ಗುರುವಾರ, ಜೂನ್ 8, 2023

ನನಸಾಗದ ಕನಸು (ಕವಿತೆ) - ಮುರುಳಿ ಆರ್.ಎನ್. ರಾಯಚೆರ್ಲು.

ನನಸಾಗದ ಕನಸುಗಳ ನಡುವೆ,
ಒದ್ದಾಡುತಿದೆ ಮನಸು.
ಕನಸು ನನಸಾಗುತ್ತಾ, ಕನಸಾಗೇ,
ಉಳಿಯುತ್ತಾ ನೀ ತಿಳಿಸು.

ನೀ ನನ್ನ ಬೇಡಾಂದ ಆ ಕ್ಷಣದಲ್ಲಿ,
ನಾ ಕಂಡೆ ನನ್ನ ಶವ ಮಸಣದಲ್ಲಿ.
ನಿಜ ನಾವಿಬ್ಬರು ಬೇರಾದೆವು ಕಣೇ,
ನನ್ನಲ್ಲಿ ನಿನ್ನ ಸ್ಥಾನ ಇನ್ನೊಬ್ಬರಿಗಿಲ್ಲ ನನ್ನಾಣೆ.||ನನಸಾಗದ ||

ನೀನನ್ನ ಕಡೆಗಣಿಸಿ ಹೋಗುತಿಯೇ,
ನನ್ನ ಅನಾಥ ಮಾಡುತಿಯೇ.
ಮುಂದೊಂದು ದಿನ ನೀ ಬಂದ್ರು ನಾ ಸಿಗಲ್ಲ,
ಯಾಕಂದ್ರೆ ಅಂದು ಈ ನಿನ್ನ ನಾನು ಬದುಕಿರೋಲ್ಲ. ||ನನಸಾಗದ||

ಅಂದು ನಾವು ಕಂಡ ಕನಸು ನನಸಾಗಲಿಲ್ಲ,
ನೀನು ಕೈ ಕೊಡುತ್ತೀಯೆಂದು ಕನಸೂ ಕಂಡಿರಲಿಲ್ಲ.
ನಾ ಕಂಡ ಕನಸು ಕನಸಾಗೇ ಉಳಿಯಿತು,
ನಾನು ಕಂಡಿರದ ಕನಸುಗಳು ನನಸಾದವ ||ನನಸಾಗದ||

- ಮುರುಳಿ ಆರ್.ಎನ್. ರಾಯಚೆರ್ಲು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...