ನಾನೊಮ್ಮೆ ಹೊರಟೆನು ಏಕಾಂಗಿ ಸಂಚಾರಿಯಾಗಿ
ಹಳ್ಳಿಯಲ್ಲಿ ಬಾಲ್ಯದ ನೆನಪುಗಳ ಸಂಗ್ರಹಕಿಯಾಗಿ
ದಾರಿಯಲ್ಲಿ ನಿಂತೆನು ಪ್ರಕೃತಿಯ ಆರಾಧಕಿಯಾಗಿ
ಮನಸ್ಸು- ದೇಹಗಳೆರಡರು ನವ ಚೈತನ್ಯಮಯವಾಗಿ,
ನಗರದ ರಸ್ತೆಗಳ ಡಾಂಬರೀಕರಣ ವ್ಯವಸ್ಥೆಯು
ವಾಹನಗಳ ಸಂಚಾರದ ಶಬ್ದದ ದಟ್ಟಣೆಯು
ಮನಸ್ಸು -ದೇಹಗಳೆರಡಕ್ಕೆ ನೀಡುವುದು ಅಹಿತಕರ
ಆದರೂ ನೆಲೆಸುವೆವು ಜೀವನ ನಿರ್ವಹಣೆಗೋಸ್ಕರ,
ಏಕಾಂಗಿ ಸಂಚಾರಿಯ ಜೀವನವು ಸುಂದರ
ಭಾವನೆಗೆ ಸ್ಪಂದಿಸುವ ಸಂಗಾತಿ ಸುಮಧುರ
ಹಳ್ಳಿ-ದಿಲ್ಲಿ ಎಲ್ಲಿಯಾಗಲಿ ನೆಮ್ಮದಿಯ ಗೂಡು
ದೊರೆತರೆ ಅದುವೇ ಸ್ವರ್ಗಲೋಕದ ಬೀಡು.
- ಭಾಗ್ಯ ಎಲ್.ಆರ್. ಶಿವಮೊಗ್ಗ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ