ಗುರುವಾರ, ಜೂನ್ 22, 2023

ಅಮ್ಮ ಅಂದ್ರೆ ಎಲ್ಲಾ.. (ಕವಿತೆ) - ರಾಚು‌ ಬಳಿಗಾರ, ಬಾಗಲಕೋಟೆ.

ಅಮ್ಮ ಅಂದ್ರೆ ಬದುಕಿನ ಬೆನ್ನೆಲುಬು
ಅಮ್ಮ ಅಂದ್ರೆ ಮಮತೆಯ ಮಡಿಲು
ಅಮ್ಮ ಅಂದ್ರೆ ಮಕ್ಕಳ ಬದುಕಿನ ಜೀವತಂತಿ
ಅಮ್ಮ ಅಂದ್ರೆ ಸಾವಿರ ಕಷ್ಟಗಳನ್ನು ಎದುರಿಸೋ ಗಟ್ಟಿಗಿತ್ತಿ
 
ಅವ್ವ ಅಂದ್ರೆ ಆಕಾಶ 
ಅವ್ವ ಅಂದ್ರೆ ಮಕ್ಕಳು ಕೇಳಿದ್ದನ್ನು ಕೊಡೋ ಕಲ್ಪವೃಕ್ಷ 

ಅಮ್ಮ ಅಂದ್ರೆ ಆ ದೇವರ ಪ್ರತಿರೂಪ
ಅಮ್ಮ ಅಂದ್ರೆ ಮನೆ ಅಷ್ಟೇ ಅಲ್ಲ ಭೂಮಿ ಬೆಳಗೋ ದೀಪ 
ಅಮ್ಮ ಅಂದ್ರೆ ಭರವಸೆಯ ಬೆಳಕು 
ಅಮ್ಮ ಅಂದ್ರೆ ಅದಮ್ಯ ಪ್ರೀತಿಯ ಸೆಲೆ
ಅಮ್ಮ ಅಂದ್ರೆ ಆತ್ಮವಿಶ್ವಾಸ 
ಅಮ್ಮ ಅಂದ್ರೆ ಕೊನೆಯಿರದ ಉತ್ಸಾಹ
ಅಮ್ಮ ಅಂದ್ರೆ ಪ್ರತ್ಯಕ್ಷ ದೇವತೆ
ಅಮ್ಮ ಅಂದ್ರೆ ಸದಾ ಬೆಳಗೋ ಮಾನವೀಯತೆ 
ಅಮ್ಮ ಅಂದ್ರೆ ಎಲ್ಲರನ್ನೂ ಪ್ರೀತಿಸೋ ಸಾಗರ
ಅಮ್ಮ ಅಂದ್ರೆ ಪ್ರೀತಿ ತುಂಬಿದ ಸರೋವರ.

- ರಾಚು ಬಳಿಗಾರ, ಬಾಗಲಕೋಟೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...