ಬುಧವಾರ, ಮೇ 17, 2023

ನಮ್ಮೂರಿನ ಶಿಕ್ಷಣದ ಸ್ಥಿತಿಗತಿ (ಲೇಖನ) - R ಸಾವಿತ್ರಿ, ಹೊಸಪೇಟೆ.

ವಿಜಯನಗರ ಜಿಲ್ಲೆ, ಹೊಸಪೇಟೆ ತಾಲ್ಲೂಕು,ಪಾಪಿನಾಯಕಹಳ್ಳಿ ಗ್ರಾಮಪಂಚಾಯಿತಿಗೆ ಸೇರಿರುವ ನಾಗಪ್ಪ ಕ್ಯಾಂಪ್ನಾ ಒಂದು ಸಣ್ಣ ಕಿರು ಪರಿಚಯ :  ನಾನು  ಮೈನಿಂಗ್   ಏರಿಯಾದಿಂದ ಬಂದವಳು,  ಅಂದರೆ ನಾನು ಜಾಸ್ತಿ ಮೈನಿಂಗ್ ಕೆಲಸ ಮಾಡಿದವಳಲ್ಲ. ನನ್ನ ತಂದೆ ತಾಯಿ  ಆಂಧ್ರದಿಂದ ವಲಸೆ ಬಂದವರು.  ಮೈನಿಂಗ್ ನಲ್ಲಿ ಸುಮಾರು 50  ವರ್ಷಗಳ ಕಾಲ ಕೆಲಸ ಮಾಡಿದವರು.  ಕೇವಲ ನಮ್ಮ ಕ್ಯಾಂಪ್ ನಲ್ಲಿ 150 ಮನೆಗಳನ್ನು ಹೊಂದಿದೆ. 500 ಮತ್ತು 600  ಜನಸಂಖ್ಯೆಯನ್ನು ಹೊಂದಿರುವ ಒಂದು ಸಣ್ಣ ಕ್ಯಾಂಪ್ ನಮ್ಮದಾಗಿದೆ.   ಮೈನಿಂಗ್ ಆರಂಭವಾಗಿದ್ದು 1953 ರಲ್ಲಿ ಸ್ಟಾರ್ಟ್ ಆಗಿದೆ.  ಇಲ್ಲಿನ ಜನರು  ಆಂಧ್ರದಿಂದ ವಲಸೆ ಬಂದವರು ಆಗಿದ್ದರಿಂದ ಮೂಲತಃ ಅವರ ಭಾಷೆಯೇ ತೆಲುಗು  ಭಾಷೆ ಆಗಿದೆ.  ಇಲ್ಲಿನಾ ಜನ ತಮ್ಮ ಜೀವನವನ್ನು ಮೈನಿಂಗ್ ನಲ್ಲಿ  ಮುಂದುವರಿಸಿದರು.
 ಶಿಕ್ಷಣದ ಕೊರತೆ : ಇಲ್ಲಿ ಶಿಕ್ಷಣದಿಂದ ತುಂಬಾ ಮಕ್ಕಳು ಹಾಗೂ ಯುವ ಜನರು ವಂಚಿತರಾಗಿದ್ದಾರೆ. ಏಕೆಂದರೆ ಕೇವಲ ಮೈನಿಂಗ್ ನಿಂದಲೇ ಅಂತ ಹೇಳಬಹುದು. ನಮ್ಮ ಕ್ಯಾಂಪಿನಲ್ಲಿ ಪ್ರೈಮರಿ ಶಾಲೆ  ಒಂದು ಇತ್ತು. ಅದು ಒಂದರಿಂದ ಏಳನೇ ತರಗತಿಯವರೆಗೆ. ಆಗ ಎಲ್ಲಾ ತಂದೆ ತಾಯಿಯರು ಕ್ಯಾಂಪಿನಲ್ಲಿ ಇರುವುದರಿಂದ ಮಕ್ಕಳನ್ನು ಶಾಲೆಗೆ ಕಳಿಸುತ್ತಿದ್ದರು. ಇನ್ನು ಕೆಲವು ಪೋಷಕರು ಅವರ ಜೊತೆಯಲ್ಲಿಯೇ ಮೈನಿಂಗ್ ಕೆಲಸಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಪ್ರೈಮರಿ ಶಾಲೆ ಮುಗಿದ ನಂತರ ಹೈಸ್ಕೂಲ್ ಗೆ ಕಳಿಸಬೇಕಾದರೆ ಎಲ್ಲಾ ಮನೆಗಳಲ್ಲಿ ಒಪ್ಪುತ್ತಿರಲಿಲ್ಲ.  ಏಕೆಂದರೆ ಆರ್ಥಿಕ ಸಮಸ್ಯೆ ಅವರಲ್ಲಿ ಕಾಡುತಿತ್ತು.  ಇನ್ನು ಕೆಲವು ಮನೆಗಳಲ್ಲಿ ಕಳಿಸಲು ಸಿದ್ಧರಾಗಿದ್ದರು ಕೂಡ ಮಕ್ಕಳಲ್ಲಿ ಓದುವ ಆಸಕ್ತಿ ಇರಲಿಲ್ಲ, ಏಕೆಂದರೆ ಮನೆ ಪರಿಸ್ಥಿತಿಯನ್ನು ನೋಡಿ ಅವರಿಗೆ ಹೋಗಲು ಇಷ್ಟವಾಗುತ್ತಿರಲಿಲ್ಲ ಮತ್ತೆ ಅವರಿಗೆ ಶಿಕ್ಷಣದ ಬಗ್ಗೆ ಹರವು ಕೂಡ ಗೊತ್ತಿರಲಿಲ್ಲ.    ಕೆಲವು ಮಕ್ಕಳು SSLC ನಲ್ಲಿ ಸಬ್ಜೆಕ್ಟ್ ಗಳಲ್ಲಿ ಫೇಲ್ ಆದ್ರೆ  ಮತ್ತೆ ಕಟ್ಟುವ ಪ್ರಯತ್ನ ಕೂಡ ಮಾಡುತ್ತಿರಲಿಲ್ಲ. ಕೇವಲ ಲಾರಿ ಲೈಸೆನ್ಸ್ ಗೋಸ್ಕರ SSLC ಯನ್ನು ಓದುತ್ತಿದ್ದರು.  ಈಗಲೂ ಕೂಡ ಅಲ್ಲಿನ ಯುವ ಜನರಿಗೆ ಲಾರಿ ಡ್ರೈವರ್ ಗಳು ಮತ್ತೆ ಕಿನ್ನರ್ ಗಳಾಗಿ ಉಳಿದುಬಿಟ್ಟಿದ್ದಾರೆ. ಈ ಎರಡು ಕೆಲಸಗಳು ಬಿಟ್ರೆ ಇನ್ನೂ ಯಾವುದು ಕೆಲಸ  ಅವರಿಗೆ ಗೊತ್ತೇಯಿಲ್ಲ. ಏಕೆಂದರೆ ಜಾಸ್ತಿ ಮೈನಿಂಗ್ ಕೆಲಸಕ್ಕೆ ಮಾತ್ರ ಪ್ರಾಮುಖ್ಯತೆ ಕೊಡುತ್ತಾರೆ. ಹಾಗೆಯೇ ಹೆಣ್ಣು ಮಕ್ಕಳು ಕೂಡ ಗಾರೆ ಕೆಲಸಕ್ಕೆ, ಬಿಲ್ದರ್ ಕಳಸಕ್ಕೆ, ಕೂಲಿ ಕಳ್ಸಕ್ಕೆ ಸಣ್ಣ ಸಣ್ಣ ವಯಸ್ಸಿಗೆ ಕೆಲಸ ಮಾಡಲು ಹೋಗ್ತಾರೆ. 
 ನಮ್ಮ ಕ್ಯಾಂಪಿನಲ್ಲಿ ಆರ್ಥಿಕವಾಗಿ ಸಾಮಾಜಿಕವಾಗಿ  ದುರ್ಬಲರಾಗಿದ್ದೇವೆ.  ಏಕೆಂದರೆ ನಮ್ಮ ಊರಿನಲ್ಲಿ ಮೈನಿಂಗ್ ಗೆ ಇರುವ ಪ್ರಾಮುಖ್ಯತೆ   ಶಿಕ್ಷಣಕ್ಕೆ ಇಲ್ಲ.    ದಿನಕ್ಕೆ 150 ರುಪಾಯಿಯಂತೆ  ಗಣಿಗಾರಿಕೆಯಲ್ಲಿ ಲೇಬರ್, ಹೆಲ್ಪರ್, ಕಲ್ಲು ಹೊಡೆಯುವುದು  ಮಾಡುತ್ತಿದ್ದವರು. ಇಲ್ಲಿನಾ ಮಕ್ಕಳು ಶಿಕ್ಷಣದಿಂದ ದೂರವಾಗಿ ಮೈನಿಂಗ್ ನಲ್ಲಿ ಕೆಲಸ ಮಾಡುತ್ತ ಸಣ್ಣ ವಯಸ್ಸಿಗೆ ಕ್ಯಾನ್ಸರ್, ಹೃದಯ, ಅಂಗವಿಕಲರಾಗಿದ್ದಾರೆ, ಕಿವಿ ಕೇಳಿಸದೆ ಇರುವುದು, ಎದೆ ನೋವು, ಮಂಡಿ ನೋವು, ಬೆನ್ನು ನೋವು ಇವುಗಳು ಕಾಣಿಸಿಕೊಳ್ಳುತ್ತಿವೆ. ನಾವು ಗಣಿಭಾದಿತ ಪ್ರದೇಶಗಳಿಲ್ಲ ವಾಸ ಮಾಡುವುದರಿಂದ  ಇತ್ತೀಚಿಗೆ ಎರಡು ತಿಂಗಳಯಿಂದೆ ಜಿಲ್ಲಾಡಳಿತ ಮತ್ತು ಸಖಿ ಸಂಸ್ಥೆಯವರು ಆರ್ಥಿಕವಾಗಿ ಸಾಮಾಜಿಕವಾಗಿ ನಮ್ಮ ಕ್ಯಾಂಪ್ ನಲ್ಲಿ ಸರ್ವೆಯನ್ನು ಮಾಡಿದದ್ದೆವು. ಅದರಲ್ಲಿ ನಾವು ಕೂಡ ಭಾಗವಹಿಸಿದ್ದೆವು. ಆಗಿನ ಪರಿಸ್ಥಿತಿಯೇ  ಬೇರೆ, ಈಗಿನ ಪರಿಸ್ಥಿತಿಯೇ  ಬೇರೆಯಾಗಿದೆ. ಯಾಕೆಂದರೆ  ಹಾಗೀನ ತರ  ಲಾರಿಗಳಿಗೆ ಮೂಮೆಂಟ್ ಇಲ್ಲದೆ ಮನೆ ಮುಂದೇನೆ ನಿಂತಿವೆ. ಇದರಿಂದ ಅಲ್ಪ ಸ್ವಲ್ಪ ಶಾಲಾಕಲೇಜುಗಳಿಗೆ  ಹೋಗುತ್ತಿರುವ ಯುವಜನರಿಗೆ  ತುಂಬಾ  ಸಮಸ್ಯೆಗಳು ಎದುರಗುತ್ತಿವೆ.  ಆದರಿಂದ ನಾವು ನಮ್ಮೂರಲ್ಲಿ ಹತ್ತು ಜನ ಯುವಜನರನ್ನು ಸೇರಿಸಿ ಒಂದು  ಸಣ್ಣ ಗುಂಪು ರಚನೆ ಮಾಡಿಕೊಂಡೆವು.ಆ ಗುಂಪಿಗೆ ಗಗನ ಯುವಬಳಗ ಎಂದು ಹೆಸರು ಇಟ್ಟುಕೊಂಡೇವು. ಇದರಿಂದ ವಾರಕ್ಕೆ ಒಂದು ದಿನವಾದರೂ  ಕಲಿಕೆಗೆ ಸಂಬಂಧ ಪಟ್ಟಂತೆ ನಾಲ್ಕು ಕ್ಯಾಂಪ್ ಗಳಿಗೆ ಅವರ್ನೆಸ್ ಮಾಡುತ್ತಿದ್ದೆವು.  ಮಹಿಳೆಯಾರಿಗೆ, ದಲಿತ ಮಹಿಳೆಯಾರಿಗೆ, ಯುವಜನರಿಗೆ ಮತ್ತು ಮಕ್ಕಳಿಗೆ  ಶಿಕ್ಷಣದ ಅರಿವು ಮೂಡಿಸಬೇಕೆಂದು ನಮ್ಮ ಸಖಿ ಸಂಸ್ಥೆ ಕಡೆಯಿಂದ  ಪ್ರಯತ್ನ ಮಾಡುತ್ತಿದೆವೆ. ಇನ್ನೊಂದು ನಮ್ಮ ಕ್ಯಾಂಪ್ನಲ್ಲಿ ಮಹಿಳೆಯರಿಗೆ ಮಾತನಾಡುವ ಹಕ್ಕು,  ಶಿಕ್ಷಣದ ಹಕ್ಕು, ಉದ್ಯೋಗ ಹಕ್ಕು ಇಲ್ಲ. ಅವರಿಗೆ ಯಾವುದೇ ರೀತಿಯಾ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ಅವಕಾಶ ಕೂಡ ಅವರಿಗೆ ಇಲ್ಲದಂತೆಯಾಗಿದೆ.
ಗಣಿ ಬಾಧಿತ ಪ್ರದೇಶಗಳಲ್ಲಿ ಜಿಲ್ಲಾಡಳಿತದ DMF ಅಡಿಯಲ್ಲಿ ಬರುವ  ಫ್ಯಾಂಡ್ ಬಗ್ಗೆ  ಯುವ ವಿದ್ಯಾರ್ಥಿಗಳಿಗೆ ಮಾಹಿತಿ ಇಲ್ಲ. ಆದರಿಂದ ನಮ್ಮ ಸಂಸ್ಥೆ ನೆರವುನಿಂದ ನಾವು ಜಿಲ್ಲಾಧಿಕಾರಿ ಕಚೇರಿ ಹೋಗಿ ಮೂಲಭೂತ ಸೌಕರ್ಯ ಗಳು ಕಲ್ಪಿಸಬೇಕೆಂದು ಮನವಿ ಸಲ್ಲಿಸಿದ್ದೆವು.
ನಮ್ಮ ಗಗನಯುವ ಬಳಗ ಗುಂಪಿನಿಂದ ಬಾಲ ಕಾರ್ಮಿಕ ಪದ್ಧತಿ, ಬಾಲ್ಯ ವಿವಾಹ ತಡೆ, ದೇವದಾಸಿ ಪದ್ಧತಿಯ  ನಿರ್ಮೂಲನೆ ಮಾಡಲು ಸಣ್ಣ ಪುಟ್ಟ ಕಾರ್ಯಕ್ರಮಗಳು, ನಾಟಕ ಪ್ರದರ್ಶನ ಮಾಡುತ್ತಿದ್ದೆವು. ಇದರಿಂದ ಶಿಕ್ಷಣದಿಂದ ವಂಚಿತರಾದ ಮಕ್ಕಳಿಗೆ ಶಾಲೆಗೆ ಬಗ್ಗೆ ಒಂದು ಸಣ್ಣಅರಿವು ಬರುವ ಆಗೇ ಪ್ರಯತ್ನ ಮಾಡಿದೆವು. ಇತ್ತೀಚಿಗೆ ನಮ್ಮ ಕ್ಯಾಂಪ್ ನಲ್ಲಿ ಹತ್ತು ಮಂದಿ ಅಷ್ಟೇ ಡಿಗ್ರಿ ಕಾಲೇಜ್ ಗಳಿಗೆ  ಹೋಗ್ತಾಯಿದ್ದಾರೆ.  ಈ ವಿದ್ಯಾರ್ಥಿಗಳಿಗೆ ಕೂಡ ಸರಿಯಾಗಿ ಬಸ್ ವ್ಯವಸ್ಥೆ ಇಲ್ಲದ ಕಾರಣ ಆ ವಿದ್ಯಾರ್ಥಿಗಳು ಪ್ರತಿದಿನ ಆಟೋ ಗೆ  40 ರೂಪಾಯಿ ಚಾರ್ಜ್ ಕೊಟ್ಟು ಕಾಲೇಜುಗಳಿಗೆ ಹೋಗುತ್ತಾರೆ. ನಮ್ಮೂರಿಗೆ ಇವತ್ತಿನವರೆಗೂ ಒಂದು ಸಲವಾದರೂ ಬಸ್ ಎಂಬುದು ಬಂದೇ ಇಲ್ಲ! ಇನ್ನೂ ಮನೆಯಲ್ಲಿಯಂತೂ ನಾವು ದುಡಿದು ತಿನ್ನೋದಕ್ಕೆ ಕಷ್ಟವಾಗುತ್ತಯಿದೆ  ಇನ್ನೂ ನಿಮಗೆ  ಆಟೋ ಚಾರ್ಜ್ ಗೆ , ಕಾಲೇಜು ಫೀಜ್ ಗೆ, ಬುಕ್ಸ್, ಬ್ಯಾಗ್  ಬಟ್ಟೆ ಗೆ ಕೊಟ್ಟು ನಿಮ್ಮನ್ನು ಸಾಕಬೇಕಾದ್ರೆ ತುಂಬಾ ಕಷ್ಟವಾಗುತ್ತದೆ ಅಂತಾ ಮನೆಯಲ್ಲಿ ಪೋಷಕರು ಹೇಳುತ್ತಾರೆ. ಇನ್ನೂ ಗ್ರಾಮಪಂಚಾಯಿತಿ ಕಡೆಯಿಂದ ಬುಕ್ ಬಿಲ್ ಅಮೌಂಟ್ ಇಬ್ಬರಿಗೊ ಮೂವರಿಗೋ ಬರುತ್ತೆ. ಯಾಕೆ ನಮಗೂ ಬಂದಿಲ್ಲ ಅಂತಾ ಕೇಳಿದ್ರೆ ಮತ್ತೊಮ್ಮೆ ಹಾಕ್ತಿವಿ ಅಂತಾ ಹೇಳುತ್ತಾರೆ. ವಿದ್ಯಾರ್ಥಿಗಳಿಗೆ ಅಂತೂ ಓದುವುದಕ್ಕೆ ಗ್ರಂಥಾಲಯವೆ ಇಲ್ಲ. ಇದ್ದಾರು ಅದು ಪಾಪಿನಾಯಕನಹಳ್ಳಿ ಗ್ರಾಮಪಂಚಾಯಿತಿ ಯಲ್ಲಿ ಇದೆ. ನಮ್ಮೂರಿನಿಂದ 6 ಕಿಲೋಮೀಟರ್ ದೂರದಲ್ಲಿ ಇದೆ. ಆದರಿಂದ ಮಹಿಳೆಯರಿಗೆ  ಗ್ರಂಥಾಲಯಕ್ಕೆ ಹೋಗಲು ತೊಂದ್ರೆ ಆಗ್ತಿದೆ. ಇನ್ನೂ ತುಂಬಾ ಸಮಸ್ಯೆಗಳು ನಮ್ಮೂರಿನ ಯುವಜನರು ಅನಾಭವಿಸುತ್ತಿದರೆ. ಇವೆಲ್ಲ ಕಷ್ಟಗಳ್ಳನ್ನು ಮೀರಿ ತಮ್ಮ ಗೆಲುವಿಗಾಗಿ ಶ್ರಮ ವಾಯಿಸುತ್ತಿದ್ದಾರೆ.

- R ಸಾವಿತ್ರಿ, ಹೊಸಪೇಟೆ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...