ಬಾಗಿಲ ಬಳಿ ಬಿಡಿಸಿದ ರಂಗೋಲಿ
ಗಾಳಿಗೆ ಹಾರುಬೂದಿಯಾಗುವ ಮುನ್ನ
ಕಟ್ಟಿದ ತೋರಣ ಒಣಗಿ ಮನೆಗೆ
ಅಪಶಕುನವಾಗುವ ಮುನ್ನ
ಹೊಸಿಲು ದಾಟಿಬಿಡು ನೀನು...
ನೀ ಬೆಳಗಿಸಲು ಎಣ್ಣೆ ಸುರಿದು
ಬತ್ತಿ ಹೊಸೆದು ಸಿಂಗರಿಸಿದ
ದೀಪ ಬಣ್ಣ ಕಳೆದು ಕೊಳ್ಳುವ ಮುನ್ನ
ಬಾಳಿನ ಜ್ಯೋತಿಯಾಗಲು
ಬಿಸಿಯುಸಿರ ತಾಕಿಸಿಬಿಡು ನೀನು...
ಬಾಳ ನೊಗಕೆ ಭಾರ ನನಗಿರಲಿ
ಮಡಿಲು ತುಂಬಿ ಹರಿಷಿಣದ ಸಿಂಗಾರ
ನಿನಗೆ ದಿನವೂ ಉತ್ಸವಾಗುತಿರಲಿ
ಅರ್ಪಣೆಯಲ್ಲ ಸ್ವಾರ್ಥ ನನ್ನದು
ಪ್ರೀತಿಯ ತದ್ಭವವೇ ನೀನಲ್ಲವೇ..!
ಚಿಕ್ಕಿ ಚಂದ್ರಮರ ಹಂಗೇತಕೆ
ಹೊನ್ನಗದ್ದೆಯಲಿ ಹಾಲ ಚೆಲ್ಲಿ
ಹೂ ಹಾಸಿ ರಾಣಿ ಮಾಡುವೆ
ಚಂದ್ರ ಅಸೂಯೆ ಪಡುವ ಮುನ್ನ
ಕಿರುಬೆರಳ ಹಿಡಿದು ಉಸಿರ ನೀಡು ನೀನು...!
- ರಾಯಾ ಎಸ್. ಕೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ