ಬುಧವಾರ, ಸೆಪ್ಟೆಂಬರ್ 13, 2023

ಪರಿಸರ (ಕವಿತೆ) - ಕು. ಜ್ಯೋತಿ ಆನಂದ ಚಂದುಕರ.

ಬೇಕೆಂದಾಗ ಮುನಿಸು ತೋರಿ
 ಬೇಡವೆಂದಾಗ ಸುಮ್ಮನೆ ಸುರಿದು
 ಕಾಡುವ ಈ ಮಳೆ ಏಕೆ ಹೀಗೆ ?
 ಪ್ರಕೃತಿಯ ಮರ್ಮವೇ ಹಾಗೆ...

 ಬೇಡದ ಬಯಕೆಗಳ ಹೊತ್ತು
 ಮರಗಳ ಮಾರಣಹೋಮ ಮಾಡಿ 
 ಕಾಡು ಕಡಿದು ನಾಡು ಕಟ್ಟುವ
 ಆಣೆಕಟ್ಟು ಕಟ್ಟಿ ನೀರಿಂಗಿಸುವ
 ಈ ಮನುಜನೇಕೆ ಹೀಗೆ ?

 ಹೇ ಮಾನವ
 ಏಕಾಗುತ್ತಿರುವೆ ದಾನವ
 ತರುವಾಯದ ಪೀಳಿಗೆಗೆ 
 ಕೊಂಚವಾದರೂ
 ಉಳಿಸು ಈ ನಿಸರ್ಗವ...

 ಸವಿ ಪ್ರಕೃತಿಯ ಸೌಂದರ್ಯವ
 ತೋರಿಸಬೇಡ ಸ್ವಾರ್ಥವ
 ನೀ ಬದುಕಲಾದರೂ
 ಬದುಕಿಸಬೇಕಲ್ಲ ಈ ಪರಿಸರವ ?

ನಿತ್ಯ ನಿರ್ಮಲವಾಗಿ
ನಾವು ಉಸಿರಾಡಲು ಬೇಕು ಪ್ರಕೃತಿ.
ಇಂದಾದರೂ ಒಂದು ಗಿಡ ನೆಟ್ಟರೆ, ಬದಲಾದಿತು ಮುಂದಿನ ಪೀಳಿಗೆಯ ಆಕೃತಿ.

- ಕು. ಜ್ಯೋತಿ ಆನಂದ ಚಂದುಕರ, ಬಾಗಲಕೋಟೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...