ಗುರುವಾರ, ಜೂನ್ 22, 2023

ಯೋಗದಿಂದ ಆರೋಗ್ಯ (ಕವಿತೆ) - ಎಲ್ ಎಸ್ ಆಶಾ ಶ್ರೀಧರ್, ಶಿವಮೊಗ್ಗ.

ಯೋಗ ಹೊಂದಿಹುದು ಅಷ್ಟಾಂಗ ಮಾರ್ಗವನು
ದೇಹ ಮನಸಿಗೆ ಸಾಧನವು ಸ್ವಯಂ ನಿಯಂತ್ರಣವು
ಯಮ ನಿಯಮ ಆಸನ ಪ್ರಾಣಾಯಾಮ
ಪ್ರತ್ಯಾಹಾರ ಧಾರಣ ಧ್ಯಾನ ಸಮಾಧಿ ನಾಮವು

ಬುದ್ಧಿ ದೇಹ ಮನಸನು ನಿಯಂತ್ರಿಸುವುದು
ದೇಹ ಮನಸು ಸಡಿಲವಾಗಿ ಹಗುರಗೊಳ್ಳುವುದು
ಆತ್ಮನೊಂದಿಗೆ ಪರಮಾತ್ಮನ ಸೇರಿಸುವುದು
ಆಸನ ಮುದ್ರೆಗಳು ಮಹತ್ವ ಹೊಂದಿಹುದು

ಆಸನಗಳಿಗಧಿಪತಿಯು ಸೂರ್ಯ ನಮಸ್ಕಾರವು
ಜೀವಶಕ್ತಿ  ಹಿಡಿತವೇ ಪ್ರಾಣಾಯಾಮವು
ನಿತ್ಯ ದಿನಚರಿಯಾಗಲು ಇಲ್ಲ ಯಾವ ರೋಗವು
ಇದರಲ್ಲಡಗಿಹುದು ಸನಾತನ ಭಾರತದ ಮಹತ್ವವು

ಶರೀರವು ಬೆಳೆಯಲು ಪ್ರೇರಕ ವೃಕ್ಷಾಷನ
ಉದರದ ಬೊಜ್ಜು ಕರಗಲು ವಜ್ರಾಸನ
ಬೆನ್ನು ಕೀಲು ಸೊಂಟ ನೋವಿಗೆ ಪದ್ಮಾಸನ
ಸಮತೋಲನ ಶಕ್ತಿ ಕಾಪಾಡುವುದು ತಾಡಾಸನ

ದೈಹಿಕ ಮಾನಸಿಕ ಶಕ್ತಿ ಹೆಚ್ಚಳಕ್ಕೆ ಪ್ರಾಣಮುದ್ರೆ
ಗ್ಯಾಸ್ಟ್ರಿಕ್ ಸೊಂಟ ಮಂಡಿ ನೋವಿಗೆ ವಾಯುಮುದ್ರೆ
ಚರ್ಮ ಕೂದಲು ಸ್ನಾಯು ಬೆಳವಣಿಗೆಗೆ ಪೃಥ್ವಿ ಮುದ್ರೆ
ಒತ್ತಡ ಕೋಪ ಉನ್ಮಾದ ನಿದ್ರಾಹೀನತೆಗೆ ಜ್ಞಾನ ಮುದ್ರೆ

ಯೋಗವು ತುಂಬುವುದು ಚೇತನ ಮನಕೆ
ಅಶುಚಿಯ ನಶಿಸಿ ಶುಚಿಗೊಳಿಸುವುದು ದೇಹಕೆ
ಧ್ಯಾನದಿಂದ ಬರುವುದು ಏಕಾಗ್ರತೆ
ದೊರೆವುದು ಉತ್ತಮ ಜೀವನ ನಮಗೆ

ಬದಲಾಗಿದೆ ಜೀವನಕ್ರಮ ಈ ದಿನ
ಸಮಯವೇ ಇಲ್ಲ ತರಾತುರಿಯ ಜೀವನ
ಬದಲಾಗಲೇ ಬೇಕಾಗಿದೆ ಜೀವನ ಕ್ರಮ
ಯೋಗದಿಂದ ಆರೋಗ್ಯವಾಗುವುದು ಸುಗಮ.

 - ಎಲ್ ಎಸ್ ಆಶಾ ಶ್ರೀಧರ್,  ಶಿವಮೊಗ್ಗ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...