ಬುಧವಾರ, ಸೆಪ್ಟೆಂಬರ್ 13, 2023

ಏಕಾಂಗಿ ಸಂಚಾರಿ (ಕವಿತೆ) - ಭಾಗ್ಯ ಎಲ್.ಆರ್. ಶಿವಮೊಗ್ಗ.

ನಾನೊಮ್ಮೆ ಹೊರಟೆನು ಏಕಾಂಗಿ ಸಂಚಾರಿಯಾಗಿ 
 ಹಳ್ಳಿಯಲ್ಲಿ ಬಾಲ್ಯದ ನೆನಪುಗಳ ಸಂಗ್ರಹಕಿಯಾಗಿ
ದಾರಿಯಲ್ಲಿ ನಿಂತೆನು ಪ್ರಕೃತಿಯ ಆರಾಧಕಿಯಾಗಿ 
ಮನಸ್ಸು- ದೇಹಗಳೆರಡರು ನವ ಚೈತನ್ಯಮಯವಾಗಿ,
 
ನಗರದ ರಸ್ತೆಗಳ ಡಾಂಬರೀಕರಣ ವ್ಯವಸ್ಥೆಯು 
ವಾಹನಗಳ   ಸಂಚಾರದ  ಶಬ್ದದ  ದಟ್ಟಣೆಯು 
ಮನಸ್ಸು -ದೇಹಗಳೆರಡಕ್ಕೆ ನೀಡುವುದು ಅಹಿತಕರ 
ಆದರೂ ನೆಲೆಸುವೆವು ಜೀವನ ನಿರ್ವಹಣೆಗೋಸ್ಕರ,

ಏಕಾಂಗಿ ಸಂಚಾರಿಯ ಜೀವನವು ಸುಂದರ 
ಭಾವನೆಗೆ ಸ್ಪಂದಿಸುವ ಸಂಗಾತಿ ಸುಮಧುರ 
ಹಳ್ಳಿ-ದಿಲ್ಲಿ ಎಲ್ಲಿಯಾಗಲಿ ನೆಮ್ಮದಿಯ ಗೂಡು 
ದೊರೆತರೆ  ಅದುವೇ  ಸ್ವರ್ಗಲೋಕದ  ಬೀಡು.

- ಭಾಗ್ಯ ಎಲ್.ಆರ್. ಶಿವಮೊಗ್ಗ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...