ಗುರುವಾರ, ಮೇ 11, 2023

ನೀವಾಗಿರಿ (ಕವಿತೆ) - ಸಬ್ಬನಹಳ್ಳಿ ಶಶಿಧರ.

ಮತಾಂಧ ಮನುಜರು ಎಲ್ಲೆಡೆ ಇಹರು
ಮುಕ್ಕಿ ಮುಗಿಸಲು ಕಾದಿಹರು
ಪ್ರೀತಿ ಪ್ರೇಮದ ನಾಟಕವಾಡಿ
ನರಕದ ಬಲೆಗೆ ಸೆಳೆಯುವರು

ದುರ್ಬಲಗೊಂಡ ಮನಸು ಸಿಕ್ಕರೆ
ತಪ್ಪದು ನಿಮಗೆ ನರಕದ ಸೆರೆ
ಮಾನವೀಯತೆ ಇಲ್ಲದ ಮೃಗಗಳು
ಕುಕ್ಕಿ ತಿನ್ನುವ ರಣಹದ್ದುಗಳು

ತಿಂದು ಬಿಸಾಡುವ ಎಂಜಲ ಎಲೆಯಂತೆ
ನಿಮ್ಮನ್ನು ಅವರು ಬಳಸುವರು
ಪ್ರೀತಿ ಪ್ರೇಮ ಕರುಣೆ ಮಮತೆ
ಯಾವುವು ಇರದ ದಾನವರು

ಗೋಮುಖ ರೂಪದ ವ್ಯಾಘ್ರ ಮಾತಿಗೆ
ತಪ್ಪಿಯು ಮನ ಕಿವಿ ನೀಡದಿರಿ
ಹರಕೆ ಕುರಿಯಾಗಿ ಮೋಹಕೆ ಸಿಲುಕಿ
ಅನಾಥ ಶವಗಳು ಆಗದಿರಿ

ಸಂಸ್ಕಾರ ಮರೆತು ಮೆರೆದರೆ ಬದುಕು
ಹರಾಜಿಗಿಟ್ಟ ವಸ್ತುವಾಗುವುದು
ನೀವು ನೀವಾಗಿ ನಿಮ್ಮೊಳಗಿದ್ಢರೆ
ಸ್ವರ್ಗ ಜೀವನ ನಿಮದಾಗುವುದು.
  
 
 -  ಸಬ್ಬನಹಳ್ಳಿ ಶಶಿಧರ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...