ಸೋಮವಾರ, ಮೇ 22, 2023

ಶಿಕ್ಷಣ ಮತ್ತು ಆರೋಗ್ಯ ಖಾಸಗಿಕರಣವಾದರೆ ಆಗುವ ದುಷ್ಪರಿಣಾಮಗಳು...! (ಲೇಖನ) - ಬಸವರಾಜ್ ಎಚ್. ಹೊಗರನಾಳ.

ಭಾರತದಲ್ಲಿ ಅನಾಧಿಕಾಲದಿಂದಲೂ ನಡೆದುಕೊಂಡು ಬದಿರುವ ಶಿಕ್ಷಣ ಎಂದರೆ ಅದು ಗುರುಕುಲ ಶಿಕ್ಷಣವಾಗಿದೆ. ಗುರುಕುಲ ಶಿಕ್ಷಣ ವ್ಯವಸ್ಥೆಯು ಜಗತ್ತಿನ ಅತ್ಯಂತ ಪುರಾತನ ಶಿಕ್ಷಣ ವ್ಯವಸ್ಥೆಯಾಗಿದೆ. ಆಗಿನ ಶಿಕ್ಷಣ ವ್ಯವಸ್ಥೆಗೂ ಇಂದಿನ ಶಿಕ್ಷಣಕ್ಕೂ ತುಂಬಾ ವ್ಯತ್ಯಾಸವನ್ನು ಇಂದಿನ ಶಿಕ್ಷಣ ವ್ಯವಸ್ಥೆಯು ತಂದಿದೆ. ಶಿಕ್ಷಣವೂ ವ್ಯಕ್ತಿಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಮತ್ತು ಜ್ಞಾನವುಳ್ಳ ನಾಗರಿಕರನ್ನಾಗಿ ಶಿಕ್ಷಣ ಮಾಡುತ್ತದೆ. ಶಿಕ್ಷಣವೂ ಜಗತ್ತನ್ನು ಬದಲಾಯಿಸುವ ಪ್ರಮುಖ ಪಾತ್ರವನ್ನು ವಹಿಸುತ್ತದೆ.ಆಗಿನ ಗುರುಕುಲ ಶಿಕ್ಷಣವೂ ಇಂದು ಸರಕಾರಿ ಶಿಕ್ಷಣವಾಗಿ ಎಲ್ಲರಿಗೂ ಮಾರ್ಗಸೂಚಿಯಾಗಿ ಹೊರಹೋಮ್ಮಿದೆ ಇಂತಹಾ ವ್ಯವಸ್ಥೆಯಲ್ಲಿ ಭಾರತ ದೇಶದಲ್ಲಿ ಶಿಕ್ಷಣವು ಖಾಸಗಿಕಾರಣವಾದರೆ ದೇಶದ ಪರಿಸ್ಥಿತಿ ಏನಾಗಬಹುದು ಹಾಗೂ ಆಗಿನ ಅರೋಗ್ಯ ವ್ಯವಸ್ಥೆಯು ಆಯುರ್ವೇದ ಗಿಡಮೂಲಿಕೆಯಿಂದ ಕೊಡಿತ್ತು ಯಾವುದೇ ಕಾಯಿಲೆಯಾಗಲಿ ಅದು ಆಯರ್ವೇದದಿಂದ ನಿವಾರಣೆಯಗುತ್ತಿತ್ತು. ಆಗಿನ ಅರೋಗ್ಯವು ಇಂದು ಸರ್ಕಾರಿ ಆರೋಗ್ಯವಾಗಿ ಹೊರಬಂದಿದೆ. ಅರೋಗ್ಯವು ಹಾಗೂ ಶಿಕ್ಷಣವೂ ಖಾಸಗಿಕಾರಣ ಆದರೆ ದೇಶದಲ್ಲಿ ಸಾಮಾನ್ಯ ಜನರ ಪರಿಸ್ಥಿತಿ ಏನಾಗಬಹುದೆಂದು ಯೋಚಿಸೋಣ.

           ಹಿಂದಿನ ಕಾಲದಲ್ಲಿ ಯಾರು ಶಿಕ್ಷಣದ ಕಡೆ ಚಿಂತನೆ ಮಾಡುತ್ತಿರಲಿಲ್ಲ. ಈಗ ಶಿಕ್ಷಣವೇ ಎಲ್ಲರ ಬದುಕಿನ ರೂಪವಾಗಿದೆ. ಈಗಿನ ಯುಗದಲ್ಲಿ ಶಿಕ್ಷಣವೇ ಎಲ್ಲಕ್ಕಿಂತ ಮುಖ್ಯವಾದ ಅಂಶವಾಗಿದೆ. ಶಿಕ್ಷಣ ಎಂಬುವುದು ಹಲವಾರು ಹಂತದಲ್ಲಿಯೇ ವಿಂಗಡಗೊಂಡಿದೆ. ಶಿಕ್ಷಣದ ಮೂಲ ಸರ್ಕಾರಿ ಶಾಲೆಗಳ ಸರ್ಕಾರಿ ಶಿಕ್ಷಣ, ಹಾಗೂ ಇದು ಖಾಸಗಿಯಾದರೆ ದೇಶದ ಹಲವಾರು ಜನರ ಮೇಲೆ ದುಷ್ಪರಿಣಾಮ ಬೀಳಬಹುದು. ಶಿಕ್ಷಣ ಖಾಸಗಿಕರಣ ಮತ್ತು ವ್ಯಾಪಾರಿಕರಣ ಒಂದು ಬಹುದೊಡ್ಡ ಹಾನಿಕಾರಕ ಪರಿಣಾಮವೆಂದರೆ ಅದು ಶಿಕ್ಷಣ ಸಾರ್ವತ್ರಿಕರಣದ ಮಹತ್ವವನ್ನು ಕಡೆಗಣಿಸುತ್ತದೆ. ಖಾಸಗಿ ಶಿಕ್ಷಣವೂ ಅವಕಾಶವಂಚಿತರಿಗೆ ಮತ್ತು ಬಡವರಿಗೆ ಅದರಲ್ಲೂ ವಿಶೇಷವಾಗಿ ಯಾರಿಗೆ ಹೆಚ್ಚಿನ ಶಿಕ್ಷಣದ ಅವಶ್ಯಕತೆ ಇರುತ್ತದೆಯೋ ಅವರಿಗೆ ಶಿಕ್ಷಣವನ್ನು ನಿರಾಕರಿಸುತ್ತದೆ. ಖಾಸಗಿ ಸಂಸ್ಥೆಗಳಲ್ಲಿ ಪ್ರವೇಶವು ಅರ್ಹತೆ ಅಥವಾ ಸಾಮರ್ಥ್ಯವನ್ನು ಅವಲಂಬಿಸದೆ, ಯಾರು ಹೆಚ್ಚಿನ ಹಣ ನೀಡುವ ಸಾಮರ್ಥ್ಯವಿದೆಯೋ ಅಂತವರಿಗೆ ಆ ಖಾಸಗಿ ಶಿಕ್ಷಣ ದೊರಕುತ್ತದೆ.
     ಭಾರತ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿ 1986 ಪ್ಯಾರ 2.2 ರ ಅನ್ವಯ ಶಿಕ್ಷಣವು ಮಹತ್ವದ ಪಾತ್ರವನ್ನು ಹೊಂದಿದೆ. ಈ ರೀತಿಯಾಗಿ ನಮ್ಮ ಸಂವಿಧಾನದಲ್ಲಿ ಉಲ್ಲೇಖಗೊಂಡಿರುವ ಸಂವಿಧಾನದ 45 ನೇ ಅನುಚ್ಚೆದದ ಪ್ರಕಾರ ಈ ದೇಶದಲ್ಲಿ ಹುಟ್ಟಿದ ಪ್ರತಿಯೊಂದು ಮಗುವಿಗೂ ಉಚಿತ ಮತ್ತು ಕಡ್ಡಾಯ ಗುಣಾತ್ಮಕ ಶಿಕ್ಷಣವನ್ನು ನೀಡುವುದು ಸಾರ್ವಜನಿಕ ಶಿಕ್ಷಣ ಇಲಾಖೆಯ ಪಟ್ಟಬದ್ಧ ಜವಾಬ್ದಾರಿಯಾಗಿದೆ. ಶಿಕ್ಷಣವನ್ನು ಸಂಪೂರ್ಣವಾಗಿ ಖಾಸಗಿಕಾರಣಗೊಳಿಸಿದರೆ ಸಂವಿಧಾನದ 45 ನೇಯ ಅನುಚ್ಚೆವನ್ನು ಅಲ್ಲಗಳೆದಂತಾಗುವುದು. ಆದ್ದರಿಂದ ದೇಶದಲ್ಲಿರುವ ಬಡ ಮತ್ತು ಗ್ರಾಮೀಣ ಸಮುದಾಯದಲ್ಲಿರುವ ಮಕ್ಕಳಿಗೆ ಶಿಕ್ಷಣವನ್ನು ಪಡೆಯಲು ಅವರ ಮೇಲೆ ದುಷ್ಪರಿಣಾಮವಾಗಬಹುದು. ಶಿಕ್ಷಣವನ್ನು ಖಾಸಗಿಕರಣ ಮಾಡಿದರೆ ವ್ಯಾತೀರಿಕ್ತ ಪರಿಣಾಮಬೀರಿ ಶಿಕ್ಷಣ ಹಾಗೂ ಬಡ ವಿದ್ಯಾರ್ಥಿಗಳ ಕಲಿಕಾ ಬದುಕಿಗೆ ನಷ್ಟವಾಗಬಹುದು.
   ಇಂದಿನ ದಿನಮಾನಗಳಲ್ಲಿ ಶಿಕ್ಷಣದ ಮೌಲ್ಯ ಹಾಗೂ ವ್ಯವಸ್ಥೆ ತುಂಬಾ ಹದೆಗೆಟ್ಟಿದೆ. ಸರ್ಕಾರಿ ಶಾಲೆಗಳಿಗೆ ಪ್ರವೇಶ ಪಡೆಯದೆ ಬರಿ ಖಾಸಗಿ ಶಾಲೆಗಳತ್ತ ಮುಖಮಾಡಿ ಅವಲಂಬಿತವಾದರೇ ಇಂತಹ ಸಂದರ್ಭದಲ್ಲೂ ಸರ್ಕಾರವೂ ಕೂಡ ಸರ್ಕಾರಿ ಶಾಲೆಗಳ ಮೇಲೆ ನಂಬಿಕೆ ಇರದೆ ಜನರಿಗೆ ಸಾಥ್ ನೀಡಿ ಸರ್ಕಾರಿ ಶಾಲೆಗಳನ್ನು ಖಾಸಗಿಕರಣ ಮಾಡಲು ಹೊರಟ್ಟಿದ್ದರಿಂದ ಅದೆಷ್ಟೋ ನಿರ್ಗತಿಕ ಮಕ್ಕಳಿಗೆ, ಬಡಮಕ್ಕಳಿಗೆ ತೊಂದರೆಯಾಗುತ್ತದೆ. ಬದುಕಲು ಕಷ್ಟ ಸಾಧ್ಯವಾಗುತ್ತದೆ. ಅವರು ಶಿಕ್ಷಣದಿಂದ ವಂಚಿತರಗುತ್ತಾರೆ. ಎಂಬಂತಹ ಇತ್ಯಾದಿ ಅಂಶಗಳನ್ನು ಸರ್ಕಾರ ಮನಗಂಡು ಸರ್ಕಾರಿ ಶಾಲೆಗಳು, ಸರ್ಕಾರಿ ಶಾಲೆಗಳಾಗಿಯೇ ಉಳಿಯಲಿ, ಶಿಕ್ಷಣದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಯಾವುದೇ ಬದಲಾವಣೆಗಳನ್ನು ತರುವುದಿಲ್ಲ ತಂದರೆ ಅನೇಕ ಬಡಮಕ್ಕಳಿಗೆ ಶಿಕ್ಷಣ ದೊರಕುವುದು ಕಷ್ಟ ಎನ್ನುವಂತಹ ಅಂಶಗಳು ಸರ್ಕಾರದ ಗಮನಕ್ಕೆ ಬರಬೇಕಿದೆ ಅದು ಹೊರತು ಸಂವಿಧಾನದ ಅನುಚ್ಛೆದ ಉಲ್ಲಂಘನೆಯಗುವುದು ಖಂಡಿತಾಗಿದೆ. ಹಾಗೂ ಈ ಉಲ್ಲಂಘನೆ  ಇಂದ ಅದೆಷ್ಟೋ ಶಿಕ್ಷಣ ವ್ಯವಸ್ಥೆ ಹದಗೆಡಬಹುದು ಮತ್ತು ಅದೆಷ್ಟೋ ಬಡಮಕ್ಕಳ ಶಿಕ್ಷಣ ಕುಂಠಿತಗೊಂಡು ಬದುಕು ನರಕವಾಗುವುದರಲ್ಲಿ ಸಂದೇಶವಿಲ್ಲ. ಈ ಕಾರಣದಿಂದಾಗಿ ಅಂದರೆ ಖಾಸಗಿಕರಣದಿಂದ ನಿರ್ಗತಿಕ ಕುಟುಂಬಗಳು ಬೇರೆ - ಬೇರೆ ದೇಶಕ್ಕೋ, ರಾಜ್ಯಕ್ಕೋ, ಜಿಲ್ಲೆಗಳು ಸಿಕ್ಕ -ಸಿಕ್ಕ ಕೆಲಸಗಳಿಗೆ ಹೋಗಿ ಬಾಲಕಾರ್ಮಿಕ ಪದ್ಧತಿ ಮತ್ತೆ ಜಾರಿಯಾಗಿ ಅನಕ್ಷರತೆಯ ಬದುಕಲ್ಲಿ ಬದುಕುವಂತಹ ಸಂಭವ ಎದುರಾಗುತ್ತದೆ.
• ಬಾಲ ಕಾರ್ಮಿಕ ಪದ್ಧತಿ /ನೀತಿ :- ಶಿಕ್ಷಣವನ್ನು ಖಾಸಗಿಕರಣಗೊಳಿಸಿದರೆ, ಅದೆಷ್ಟೋ ಬಡ, ನಿರ್ಗತಿಕರ ಮಕ್ಕಳು, ಶಿಕ್ಷಣವನ್ನು ಪಡೆಯದೆ ಸಿಕ್ಕ -ಸಿಕ್ಕ ಕಾರ್ಖಾನೆ, ಸಂಸ್ಥೆಗಳಲ್ಲಿ ಕೆಲಸಕ್ಕೆ ಸೇರಿ ತಮ್ಮ ಉಜ್ವಲವಾದ ಬದುಕನ್ನು ಚಿಕ್ಕ ವಯಸ್ಸಿನಲ್ಲೋ ಹಾಳುಮಾಡಿಕೊಳ್ಳಲು ಈ ಖಾಸಗೀಕರಣ ಶಿಕ್ಷಣ ನೀತಿಯು ಪ್ರೇರಕವಾಗಿದೆ ಮತ್ತು ಇಂತಹ ಅನಿಷ್ಠ ಪದ್ಧತಿಗಳನ್ನು ತಪ್ಪಿಸಲೆಂದೇ ಸರ್ಕಾರ ಬಾಲ ಕಾರ್ಮಿಕ ಕಾನೂನು /ನೀತಿಯನ್ನು ಜಾರಿಗೆ ತಂದಿದ್ದು ಅಂತಹ ನೀತಿಯನ್ನೇ ಉಲ್ಲಂಘಿಸಿದಂತಾಗುತ್ತದೆ. ಶಿಕ್ಷಣ ಸಿಗದೆ ಖಾಸಗಿಕಾರಣಕ್ಕೆ ಓದಿಸಲು ಹಣವಿಲ್ಲದ ಕಾರಣದಿಂದ ಬಡಜನರ ಮಕ್ಕಳನ್ನು ಶಾಲೆ ಬಿಡಿಸಿ ಬಾಲ್ಯವಿವಾಹಗಳು, ಬಾಲಕಾರ್ಮಿಕರು ಇತ್ಯಾದಿಗಳು ಈ ಖಾಸಗಿಕಾರಣ ಬರುವುದರಿಂದ ಇವುಗಳಿಗೆ ಸಾಮಾನ್ಯರ ಮಕ್ಕಳು ತುತ್ತಾಗುತ್ತಾರೆ.
• ಬಾಲ್ಯ ವಿವಾಹಕ್ಕೆ ಪ್ರಮುಖ ಕಾರಣವೆಂದರೆ :- ಖಾಸಗಿ ಶಿಕ್ಷಣ ಸಂಸ್ಥೆಗಳು ವಿಧಿಸುವ ಪ್ರವೇಶ ಶುಲ್ಕ ತುಂಬಲು ಆಗದೆ ಆ ಮಕ್ಕಳನ್ನು ಶಿಕ್ಷಣ ವಂಚಿತರನ್ನಾಗಿ ಮಾಡಿ ಅವರಿಗೆ ಬಾಲ್ಯವಿವಾಹ ಮಾಡಲು ಮುಂದಾಗುವುದು ಏನೂ ಅರಿಯದ ವಯಸ್ಸಿನಲ್ಲಿ ಮಧುವೆ ಮಾಡಿ ಶಿಶುಗಳ ಬದುಕನ್ನು ನಾಶಮಾಡಿದಂತಾಗುತ್ತದೆ. 1ನೇ ತರಗತಿಯಿಂದ 10ನೇ ತರಗತಿಯವರೆಗೆ  ಅಂದರೆ 6 ರಿಂದ 14 ವರ್ಷಗಳವರೆಗೆ ಮಕ್ಕಳಿಗೆ ಸರ್ಕಾರಿ ಶಿಕ್ಷಣ ನೀಡಬೇಕೆಂಬುವುದು ಕಾನೂನನ್ನು ಉಲ್ಲಂಘನೆ ಮಾಡಿದಂತಾಗುತ್ತದೆ.
      ಭಾರತವೆಂದರೆ ಅದೊಂದು ವಿಭಿನ್ನ ಸಂಸ್ಕೃತಿ ಹಾಗೂ ವಿಭಿನ್ನ ಔಷದಿಗಳ ಕೇಂದ್ರವೆಂದೇ ಪ್ರಖ್ಯಾತಿ ಹೊಂದಿದೆ ಪ್ರಶ್ಚಾತ್ಯ ದೇಶದ ಹಲವಾರು ಕಡೆ ಅಷ್ಟೇ ಅಲ್ಲದೆ ಜಗತ್ತಿನ ಅನೇಕ ರಾಷ್ಟ್ರಗಳು ಭಾರತದ ಔಷದಿಗಳನ್ನೇ ಉಪಯೋಗಿಸುತ್ತಿವೆ  ಮತ್ತು ಮುಖ್ಯವಾಗಿ ಆಯುರ್ವೇದ ಔಷದಿಗಳು ಇಡೀ ಜಗತ್ತಿನದ್ಯಾಂತ ಹೆಸರು ಮಾಡಿದೆ ಅದೂ ಕೂಡ ಭಾರತೀಯ ಔಷದಿ ಪದ್ಧತಿಯಾಗಿದೆ. ಹಾಗೂ ಆಯುರ್ವೇದ ಔಷದಿಯ ಪಿತಾಮಹ ಚರಕನು ತನ್ನ ಚರಕ ಸಂಹಿತೆಯಲ್ಲಿ ಆಯುರ್ವೇದದ ಉಪಯೋಗ ಮತ್ತು ಮೌಲ್ಯಗಳನ್ನು ತಿಳಿಸಿದ್ದಾನೆ. ಈಗಿರುವಾಗ ಜಗತ್ತಿನೆಲ್ಲೋಡೆ ಚರಕನ ಆಯುರ್ವೇದ ಪದ್ಧತಿಯಿಂದ ಆರೋಗ್ಯ ಸುಧಾರಣೆಯಾಗಿದೆ ಹಾಗೂ ಚರಕನ ಸಂಹಿತೆಯಲ್ಲಿ ಹೇಳಿರುವಂತೆ ಉತ್ತಮವಾದ, ನಿರ್ಮಲವಾದ ಆರೋಗ್ಯ ಪ್ರತಿಯೊಬ್ಬ ನಾಗರಿಕನಿಗೂ, ಸಾರ್ವಜನಿಕರಿಗೂ ದೊರಕಬೇಕೆಂಬ ದ್ವನಿನ್ನಿಂದಲೇ ಸರ್ಕಾರ ಸಾರ್ವಜನಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಿ ಪ್ರತಿಯೊಬ್ಬ ನಾಗರಿಕನಿಗೆ, ಪ್ರತಿಯೊಬ್ಬ ಸಾರ್ವಜನಿಕನಿಗೆ ಉಚಿತವಾಗಿ ಉತ್ತಮವಾದ, ಆರೋಗ್ಯ ಸೇವೆ ದೊರಕಬೇಕೆಂದು ಇಂದು ಹಲವಾರು ಆರೋಗ್ಯ ಸೇವೆಗಳನ್ನು ಸರ್ಕಾರ ನೀಡಿದೆ. ಅದು ಅವಶ್ಯಕವೂ ಕೂಡ ಹೌದು. ಹೀಗಿರುವಾಗ ಪ್ರತಿ ಸಾರ್ವಜನಿಕ ಆರೋಗ್ಯ ಕೇಂದ್ರಗಳನ್ನು ಖಾಸಗಿಕಾರಣಗೊಳಿಸಲು ಮುಂದಾದರೆ ಬಡಕುಟುಂಬಗಳು ಆರೋಗ್ಯ ಸೇವೆಯಿಂದ ಉಚಿತ ಔಷದಿಗಳು ದೊರೆಯದೆ ಅನೇಕ ರೋಗಗಳಿಗೆ ತುತ್ತಾಗಿ ನಿರಂಕುಷವಾಗಿ ಸಾವನ್ನಪ್ಪುವಂತಹ ಸನ್ನಿವೇಶ ಎದುರಾಗುತ್ತದೆ. ಸರಿಯಾದ ಚುಚ್ಚುಮದ್ದನ್ನು ಬಡವರು ಪಡೆಯಲಾಗದೆ ಮಕ್ಕಳು, ವೃದ್ಧರು, ಮಹಿಳೆಯರು ಪ್ರತಿದಿನವೂ ಪರದಾಡಿ ಅವಕಾಶವಂಚಿತರಾಗಿ ಬದುಕುವ ಸಮಯ ಖಾಸಗಿಕಾರಣದಿಂದಗುತ್ತದೆ.
  ಪ್ರಸ್ತುತ ದೇಶದಲ್ಲಿ ಆರೋಗ್ಯ ವ್ಯವಸ್ಥೆಯು ಸಂಪೂರ್ಣ ಖಾಸಗಿಯಾದರೆ ಶೆಕಡ 30%ರಷ್ಟು ಜನರು ಖಾಸಗಿ ಸೇವೆಯನ್ನು ಪಡೆಯಬಹುದು ಇನ್ನುಳಿದ ಶೆಕಡ 70%ರಷ್ಟು ಜನರು ಸರ್ಕಾರಿ ಸೇವೆಯನ್ನು ಹುಡುಕುತ್ತಾ ಸಾಗುತ್ತಾರೆ ಏಕೆಂದರೆ, ಬಡಜನರ ಕಲ್ಯಾಣಕ್ಕಾಗಿ ಮಾನ್ಯ ಪ್ರಧಾನ ಮಂತ್ರಿಗಳು ಅರೋಗ್ಯ ಸೇವೆಗಳ ಕುರಿತು ಹಲವಾರು ಆರೋಗ್ಯ ಸೇವೆಗಳ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. 2018 ಸೆಪ್ಟೆಂಬರ್ ನಲ್ಲಿ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಹಾಗೂ ಅಯುಷ್ಮಾನ್ ಭಾರತ ಯೋಜನೆಯನ್ನೂ ತಂದರು. ಈ ಯೋಜನೆಯು ವಿಶ್ವದ ಅತೀ ದೊಡ್ಡ ಸರ್ಕಾರಿ ಪ್ರಯೋಜಿತ ಆರೋಗ್ಯ ರಕ್ಷಣೆ ಯೋಜನೆಯಗಿದೆ. ಈ ಯೋಜನೆಯು 10.74 ಕೊಟ್ಟಿಗೂ ಹೆಚ್ಚು ಬಡ ಮತ್ತು ದುರ್ಬಲ ಕುಟುಂಬಗಳಿಗೆ ಪ್ರತಿ ಕುಟುಂಬಕ್ಕೆ 5 ಲಕ್ಷ ರೂಪಾಯಿಗಳನ್ನು ಆರೋಗ್ಯ ರಕ್ಷಣೆಯನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ. ಇನ್ನೂ ಅನೇಕ ಆರೋಗ್ಯ ಸೇವೆಗಳನ್ನು ಉಚಿತವಾಗಿ ಬಡಜನರಿಗೆ ತಲುಪಲಿ ಎಂಬ ನಿಟ್ಟಿನಲ್ಲಿ ಪ್ರಮುಖ ಯೋಜನೆಗಳನ್ನು ಜಾರಿಗೋಳಿಸಿದ್ದಾರೆ. ಇಂತಹ ಸಂಧರ್ಭದಲ್ಲಿ ಆರೋಗ್ಯ ಸೇವೆಯು ಸಂಪೂರ್ಣವಾಗಿ ಖಾಸಗಿಯಾದರೆ ದೇಶದಲ್ಲಿ ಜಾರಿಗೆ ತಂದಿರುವ ಯೋಜನೆಗಳನ್ನ ಉಲ್ಲಂಘನೆ ಮಾಡಿದಂತೆ ಆಗುತ್ತದೆ, ಮತ್ತು ಬಡಜನರ ಮೇಲೆ ವ್ಯತಿರಿಕ್ತಪರಿಣಾಮವನ್ನು ಉಂಟುಮಾಡಿದಂತಾಗುತ್ತದೆ. ದೇಶದಲ್ಲಿ ಪ್ರತಿಯೊಬ್ಬ ಬಡಜನರ ಬದುಕಿನ ಮೇಲೆ ಕಲ್ಲೇಸದಂತಾಗುತ್ತದೆ.

                ಇತ್ತೀಚಿನ ದಿನಮಾನಗಳಲ್ಲಿ ದೇಶದಲ್ಲಿ ಶಿಕ್ಷಣ ಮತ್ತು ಆರೋಗ್ಯ ಸೇವೆ ಖಾಸಗಿಯಾಗಬಹುದೇಂಬ ವದಂತಿ ಕೇಳಿ ಬರುತ್ತಲೇ ಇದೆ. ಆರೋಗ್ಯ, ಶಿಕ್ಷಣ ಕ್ಷೇತ್ರಗಳು ಖಾಸಗಿಕಾರಣವಾದರೆ ಅದೆಷ್ಟೋ ಬಡ ಜನರ ಬದುಕಿಗೆ ಮತ್ತು ಬಡ ಮಕ್ಕಳ ಭವಿಷ್ಯಕ್ಕೆ ಕುತ್ತು ತಂದತಾಗುತ್ತದೆ. ಸಂವಿಧಾನದ ಹಕ್ಕುಗಳು ಮತ್ತು ಪರಿಚ್ಛೆಧಗಳು ಉಲ್ಲಂಘನೆಯಾಗದಂತೆ ನಾವು ನೋಡಿಕೊಳ್ಳಬೇಕು ಮತ್ತು ಇದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ದೇಶದಲ್ಲಿನ ಯಾವುದೇ ಮೂಲ ಅಂಶಗಳು ಉಲ್ಲಂಘನೆಯಾಗಬಾರದು ಪ್ರತಿ ಸರ್ಕಾರಿ ಸೇವೆಗಳು ಪ್ರತಿಯೊಬ್ಬ ಸಾರ್ವಜನಿಕರಿಗೆ ಸರಾಗವಾಗಿ ತಲುಪುವಂತಾಗಬೇಕು. ಯಾವ ಕ್ಷೇತ್ರಗಳೂ ಖಾಸಗಿಕಾರಣಗೊಳ್ಳದೆ ಪ್ರತಿ ಜನಸಾಮಾನ್ಯರಿಗೆ ಆ ಸೇವೆಗಳು ದೊರಕಬೇಕು. ಪ್ರತಿಯೊಂದು ಕ್ಷೇತ್ರಗಳು ಖಾಸಗಿಕಾರಣವಾಗದೆ ಸರ್ಕಾರಿ ಅಧಿನಿಯಮದಲ್ಲಿರಬೇಕು ಆಗಿದ್ದಾಗ ಮಾತ್ರ ನಮ್ಮ ಮೊದಲ ಭಾರತ ದೇಶವನ್ನು ಕಾಣಲು ಸಾಧ್ಯ. ಅದು ಹೊರತು ನಾವು ಪ್ರಶ್ಚಾತ್ಯ ರಾಷ್ಟ್ರಗಳ ಬದುಕನ್ನು ಅನುಭವಿಸಬೇಕಾಗುತ್ತದೆ. ಇಂತಹ ಖಾಸಗಿಕಾರಣವೇನ್ನುವುದು ನಮ್ಮ ದೇಶ ಹಾಗೂ ದೇಶದ ಪ್ರತಿ ಜನಗಳಿಗೆ ಕಳಂಕ ಹಾಗೂ ಅನಿಷ್ಟವಿದ್ದಂತೆ. ಇದನ್ನು ನಾವು ಕಡೆಗಣಿಸಿ ನಡೆಯಬೇಕು ಮತ್ತು ಪದೇ -ಪದೇ ಸುದ್ದಿಯಲ್ಲಿರುವ ಈ ಖಾಸಗಿಕರಣದ ವಿಷಯವನ್ನು ಮುಚ್ಚಿಹಾಕಿ ಅನಿಷ್ಠ ಸೇವೆಗಳಿಗೆ ನಾವು ಆಸ್ವದ ಕೊಡದಂತೆ ಜೀವಿಸಬೇಕು ಮತ್ತು ದೃಢವಾಗಿ ನಿಲ್ಲಬೇಕು. ಭಾರತವೆಂಬುವುದು ಆಗದವಾದ ರಾಷ್ಟ್ರ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಮಾನ್ಯತೆ ಮೆರೆದ ರಾಷ್ಟ್ರ ಹೀಗಿರುವಾಗ ಭಾರತ ಬೇರೊಂದು ದುಷ್ಟದಾರಿ ತುಳಿಯಲು ನಾವು ಬಿಡಬಾರದು ಮೊದಲಿನ ಪ್ರಸಿದ್ಧ ಭಾರತವನ್ನು ನಾವು ಕಾಪಾಡಿಕೊಳ್ಳುವ ಮೂಲಕ ಸಂವಿಧಾನದ ಪ್ರತಿ ಅನುಚ್ಛೆದ, ಅಂಶ ಹಾಗೂ ಕರಾರುಗಳನ್ನು ಉಲ್ಲಂಘಿಸದೆ ಪಾಲಿಸೋಣ.

- ಬಸವರಾಜ್ ಎಚ್. ಹೊಗರನಾಳ. ಪತ್ರಿಕೋದ್ಯಮ ವಿದ್ಯಾರ್ಥಿ, ಧಾರವಾಡ 
ಮೊ.ನಂ:8951228607.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...