ಬುಧವಾರ, ಮೇ 17, 2023

ನೆನಪಾದೆಯಮ್ಮ (ಕವಿತೆ) - ಗಿರೀಶ(ರಾಗಿ).

ಚಂದಿರನೊಮ್ಮೆ ನೋಡಿದೆ,
      ನಗುವನೋ,ಅಳುವನೋ
                         ನಾಕಾಣೆ
ಆದರೂ ತಂದ ನಿನ ನೆನಪ
        ಮರೆಯಲಾಗದು ತಾಯಿ
                     ನನ್ನಾಣೆ...

ಇದ್ದಾಗ ತಿರಸ್ಕರಿಸಿದೆ,
   ಬೈದೆ, ಹೀಯಾಳಿಸಿದೆ
ಹಸಿವು ನೆಪವೊಡ್ಡಿ
    ಅವಮಾನಿಸಿದೆ...

ಸೇವೆ ಪಡೆದೆನೆ ವಿನಃ
       ನಾ ನೀಡಲಿಲ್ಲ...
ತಾಯೆoಬ ಪ್ರೀತಿಯಲಿ
         ಹಿತ ನುಡಿಯಲಿಲ್ಲ...

ಕ್ಷಮೆ ಇರಲಿ ತಾಯಿ
     ನನಬಿಟ್ಟು ಹೋಗಲು
ಮನಸೇಗೆ ಬಂತು..?
ನಿನ್ನಡಿಗೆರಗಿ ಕ್ಷಮೆ ಕೇಳಬೇಕು
          ಬರುವೆಯಾ ಮರಳಿ..?
          
- ಗಿರೀಶ(ರಾಗಿ), ರಾಮನಗರ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...