ಗುರುವಾರ, ಜೂನ್ 22, 2023

ಬೆಳಗು (ಕವಿತೆ) - ಮಾಲತಿ ಮೇಲ್ಕೋಟೆ.

ರವಿಯುದಿಸಿ ಆಗಸದಿ
ಕಿರಣಗಳ ಚೆಲ್ಲುತಲಿ
ನಭದಲ್ಲಿ ಕಾಂತಿಯನು ತುಂಬುತಿರುವಾ

ಬಿರಿದು ಸುಮಗಳು ಅರಳಿ
ಕಂಪನ್ನು ಸೂಸುತ್ತ
ಪರಿಮಳವ ಚೆಲ್ಲುತಿವೆ
ಸುತ್ತೆಲ್ಲವೂ

ಕುಕ್ಕುಟವು ಕೂಗುತ್ತ
ಬೆಳಗಾಯಿತೆನ್ನುತಲಿ
ಮಲಗಿರುವವರನ್ನು
ಎಚ್ಚರಿಸಿದೇ

ಬೇಲಿಗಳ ಸಂದಿಯಲಿ
ರವಿಕಿರಣ ಇಣುಕುತ್ತ
ಬಿಸಿಲಕೋಲನು ಮೆಲ್ಲ
ತೂರುತ್ತಿದೇ

ರವಿಯ ಕಿರಣವು ಸೋಕಿ
ಇಬ್ಬನಿಯು ಮುತ್ತಿನೊಲು
ಹುಲ್ಲುಹಾಸಿನ ಮೇಲೆ
ಹೊಳೆಯುತ್ತಿದೇ

ಮರದ ಮೇಲ್ ಹಕ್ಕಿಗಳು
ಚಿಲಿಪಿಲಿಯಗುಟ್ಟುತಲಿ
ಆಹಾರ ಅರಸುತಲಿ
ಹೊರಡುತ್ತಿವೇ

ದನಕರುಗಳೆಲ್ಲವೂ
ಮೇವನ್ನು ಅರಸುತ್ತ
ಬಯಲಿನೆಡೆ ಗುಂಪಲ್ಲಿ
ತೆರಳುತ್ತಿವೇ

ಜಡತೆಯನು ಓಡಿಸುತ
ಚೇತನವ ತುಂಬುತ್ತ
ರವಿ ಬೆಳಕ ನೀಡುತ್ತ
ಬರುತಿರುವನೂ

- ಮಾಲತಿ ಮೇಲ್ಕೋಟೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...