ಗುರುವಾರ, ಮೇ 11, 2023

ಗಜಲ್ - ಸೂಗಮ್ಮ ಡಿ ಪಾಟೀಲ್.

ಮನೆಗಳ ಸೇರಿಸಿ ಮನಗಳ ಕೂಡಿಸಿ ಸಪ್ತಪದಿಯಡೆ ನಡೆದೆ ನೀನು
ಮನಸಿನ ಭಾವಕೆ ಜೀವ ತುಂಬುತಲಿ ಹೃದಯವನೇ ಪಡೆದೆ ನೀನು

ವದನವ ನೋಡುತ  ಕಿರುನಗೆ ಬೀರುತ ಕಂಗಳ ಬೆಳಕಲ್ಲೇ ನಿಂದೆ ಏನು
ಕದನದ ಮನೆಯಲಿ ಕನಸನು ಅರಳಿಸಿ ಸಂಭ್ರಮದ ಮಾತು ನುಡಿದೆ ನೀನು

ಏಳು ಹೆಜ್ಜೆಗಳ ಇಡಿಸುತಲಿ ಸ್ವರ್ಗವನ್ನೆ ಧರೆಗೆ ತಂದಿರುವೆ ಏನು
ಹೇಳಿದಂತೆಯ ಜೀವನ ನಡೆಸಲು ಸಂಗಾತಿ ಪಟ್ಟವ ನೀಡಿದೆ ನೀನು

ಚೆಲುವಿನ ಮೊಗದ ಸುಂದರ ಪಟವನು ನಯನದಲ್ಲೇ ಸೆರೆಹಿಡಿದೆ ಏನು
ಹಲವು ಆಸೆಗಳ ಅವಿತಿಟ್ಟು ನನಗಾಗಿ ಎಲ್ಲವು ತ್ಯಾಗ ಮಾಡಿದೆ ನೀನು

ಹರನೆ ಬೆಸೆದಿರುವ ಮಧುರ ಬಂಧವಿದು ಸುಗಮಳ ಪತಿಯಾಗಿರುವೆ ಇಂದು
ಸಿರಿತನ ಬಡತನ ಯಾವುದೇ ಬರಲಿ ಪ್ರತಿಕ್ಷಣವು ಸತಿಗಾಗಿ ಮಿಡಿದೆ ನೀನು

- ಸೂಗಮ್ಮ ಡಿ ಪಾಟೀಲ್,
ವಿಜಯಪುರ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...