ಅಂದು ಕೇಳಿದ ಮಂದ ಹಾಡದು
ನೊಂದ ಮನವ ಮರು ಅರಳಿಸಿತ್ತು,
ಬಂಧ ಬೆಸೆಯುವ ರಾಗದೆಳೆಯೊಳು
ಗಂಧ ಅರೆದಿಹ ಗಮದ ಮತ್ತು...
ಮತ್ತೆ ನೆನೆದೆನಾ ಮರೆತ ರಾಗವ
ಚಿತ್ತದೊಳಗೆ ಮರು ಗುನುಗುತಾ...
ಹುತ್ತದಂತೆ ಹೊರೆದ ದುಗುಡವ
ಕೆತ್ತಿ ಕೆಡವಿತಾ ನಾದ ಮಿಡಿಯುತಾ...
ಕಂದಯೆನ್ನನು ಆಲಿಸೆನುತ
ಚೆಂದದಿಂದಲಿ ನಿನಾದ ಹೊರಳಿ
ಕೊಂದು ಬಿಟ್ಟಿತು ಕುಹಕ ತರಂಗವ
ತಂದಿತೆನಗೆ ತಂಪೆರೆವ ನೆರಳ ಮರಳಿ...
ಅನುಬಂಧ ಬಿಗಿದಿದೆ ದನಿಯ ಬಲದಲಿ
ಮನವು ನಲಿಯುವ ಒಲವಿದೆ...
ದನವ ಕಾಯುವಾ ಗೊಲ್ಲನಾ ಉಲಿ
ಹೂಬನದ ತೆರದೀ ಮರು ಸೆಳೆದಿದೆ...
ಮಕರಂದಕಿಂತಲು ಮುದವಾ ಇಂಚರ
ಅಕ್ಕರೆಯ ಸಖನಾ ಸವಿಮೋಹದಂತೆ...
ಹೊಕ್ಕುವುದು ಹದವಾಗಿ ಹಿತವಾಗಿ ಹೃದಯದೊಳು
ಸರಿಸುತಲಿ ಸುಕ್ಕುಗಳ ಬಿತ್ತುವುದು ಸುಮಧುರಾ ಕಂತೆ...
- ಸೌಜನ್ಯ ದಾಸನಕೊಡಿಗೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ