ಶುಕ್ರವಾರ, ಜೂನ್ 23, 2023

ಮರೆಯದ ವಿದ್ಯಾರ್ಥಿ ನಿಲಯ (ಕವಿತೆ) - ಮುತ್ತು.ಯ.ವಡ್ಡರ, ಬಾಗಲಕೋಟೆ.

ಅಕ್ಷರಾ ನೀಡುತಿದೆ ವಿದ್ಯಾಲಯ
ಅನ್ನವ ನೀಡಿದೆ ವಸತಿ ನಿಲಯ
ಹಲವು ಮನಸ್ಸುಗಳ ಆಲಯ
ಪ್ರತಿನಿತ್ಯ ಸ್ನೇಹಮಯ ತಾರಾಲಯ

ವಿದ್ಯೆಯ ಜೊತೆಗೆ ಅನ್ನ ನೀಡಿದ ಅರಮನೆ
ಎಂದು ಆಗಲಿಲ್ಲ ವಿದ್ಯಾರ್ಥಿಗಳಿಗೆ ಸೆರೆಮನೆ
ಯಾವತ್ತೂ ನೆನಪೇ ಆಗಲಿಲ್ಲ ನಮ್ಮ ಮನೆ
ನಿಲಯ ಪಾಲಕರು ತಂದೆ ಎಂದರೆ ತಪ್ಪಾಗದು ನಮ್ಮಾಣೆ ..

ಬಿಸಿ ಬಿಸಿ ಊಟ ತನ್ನನೆಯ ನಿದ್ದೆಯಲಿ 
ಪರಿಶ್ರಮದಿ ಓದಲು  ಬೇಗ ಎದ್ದೆ ದಿನಾಲು
ಕಲಿತೆ ಸಮಯ ಪ್ರಜ್ಞೆ  ಶಿಸ್ತು ಇಲ್ಲಿರಲು
ಹೆಮ್ಮೆ ಅನಿಸುತ್ತಿದೆ ಹಾಸ್ಟೆಲ್ ಗೆ ನಾನು ನಮಸ್ಕರಿಸಲು...

ಕಷ್ಟಕ್ಕೆ ಸ್ಪಂದಿಸುವ ಸ್ನೇಹಿತರಿರಲು
ನೊಂದ ಮನಸ್ಸಿಗೆ ನಿಲಯ ಪಾಲಕರಿರಲು
ಮರೆಯಲ್ಲ ನಾ ಎಂದು ನೆನಪಿನ ಕನಸಿರಲು
ಸ್ವರ್ಗದ ಖುಷಿಯ ಕಂಡೆ  ಪ್ರತಿಕ್ಷಣ ಇಲ್ಲಿರಲು...

- ಮುತ್ತು.ಯ.ವಡ್ಡರ ( ಶಿಕ್ಷಕರು )
ಬಾಗಲಕೋಟ
Mob-9845568484.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...