ಬುಧವಾರ, ಸೆಪ್ಟೆಂಬರ್ 13, 2023

ಏಕಾಂಗಿ ಸಂಚಾರಿ (ಕವಿತೆ) - ಭಾಗ್ಯ ಎಲ್.ಆರ್. ಶಿವಮೊಗ್ಗ.

ನಾನೊಮ್ಮೆ ಹೊರಟೆನು ಏಕಾಂಗಿ ಸಂಚಾರಿಯಾಗಿ 
 ಹಳ್ಳಿಯಲ್ಲಿ ಬಾಲ್ಯದ ನೆನಪುಗಳ ಸಂಗ್ರಹಕಿಯಾಗಿ
ದಾರಿಯಲ್ಲಿ ನಿಂತೆನು ಪ್ರಕೃತಿಯ ಆರಾಧಕಿಯಾಗಿ 
ಮನಸ್ಸು- ದೇಹಗಳೆರಡರು ನವ ಚೈತನ್ಯಮಯವಾಗಿ,
 
ನಗರದ ರಸ್ತೆಗಳ ಡಾಂಬರೀಕರಣ ವ್ಯವಸ್ಥೆಯು 
ವಾಹನಗಳ   ಸಂಚಾರದ  ಶಬ್ದದ  ದಟ್ಟಣೆಯು 
ಮನಸ್ಸು -ದೇಹಗಳೆರಡಕ್ಕೆ ನೀಡುವುದು ಅಹಿತಕರ 
ಆದರೂ ನೆಲೆಸುವೆವು ಜೀವನ ನಿರ್ವಹಣೆಗೋಸ್ಕರ,

ಏಕಾಂಗಿ ಸಂಚಾರಿಯ ಜೀವನವು ಸುಂದರ 
ಭಾವನೆಗೆ ಸ್ಪಂದಿಸುವ ಸಂಗಾತಿ ಸುಮಧುರ 
ಹಳ್ಳಿ-ದಿಲ್ಲಿ ಎಲ್ಲಿಯಾಗಲಿ ನೆಮ್ಮದಿಯ ಗೂಡು 
ದೊರೆತರೆ  ಅದುವೇ  ಸ್ವರ್ಗಲೋಕದ  ಬೀಡು.

- ಭಾಗ್ಯ ಎಲ್.ಆರ್. ಶಿವಮೊಗ್ಗ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...