ದೀಪ ಬೆಳಗಬೇಕು ನಾವು
ಮನೆ ಮನಗಳಲ್ಲಿ.
ಮನದ ಕೊಳೆ ತೊಳೆಯಲು
ಜ್ಞಾನದ ದೀಪ ಹಚ್ಚಬೇಕು..
ಅಜ್ಞಾನದ ತಿಮಿರವ ಕಳೆಯಲು
ಸುಜ್ಞಾನದ ದೀಪ ಬೆಳಗಬೇಕು..
ಹೃದಯದ ದೀಪ ಬೆಳಗಲು
ಪ್ರೀತಿಯ ದೀಪ ಹಚ್ಚಬೇಕು..
ಮುದುಡಿದ ಮನವು ಅರಳಲು
ನಗುವೆಂಬ ದೀಪ ಬೆಳಗಬೇಕು..
ಇರುಳು ಕಳೆದು ಬೆಳಕಾಗಲು
ಲವಲಕೆಯ ದೀಪ ಬೆಳಗಬೇಕು..
ಪಡುವಣದ ಸೂರ್ಯ ಪವಡಿಸಲು
ಮುಸ್ಸಂಜೆಯ ದೀಪ ಪ್ರಜ್ವಲಿಸಬೇಕು..
ಉಸಿರು ಸದಾ ಹಸಿರಾಗಿರಲು
ನಂಬಿಕೆಯ ದೀಪ ಬೆಳಗಬೇಕು..
ದೀಪದಿಂದ ದೀಪವ ಹಚ್ಚಿ
ಮಾನವತೆಯ ಮೆರೆಯಬೇಕು..
ಜೀವನದ ಯಾನದಲ್ಲಿ ಮುನ್ನುಗ್ಗಲು
ಮಾನವತೆಯ ದೀಪಧಾರಿಗಳಾಗಬೇಕು
- ಜ್ಯೋತಿ ಆನಂದ ಚಂದುಕರ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ