ಮಂಗಳವಾರ, ಮೇ 2, 2023

ಇಳೆಯೊಡಲ ಒಲವ ಆಹ್ವಾನ (ಕವನ) - ಮಧುಮಾಲತಿ ರುದ್ರೇಶ್.

ಬಾ ಮಳೆಯೆ ಬಾ ಇಳೆಗವತರಿಸು ಆದರಿಸು
ಚಿಗುರೆಲೆಗಳ ಮೇಲೆ ಮುತ್ತು ಮಣಿಯನುಳಿಸು 

ಇಳೆಯೊಡಲ ಒಲವ ಆಹ್ವಾನವ
ಆಲಿಸು ವರುಣ
ಕ್ಷಣವು ವ್ಯಯಿಸದೆ ಚೆಲ್ಲು ಅವಳೆಡೆಗೆ ಪ್ರೀತಿಯ ಕಿರಣ 

ಧರಣಿ ಕಾದಿಹಳು ತನ್ನೊಡಲ ತಣಿಸುವನೆಂದು
ಕಾಯಿಸದಿರು ಅವಳ ಸಂತೈಸು ನೀ ಬಂದು 

ಭೂರಮೆಯ ಮಡಿಲ ತುಂಬಿದ ಹಸಿರು ಗಿರಿ ಕಾನನಗಳು
ವರ್ಷಧಾರೆಯಲಿ ಮಿಂದೇಳಲು ಕಾತರಿಸಿಹ ಕ್ಷಣಗಳು 

ಶೃಂಗಾರಗೊಂಡಿಹಳು ವಸುಂಧರೆ ಹಸಿರುಟ್ಟು ನಗುತ
ತನ್ನಿನಿಯ ವರುಣನಿಗೆ  ಪ್ರೇಮದಾಹ್ವಾನವ ನೀಡುತ

ತುಸುಮೆಲ್ಲ ಬೀಸುತಿಹ ಮಾರುತದ ಸಂದೇಶವನಾಲಿಸು
ಒಲವ ಕರೆಗೆ ಮಣಿದಿಳಿದು ಇಳೆಯನೊಮ್ಮೆ ಆಲಂಗಿಸು
ಬಾ ಮಳೆಯೇ ಬಾ....
- ಮಧುಮಾಲತಿ ರುದ್ರೇಶ್, ಬೇಲೂರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಶ್ರೀಮತಿ ಬಿ ಬಿ ದೇವದುರ್ಗ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿ...

ಶ್ರೀಮತಿ ಬಿ ಬಿ ದೇವದುರ್ಗ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿ.....            ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್   ಉಪನಿರ್ದೇಶಕರ ಹಾಗೂ ಕ್ಷೇತ್ರ...