವ್ಯಕ್ತಿತ್ವ ಸರಳತೆ ಅವರ ಆದರ್ಶ ಗಳನ್ನು ಮನ ಮುಟ್ಟುವಂತೆ ಇಲ್ಲಿ ರಾಮಚಂದ್ರಪ್ಪನವರು ಅಕ್ಷರ ರೂಪಕ್ಕೆ ಇಳಿಸಿದ್ದಾರೆ.


ಚಲನಚಿತ್ರರಂಗದಲ್ಲಿ ಚಿತ್ರ ಪ್ರಶಸ್ತಿ ನೀಡುವ ಸಂದರ್ಭದಲ್ಲಿ ಮತ್ತು ಅಲ್ಲಿ ನಡೆಯುವ ನಿಯಮ ಉಲ್ಲಂಘನೆ ತಾರತಮ್ಯ ಇವುಗಳ ಕುರಿತು ಸಂದರ್ಶನಗಳಲ್ಲಿ ಚರ್ಚಿಸಿದ್ದಾರೆ. ಮತ್ತು ಅವರು ನ್ಯಾಯಕ್ಕಾಗಿ ಹೋರಾಡಿದ ಹಾಗೂ ಕೋರ್ಟ್ ಗಳಿಗೆ ಅಲೆದ ಸಂದರ್ಭಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಕೊನೆಯದಾಗಿ ಖಾಸಗೀಕರಣ, ಜಾಗತೀಕರಣ ಮತ್ತು ಸಿನಿಮಾ ಇವುಗಳ ಬಗೆಯು ವಿವರಿಸಿದ್ದಾರೆ ಖಾಸಗೀಕರಣ ಮತ್ತು ಜಾಗತೀಕರಣ ಇವುಗಳನ್ನು ಭಿನ್ನ ನೆಲೆಯಲ್ಲಿ ನೋಡಬೇಕು ಎನ್ನುವ ನಿಲುವು ಅಭಿಪ್ರಾಯ ಅವರದು. 

ತಮ್ಮ ಸಂದರ್ಶನಗಳಲ್ಲಿ ಚಿತ್ರದ ಯಶಸ್ಸಿಗೆ ಬೇಕಾದ ಗಟ್ಟಿ ಕಥೆ, ಹೆಚ್ಚು ಜನ ಆಕರ್ಷಕ ಉತ್ತಮ ಚಿತ್ರ ಬೇಕು,  ಪ್ರಶಸ್ತಿಗೆ ಮಾನದಂಡ ಯಾವುದು?, ಹೊಸ ರೀತಿ ಚಿತ್ರಗಳ ವಿತರಣೆಗೆ ಹೊಸ ವ್ಯವಸ್ಥೆ, ನನ್ನ ಸೂತ್ರ ನಾನೇ ಮೀರುವುದು ಪ್ರಯೋಗ, ಕಲೋದ್ಯಮವಾಗಿರುವ ಸಿನಿಮಾ, ಕಲಾತ್ಮಕ ಚಿತ್ರಕೂಡ ಕಮರ್ಷಿಯಲ್ ಚಿತ್ರ, ಪ್ರಶಸ್ತಿಯ ಸಂತಸ, experimental and  innovative cinema ಹೀಗೆ ಒಂಬತ್ತು ಸಂದರ್ಶನಗಳಲ್ಲಿ ತಮ್ಮ ನಿರ್ದೇಶನದ ಅನುಭವ ಮತ್ತು ಅವರು ಕಂಡ ಕನ್ನಡ ಚಿತ್ರರಂಗದ ಬಗ್ಗೆ ಸಂಕ್ಷಿಪ್ತವಾಗಿ ಮಾತನಾಡಿದ್ದಾರೆ ಅವರ ಸಂದರ್ಶನಗಳು ಪ್ರಜಾವಾಣಿ, ಈ ಭಾನುವಾರ, ವಿಜಯ ಚಿತ್ರ, ಪ್ರಜಾಪ್ರಭುತ್ವ ದಂತಹ ವಾರಪತ್ರಿಕೆಯಲ್ಲಿ ಪ್ರಕಟಗೊಂಡಿವೆ. ಬರಗೂರಂತಹ ಸಾಹಿತಿಯೊಬ್ಬರು ಸಿನಿಮಾ ಮತ್ತು ಕನ್ನಡ ಚಿತ್ರರಂಗದ ಬಗ್ಗೆ ವಿಶೇಷ ಬಲವು ತೋರಿಸಿ ಅಲ್ಲಿನ ವ್ಯವಸ್ಥೆ, ಅಳುಕು ಹೊಳುಕುಗಳ ಬಗ್ಗೆ ಚಿತ್ರಿಸಿರುವುದು ಮತ್ತು ಅವರ ಅನುಭವ ಸಂಶೋಧನೆಯಲ್ಲಿ ಮೋಡಿದ ಈ ಪುಸ್ತಕ ಓದುಗರಿಗೆ ಮತ್ತು ಕಲೆ, ಸಿನಿಮಾ, ಸಾಹಿತ್ಯ ಪ್ರಿಯರಿಗೆ ಸಹಾಯವಾಗುವುದು ಸತ್ಯ.

- ಕಾಶಿನಾಥ ಮುದ್ದಾಗೋಳ, ನಾಗೂರು ಕಲಬುರ್ಗಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...