ಸೋಮವಾರ, ಮೇ 22, 2023

ನಮ್ಮ ಊರಿನ‌ ಸೌಕರ್ಯಗಳ ಮೂಲ ಕೊರತೆ (ಲೇಖನ) - ಪ್ರಾರ್ಥನಾ ಕೆ.ಎಂ.ಕಲ್ವಮಂಜಲಿ.

ಕೋಲಾರ ಜಿಲ್ಲೆಯ ಕಲ್ವಮಂಜಲಿ ಗ್ರಾಮದಲ್ಲಿ ವೇಮಗಲ್ ಮತ್ತು ಕಲ್ವಮಂಜಲಿ ಸಂಚಾರಿಸುವ ರಸ್ತೆಯು ತಂಬಾ ಚಿಕ್ಕದಾಗಿದ್ದು ಅಲ್ಲಲಿ
ಕಿತ್ತು ಹೋಗಿರುವ ಕಾರಣ ತುಂಬಾ ಅಪಘಾತಗಳು ಉಂಟಾಗಯತ್ತದೆ.ಹಾಗೂ ಸ್ಕೂಲ್ ವ್ಯಾನ್ ಗಳು ಸಂಚಾರಿಸಲು ಕಷ್ಟವಾಗುತ್ತದೆ.ದೊಡ್ಡ-ದೊಡ್ಡ ಲಾರಿಗಳು ಮುಖಾ-ಮುಖಿ ಆದ್ರೆ ಲಾರಿ ಡ್ರೈವರ್ಗಳು ಹರಸಾಹಸ ಪಡಬೆಕಾಗುತ್ತದೆ.

ಚರಂಡಿ ವ್ಯವಸ್ಥೆ ಊರಿನಲ್ಲಿ ಸರಿಯಾದ ಚರಂಡಿ ವ್ಯವಸ್ಥೆಗಳು ಇಲ್ಲ
ಅಲ್ಲಲಿ ಮುಚ್ಚು ಹೋಗಿರುವ ಚರಂಡಿಗಳು  ನೀರು ಹೋಗಲು ಕಷ್ಟವಾಗುತ್ತದೆ.ಮನೆಗಳ ಬಳಿ ಚರಂಡಿಗಳು ಸ್ವಚ್ಚವಾಗಿಲ್ಲ ಅಂದ್ರೆ ಆರೋಗ್ಯದ ಸಮಸ್ಯೆಗಳು ಎದುರಾಗುತ್ತದೆ.

ಬಸ್ ವ್ಯವಸ್ಥೆ ಕಲ್ವಮಂಜಲಿ ಎಂಬುವ ಗ್ರಾಮ ವೇಮಗಲ್ ಗೆ ಸುಮಾರು ಮೂರು ಕೀ.ಮಿ ದೂರದಲ್ಲಿದೆ.ಊರಿಗೆ ಬಸ್ ನ ವ್ಯವಸ್ಥೆ ಇಲ್ಲ.ಬರುವ ಒಂದು ಬಸ್ ಸರಿಯಾದ ಸಮಯಕ್ಕೆ ಬರುವುದಿಲ್ಲ.ಶಾಲಾ- ಕಾಲೇಜ್ ಗೆ ಹೋಗುವವರು ಅಂದಿನಿಂದ ಇಂದಿನ ವರೆಗೂ ಕಾಲು ನಡೆಗೆಯಲ್ಲಿ ಹೋಗುವ ಪರಿಸ್ಥಿತಿ ಇದೆ.ವಯಸ್ಸಾದವರು ಸಹ ನಡೆದುಕೊಂಡು ಹೋಗ ಬೇಕಾಗುತ್ತದೆ.ಸಮಯಕ್ಕೆ ಸರಿಯಾಗಿ ಶಾಲೆ-ಕಾಲೇಜಿನ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ತರಗತಿಗಳಿಗೆ ಹೋಗಲು ಕಷ್ಟವಾಗುತ್ತದೆ.
ವಿದ್ಯತ್  ಹಾಗೂ ನೀರಿನ ವ್ಯವಸ್ಥೆ ಸ್ವಲ್ಪ ಮಟ್ಟಿಗೆ ಸುಧಾರಿಸಿ ಕೊಂಡಿದೆ.

- ಪ್ರಾರ್ಥನಾ ಕೆ.ಎಂ.ಕಲ್ವಮಂಜಲಿ, ಕೋಲಾರ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...