ಮನುಷ್ಯ ಜೀವನದಲ್ಲಿ ಬದುಕಬೇಕು
ನಾಲ್ವರೊಂದಿಗೆ ಬೆರೆತು- ಅರಿತು
ಸಹನೆ- ತಾಳ್ಮೆಯಿಂದ ಹೊಂದಿಕೊಂಡು
ಹೋಗುವ ಗುಣವೇ ಅಸಹಾಯಕತೆಂದು
ತಿಳಿದು ದೌರ್ಜನ್ಯ ಎಸಗಿದರೆ ಸಹಿಸದಿರು
ಮನವೆ
ಆತ್ಮಭಿಮಾನ ಮುಖ್ಯ ಬದುಕಿಗೆ
ಆತ್ಮ ಹತ್ಯೆ ಮಹಾಪಾಪ ಆತ್ಮಕ್ಕೆ
ನಡೆ - ನುಡಿ ಶುದ್ದವಾಗಿದ್ದು
ಉತ್ತಮ ಮಾರ್ಗದಲ್ಲಿ
ನೀ ನಡೆ ಮನವೆ
ಒಳ್ಳೆಯದಕ್ಕೆ ಸಂಕಷ್ಟ ಇದೆ
ಆಗೆಂದ ಮಾತ್ರಕ್ಕೆ ಎದೆಗುಂದದಿರು
ಕಾಪಾಡುವನು ಪರಮಾತ್ಮ
ನಿನ್ನ ಆತ್ಮಭಿಮಾನಕ್ಕಿರಲಿ ಗೌರವ
ಅದು ನಿನ್ನ ವ್ಯಕ್ತಿತ್ವದ ಪ್ರತಿರೂಪ.
- ಭಾಗ್ಯ ಎಲ್.ಆರ್. ಶಿವಮೊಗ್ಗ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ