ಮಂಗಳವಾರ, ಮೇ 2, 2023

ಹಾಯ್ಕುಗಳು - ಶಾರದ ದೇವರಾಜ್, ಎ. ಮಲ್ಲಾಪುರ.

1.  ಕಿರು ನೋಟದ
 ಸೆಳೆತ ಮನವನು
 ಕದಡುತಿದೆ.

2.  ಓರೆಗಣ್ಣಿನ
 ಚೆಲುವೆಯ ನೋಟಕೆ
 ನಾ ಮನಸೋತೆ.

3.  ಕಣ್ಣಂಚಿನೋಟ
 ನೂರೊಂದು ಪಾಠ ಹೇಳಿ
 ಮರೆಯಾಗಿದೆ.

4.  ಕಣ್ಣಂಚಿನಲ್ಲಿ 
ಮಿಂಚಿನಂಥ ನೋಟವು
 ಹೊಳೆಯುತಿದೆ.

5.  ಸಂಕ್ಷಿಪ್ತ ನೋಟ
 ಸಮೃದ್ಧ ಭಾವದಲಿ
 ಸ್ವಷ್ಟತೆಯಿದೆ.
  
6.   ಸಾತ್ವಿಕ ನೋಟ   
 ಶುದ್ಧ ಭಾವನೆಯಲ್ಲಿ
 ಸಮೃದ್ಧಿಸಿದೆ.

7.   ಕಣ್ಣಿನ ನೋಟ
 ಕಲೆತಾಗ ಮೂಡಿತು
 ಪ್ರೇಮಾನುರಾಗ.

- ಶಾರದ ದೇವರಾಜ್, ಎ. ಮಲ್ಲಾಪುರ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...