ಗುರುವಾರ, ಜೂನ್ 22, 2023

ಚಿಮ್ಮುವ ನೀರು (ಕವಿತೆ) - ಕುಮುದ.

ಹಸುವು ಬಂದಿದೆ
ದಣಿದು ನಿಂತಿದೆ
ನೋಡಿ ಸಾಕಾಗಿದೆ
ಮನಸು ಕರಗಿದೆ

ಅಮ್ಮ ಬಂದರು
ಮೈ ತೊಳೆವರು
ಜಾಣ ಬುದ್ಧಿಯಿದೆ
ಸುಮ್ಮನೆ ನೋಡುತಿದೆ

ಓಡಲು ಮನಸ್ಸಿಲ್ಲ
ಸ್ನಾನ ಹಿತವಾಗಿದೆ
ಚಿಮ್ಮುವ ನೀರು
ರಭಸವು ಜೋರು

ಹರಿಯುವ ಜಲ
ಇಬ್ಬರೂ ಕಿಲಕಿಲ
ನೋಟವೂ ಚಂದ
ಪ್ರಕೃತಿಯ ಆನಂದ.

- ಕುಮುದ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...