ಭಾನುವಾರ, ಮೇ 14, 2023

ಹೆಣ್ಣು ಮಕ್ಕಳ ಮೇಲಿನ ಲೈಂಗಿಕ ಕಿರುಕುಳಕ್ಕೆ ಕೊನೆ ಎಂದು ? (ಲೇಖನ) - ಭೀಮಣ್ಣ ಹತ್ತಿಕುಣಿ, ಯಾದಗಿರಿ.

ಸಾವಿರಾರು ವರ್ಷಗಳಿಂದ ಹೆಣ್ಣು ಮಕ್ಕಳ ಮೇಲೆ ಪುರುಷ ಪ್ರಾಧ್ಯಾನತೆ ತುಳಿಯುತ್ತ ಬಂದಿದೆ. ಹೆಣ್ಣು ಎಂದರೆ ಅವಳು ಪೂಜೆ ಮಾಡುವ ದೇವತೆ, ತ್ಯಾಗಮಹಿ, ಸಹನೆ, ಹೀಗೆ ಒಂದಿಷ್ಟು ಹೇಳಿಕೆಗಳನ್ನ ಅವಳ ಮೇಲೆ ಹೋರಿಸಿ ಧ್ವನಿಯಿಲ್ಲದ ಹಾಗೆ ಮಾಡಿರುವ ಸಂಸ್ಕೃತಿ ನಮ್ಮದು. ಹೆಣ್ಣು ಶತಮಾನಗಳಿಂದ ಅಡುಗೆ ಮನೆಗೆ ಮಾತ್ರ ಸೀಮಿತವಾದವಳು. ಸತತವಾಗಿ 24ಗಂಟೆಗಳ ಕಾಲ ಹೆಣ್ಣು ಮನೆಯ ಒಳಗೆ ಇರಬೇಕು. ಅವಳು ತೋಡುವ ಒಂದು ಬಟ್ಟೆಯಿಂದ ತಿನ್ನುವ ಆಹಾರದವರೆಗೂ ಒಬ್ಬ ಗಂಡಸು ನಿರ್ಧಾರಿಸುತ್ತಾನೆ ಎಂದರೆ ಹೆಣ್ಣು ಮಕ್ಕಳು ಎಷ್ಟು ತುಳಿತಕ್ಕೆ ಒಳಪ್ಪಟ್ಟಿದ್ದಾರೆವೆಂಬುವುದು ಯೋಚನಿಯ. 

    ದಶಕಗಳಿಂದ ಹೆಣ್ಣು ಒಂದು ಗಂಡಿನ ಅಡಿಯಾಳಾಗಿ ಬದುಕುತ್ತಿದ್ದಾಳೆ. ಅವಳಿಗೆ ಅವಳದೇ ಆದ ಆಸೆ, ಆಕಾಂಕ್ಷೆಗಳಿದ್ದರು ಎಲ್ಲವು ಪಕ್ಕಕ್ಕೆ ಸರಿಸಿ ಈ ಪುರುಷ ಪ್ರಧ್ಯಾನ್ಯತೆ ಹೇಳಿದ ಹಾಗೆ ಕೇಳುತ್ತಿದ್ದಾಳೆ. ನಗರಗಳಲ್ಲಿ ಸ್ವಲ್ಪ ಸುಧಾರಣೆಗೆ ಬಂದಿದೆ ಆದರೆ ಹಳ್ಳಿಗಳಲ್ಲಿ ಇನ್ನೂ ಗಂಡಿನ ಅಡಿಯಾಳೆ. ಮನು ತನ್ನ ಪುಸ್ತಕವಾದ ಮನಸ್ಮೃತಿಯಲ್ಲಿ ಹೆಣ್ಣಿನ ಬಗ್ಗೆ ಹಲವು ನಿರ್ಬಂಧನೆಗಳನ್ನು  ಹೇರಿದ್ದ. ಅವುಗಳಲ್ಲಿ ಹಲವು ಆಚರಣೆಯಲ್ಲಿ ಇದ್ದವು.  ಆದರೆ ಇತ್ತೀಚಿನ ದಿನಗಳಲ್ಲಿ ಅವುಗಳನೆಲ್ಲ ಹೊಡೆದಾಕಿ ಗಂಡಿನಷ್ಟೇ ಹೆಣ್ಣಿಗೂ ಬದುಕುವ ಹಕ್ಕಿದೆ ಎಂದು ಹೋರಾಟ ಮಾಡಿದ ಹಲವು ವೀರ ಮಹಿಳೆಯರನ್ನ ಕಂಡಿದ್ದೇವೆ.

ಇತ್ತೀಚಿಗೆ ಮಹಿಳೆಯರು ಸುಧಾರಿಸಿಕೊಂಡು ಎಲ್ಲಾ ಕ್ಷೆತ್ರಗಳಲ್ಲೂ ತಮ್ಮನ್ನು ತೊಡಗಿಸಿಕೊಂಡು ಗಂಡಿನಷ್ಟೇ ಸಮವಾಗಿ ಬದುಕುವ ಬಲವಿದೆ ಎಂದು ತೋರಿಸಿಕೊಳ್ಳಿತ್ತಿದ್ದಾರೆ. ಆದರೆ ಈ ಪುರುಷ ಮತ್ತೆ ಮತ್ತೆ ಹೆಣ್ಣುಮಕ್ಕಳಿಗೆ ಒಂದಲ್ಲ ಒಂದು ರೀತಿಯಲ್ಲಿ ಕಿರುಕುಳ ಕೊಡುತ್ತಾ ಬಂದಿದ್ದಾನೆ. ಹೌದು ಇತ್ತೀಚಿಗೆ ಕುಸ್ತಿ ಪಟುಗಳಾದ ಸಾಕ್ಷಿ ಮಲಿಕ್ ಮತ್ತು ವಿನೇಶ್ ಪೊಗಟ್ ಅವರು ಭಾರತಕ್ಕೆ ಪದಕಗಳನ್ನ ತಂದು ಕೊಟ್ಟವರು. ಇವರ ಮೇಲೆಯೆ ಲೈಂಗಿಕ ದೌರ್ಜನ್ಯವಾಗಿದೆ. ದೇಶಕ್ಕೆ ಹೆಮ್ಮೆ ಪಡುವಂತ ವಿಚಾರವೆಂದರೆ ಒಲಂಪಿಕ್ಸ್ ನಲ್ಲಿ ಭಾರತಕ್ಕೆ ಹಾಕಿ ಕ್ರೀಡೆ ಬಿಟ್ಟರೆ. ಅತಿಹೇಚ್ಚು ಪದಕಗಳನ್ನು ತಂದು ಕೊಟ್ಟ ಶ್ರೇಯ ಕುಸ್ತಿಪಟುಗಳಿಗೆ ಸೇರಬೇಕು. ಎರಡು ಬೆಳ್ಳಿ ಮತ್ತು ಐದು ಕಂಚಿನ ಪದಕಗಳನ್ನು ಭಾರತಕ್ಕೆ ತಂದು ಕೊಟ್ಟಿದ್ದಾರೆ. ಇದರಲ್ಲಿ ಮಹಿಳೆಯರ ವಿಭಾಗದಲ್ಲಿ ಒಂದು ಕಂಚು ಇದೆ. ಭಾರತಕ್ಕೆ ಪದಕಗಳನ್ನು ತಂದು ಭಾರತದ ಕೀರ್ತಿಯನ್ನ ಹೆಚ್ಚಿಸಿದಾ ಕುಸ್ತಿಪಟುಗಳಿಗೆ ಲೈಂಗಿಕ ದೌರ್ಜನ್ಯವಾಗಿದೆ. ಇದರ ವಿರುದ್ಧ ಧ್ವನಿಯೇತ್ತಿದ ಪಟುಗಳು ದೆಹಲಿಯ ಜಂತರ್ ಮಂತರ್ ನಲ್ಲಿ ಧರಣಿಗೆ ಕುಳಿತ್ತಿದ್ದಾರೆ.

  ದೆಹಲಿಯಲ್ಲಿ ಹಗಲು ರಾತ್ರಿಯನ್ನದೆ ಮೈ ಕೊರೆಯುವ ಚಳಿಯನ್ನು ಲೆಕ್ಕಿಸದೆ ಕುಸ್ತಿಪಟುಗಳು ಬಿದಿಗಿಳಿದು ಲೈಂಗಿಕ ದೌರ್ಜನ್ಯದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ ಅವರಿಗೆ ಇನ್ನೂವರೆಗೂ ಯಾವುದೇ ನ್ಯಾಯ ಸಿಕ್ಕಿಲಿಲ್ಲವೆನ್ನುವುದು ಬೇಸರದ ಸಂಗತಿ. ಭಾರತದ ಗೌರವವನ್ನ ಹೆಚ್ಚಿಸಿದ ಸಾಕ್ಷಿ ಮಲಿಕ್ ಮತ್ತು ವಿನೇಶ್ ಪೋಗಟ್ ಹಾಗೂ ಬಜರಂಗ್ ಪೊನಿಯಾ ಅವರು ಕುಸ್ತಿ ಅಖಾಡದಲ್ಲಿ ಪದಕ ಗೆದ್ದು ಆನಂದಭಾಷ್ಪ ಸುರಿಸಿದ್ದರು. ಭಾರತದ ಕುಸ್ತಿ ಪ್ರಿಯರು ಅಷ್ಟೇ ಅಲ್ಲದೆ ನೆರೆದೇಶಗಳ ಕುಸ್ತಿ ಪ್ರಿಯರು ಭಾರತದ ಕುಸ್ತಿಪಟುಗಳತ್ತಾ ನೋಡುತ್ತಿರುವ ಘಳಿಗೆಯೊಂದು ಉದ್ಭವವಾಗಿತ್ತು. ಭಾರತದ ಕೀರ್ತಿ ಹೆಚ್ಚಿಸಿದ ಮಹಿಳೆಯರಿಗೆ  ಭಾರತ  ನೀಡಿದ ಗೌರವವೇನು? ಲೈಂಗಿಕ ದೌರ್ಜನ್ಯ ಮತ್ತು ಬೀದಿಯಲಿ ಧರಣಿಯೇ?

   ಕೆಲ ತಿಂಗಳಿಂದ ಭಾರತದ ಕುಸ್ತಿ ಪಟುಗಳು, ತರಬೇತುದಾರರು ಮಹಿಳಾ ಕುಸ್ತಿ ಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ವಿನೇಶ್ ಮತ್ತು ಕೆಲ ಮಹಿಳೆಯರು ಆರೋಪಿಸಿದ್ದರು. ಭಾರತದ ಕುಸ್ತಿ ಫೇಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಮೇಲೆ ಹಲವು ಆರೋಪಗಳನ್ನು ಬಹಿರಂಗ ಪಡಿಸಿದ್ದರು. ಕೇವಲ ವಿನೇಶ್ ಪೋಗಟ್, ಸಾಕ್ಷಿ ಮಲಿಕ್ ಅಷ್ಟೇ ಅಲ್ಲದೆ ಭಜರಂಗ್ ಪೋನಿಯ ಜೊತೆಯಲ್ಲಿ ಹಲವರು ದೂರಿದ್ದಾರೆ. ಆದರೂ ಅವರ ವಿರುದ್ಧ ಯಾವುದೇ ಕ್ರಮ ಜರುಗಿಸದೆ ಬೇಜವಾಬ್ದಾರಿ ತೋರಿಸಿರುವುದು ಖಂಡನಿಯ.  ಬ್ರಿಜ್ ಭೂಷಣ್ ಸಿಂಗ್ ಅವರು ಉತ್ತರ ಪ್ರದೇಶದವರು. ಹಾಗೂ ಭಾರತೀಯ ಜನತಾ ಪಕ್ಷದ ಸಂಸದರು. ಇವರು ಆರು ಸಲ ಸಂಸದರಾಗಿದ್ದರು. ಕೆಲ ವರ್ಷಗಳಿಂದೆ ಟೌಡ ಕಾಯ್ದೆಯಡಿ ಬಂಧನಕ್ಕೂ ಒಳಗಾದವರು. ಆದರೆ ಇವರ ಮೇಲೆ ಯಾವುದೇ ಕ್ರಮ ಜರುಗಲಿಲ್ಲ. ಬ್ರಿಜ್ ಭೂಷಣ್ ಅವರು ಒಬ್ಬ ಪ್ರಭಾವಿಯಾಗಿದ್ದರು ಮತ್ತು ಇದರಿಂದ ಸರ್ಕಾರಕ್ಕೆ ಹಾಗೂ ಪಕ್ಷಕ್ಕೆ ಅವಮಾನ ಆಗುವುದು ಎಂಬ ಕಾರಣಕ್ಕೆ ಯಾವುದೇ ಕ್ರಮ ತೆಗೆದುಕೊಳ್ಳಲು ಮುಂದಾಗಲಿಲ್ಲವೆಂದು ಕಾಣುವುದು.

ಬ್ರಿಜ್ ಭೂಷಣ್ ಮತ್ತು ಕೆಲವು ತರಬೇತುದಾರರು ಮಹಿಳಾ ಕುಸ್ತಿ ಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ವೆಸಗುತ್ತಿರುವರು ಎಂದು ಆರೋಪಿಸಿದರು. ಆದರೆ ಕೇಂದ್ರ ಸರ್ಕಾರ ತಲೆಕೆಡಸಿಕೊಳ್ಳಲಿಲ್ಲ. ಬದಲಾಗಿ ಮಾನ್ಯ ಪ್ರಧಾನಿಯವರು ಕರ್ನಾಟಕದ ವಿಧಾನಸಭಾ ಚುನಾವಣೆಯ ಪ್ರಚಾರದಲ್ಲಿ ತೊಡಗಿಸಿಕೊಂಡರು. ಮಹಿಳೆಯರ ಸುರಕ್ಷತೆಗಿಂತಲೂ ಇವರಿಗೆ  ಪ್ರಚಾರದ ಅವಶ್ಯಕತೆ ಇತ್ತೇ. "ಬೇಟಿ ಬಚಾವೋ ಬೇಟಿ ಪಡಾವೋ" ಕೇವಲ ಹೇಳುವುದು ಅಲ್ಲ ನುಡಿದಂತೆ ನಡೆಯಬೇಕಾಗಿದೆ ಎಂದು ನೆನಪಿಸುವ ದುಸ್ಥಿತಿ ಬಂದಿದೆ. ಈ ಪ್ರಕರಣದಲ್ಲಿ ಬಿದಿಗಿಳಿದು ಆರೋಪಿಸಿದ್ದು ಹಲವು ಪದಕ ವಿಜೇತರಾಗಿದ್ದಾರೆ. ಕಾಮನ್ ವೇಲ್ತ್ ಕ್ರೀಡಾಕೂಟದಾ ಪದಕ ವಿಜೇತರಾದ ವಿನೇಶ್ ಪೋಗಟ್, ರಿಯಾ ಒಲಂಪಿಕ್ಸ್ ಕಂಚಿನ ಪದಕ ವಿಜೇತ ಸಾಕ್ಷಿ ಮಲಿಕ್, ಟೋಕಿಯೋ ಒಲಂಪಿಕ್ಸ್ ಪದಕ ವಿಜೇತರಾದ ಬಜರಂಗ್ ಪೊಂಯಾ, ರವಿ ದಹಿಯಾ, ಮಹಿಳಾ ಕುಸ್ತಿಪಟುಗಳಾದ ಬಬಿತಾ ಪೋಗಟ್, ಅನ್ಕ್ಷು  ಮಲಿಕ್ ಸೇರಿದಂತೆ ಸುಮಾರು ಕುಸ್ತಿಪಟುಗಳು ಸೇರಿ ಲೈಂಗಿಕ ದೌರ್ಜನ್ಯದ ವಿರುದ್ಧ ಖಂಡಿಸಿ ಜೊತೆಗೂಡಿದರು. ಇದು ಇಡೀ ಭಾರತಕ್ಕೆ ನಾಚಿಕೆಯಾಗುವಂತಹ ವಿಷಯವಾಗಿದೆ. ದೇಶದ ಗೌರವಕ್ಕೆ ಧಕ್ಕೆಯಾಯಿತು ಎಂದು ಗೊತ್ತಿದ್ದರೂ ಕೇಂದ್ರ ತಕ್ಷಣಕ್ಕೆ ಯಾವುದೇ ಕ್ರಮ ತೆಗೆದುಕೊಳ್ಳದಿರುವುದು ತಲೆ ತಗ್ಗಿಸುವಂತೆ ಮಾಡಿತು.

   ಕೊನೆಗೂ ಕುಸ್ತಿ ಪಟುಗಳಿಗೆ ಮಣಿದ ಕೇಂದ್ರ  ಕ್ರೀಡಾ ಇಲಾಖೆಯ ತನಿಖೆ ಸಮಿತಿಯೊಂದನ್ನು ರಚಿಸಿತು.  ಪಿ. ಟಿ. ಉಷಾ ನೇತೃತ್ವದಲ್ಲಿ ಭಾರತ ಒಲಂಪಿಕ್ಸ್ ಸಂಸ್ಥೆಯು ಏಳು ಜನರ ತನಿಖಾ ಸಮಿತಿಯನ್ನು ರಚಿಸಿದ್ದು. ಮತ್ತೊಂದು ಸಮಿತಿ ರಚನೆಗೆ ಕ್ರೀಡಾ ಇಲಾಖೆ ಮುಂದಾಗಿದೆ. ಕುಸ್ತಿ ಪಟುಗಳು ಈಗಾಗಲೇ ಹೇಳಿದ್ದಾರೆ ನಮ್ಮಲ್ಲಿ ಎಲ್ಲಾ ಸಾಕ್ಷಾಧಾರಗಳು ಇವೆ ಎಂದು. ಆದರೂ ಕ್ರಮ ಜರುಗಿಸದೆ ಪ್ರತಿಭಟನೆಯನ್ನು ವಾಪಸ್ ಪಡೆಯುವಂತೆ ಕ್ರೀಡಾ ಸಚಿವ ಅನುರಾಗ ಠಾಕೂರ್ ಕುಸ್ತಿಪಟುಗಳಿಗೆ ಮನವೊಲಿಸಲು ಮುಂದಾಗಿದ್ದಾರೆ ಎಂದರೆ ಇದರ ಹಿಂದೆ ಹಲವು ಗಣ್ಯರು ಎನಿಸಿಕೊಳ್ಳಿವವರ ಕೈವಾಡವಿದೆ ಎಂದು ಸಂಶಯ ಬರುವುದು ಸತ್ಯ.

ಇದು ಕೇವಲ ಕುಸ್ತಿ ಪಟುಗಳ ಮೇಲೆ ಆಗುತ್ತಿರುವ ದೌರ್ಜನ್ಯವಷ್ಟೇ ಅಲ್ಲ. ಹೀಗೆ ಹಲವು ಕ್ಷೇತ್ರಗಳಲ್ಲಿ ತೊಡಗಿರುವ ಮಹಿಳೆಯರ ಮೇಲೂ ಆಗುತ್ತಿವೆ. ಸಿನಿಮಾ ರಂಗ ಮತ್ತು ಖಾಸಗಿ ಕಂಪನಿಗಳು, ಸರ್ಕಾರಿ ಕಚೇರಿಗಳು, ಹೀಗೆ ಹಲವು ಕ್ಷೇತ್ರಗಳಲ್ಲಿ ಲೈಂಗಿಕ ಕಿರುಕುಳ ಸಹಿಸಿಕೊಂಡು ಬದುಕುತ್ತಿದ್ದಾರೆ. ಪ್ರಭಾವಿಗಳ ವಿರುದ್ಧ ಧ್ವನಿಯೇತ್ತಲು ಆಗದೆ ಅಸಾಯಕರಾಗಿ ಸಹಿಸಿಕೊಳ್ಳುತ್ತಿದ್ದಾರೆ. ಇದಕೆಲ್ಲ ಕೊನೆಯವಾಗ ಎಂಬುವುದು ಪ್ರತಿ ಹೆಣ್ಣು ಮಕ್ಕಳ ಒಳಧ್ವನಿಯಾಗಿದೆ. ಇತ್ತೀಚಿಗೆ ಮಠಾಧೀಶರೊಬ್ಬರು ವಿದ್ಯಾರ್ಥಿಗಳ  ಮೇಲೆ ದೌರ್ಜನ್ಯ ಎಸಗಿರುವ ಕೃತ್ಯ ಕಂಡಿದ್ದೇವೆ. ಹೀಗೆ ಆದರೆ ಮಹಿಳೆಯರು ಸಮಾಜದಲ್ಲಿ ಬದುಕುವುದಾದರೂ ಹೇಗೆ. ಭಾರತವು ಹೆಣ್ಣು ಮಕ್ಕಳನ್ನು ಪೂಜ್ಯನಿಯವೆಂದು ಕರೆಯಲ್ಪಡುವ ದೇಶ. ಈಗ ಅವರ ಮೇಲೆ ಕೃತ್ಯವೇಸಗಿದ್ದಾರೆ. ಆದೊಷ್ಟು ಬೇಗಾ ಅಂತ ನೀಚ ಕೆಲಸ ಮಾಡುವವರ  ವಿರುದ್ಧ ಕ್ರಮ ಜರುಗಿಸಬೇಕು. ಮತ್ತು ಬೇರೊಂದು ಹೆಣ್ಣು ಮಕ್ಕಳಿಗೆ ನಮ್ಮೊಂದಿಗೆ ಕಾನೂನು, ಸಂವಿಧಾನ, ಮತ್ತು ಸರ್ಕಾರವಿದೆ, ಎಂದು ಧೈರ್ಯಬರುವಂತೆ ಆಗಲಿ.

                                                        - ಭೀಮಣ್ಣ ಹತ್ತಿಕುಣಿ, ಯಾದಗಿರಿ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...