ಬುಧವಾರ, ಮೇ 17, 2023

ಅಕ್ಷರದ ಅಭಿಮಾನ (ಕವಿತೆ) - ಶಾರದಾ ದೇವರಾಜ್.

ಬರವಣಿಗೆಯ ಮೇಲಿರಲಿ 
ಅಕ್ಷರದ ಅಭಿಮಾನ
 ಇದ ತೋರಿಸಲು ಬೇಕಿಲ್ಲ 
ಯಾವ ಬಿಂಕ ಬಿಗುಮಾನ l

 ಅಕ್ಕರೆಯ ಅಕ್ಷರದೊಳಿರಲಿ
 ಶುದ್ಧ ಭಾವದ ದೃಡೀಕರಣ
 ಅಕ್ಷರದರ್ಥಗಳ ಮೇಲಿರಲಿ
 ಸ್ಪಷ್ಟ ಬದುಕಿನ ನಿಲ್ದಾಣl

 ನಿಂತ   ನೀರಂತಾಗದಿರಲಿ
 ಅಕ್ಷರ ಸಾಹಿತ್ಯದ ಅಬ್ಬರ
 ಹರಿವ ನದಿಯಂತಾಗಲಿ
 ಕೀರ್ತಿಗರಿಮೆಯ ಸಂಸ್ಕಾರl

 ಆದರ್ಶದ ಬರವಣಿಗೆ
 ಶುದ್ಧ ಜೀವನದ ಬೆಳವಣಿಗೆ
 ತೋರ್ಪಡಿಸು ಸಂಯಮವ
 ಸಾಹಿತ್ಯ ಸಂಸ್ಕೃತಿಯ ಕೌಸ್ತುಭವl

- ಶಾರದಾ ದೇವರಾಜ್, A  ಮಲ್ಲಾಪುರ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...