ಬುಧವಾರ, ಸೆಪ್ಟೆಂಬರ್ 13, 2023

ಪರಿಸರ (ಕವಿತೆ) - ಕು. ಜ್ಯೋತಿ ಆನಂದ ಚಂದುಕರ.

ಬೇಕೆಂದಾಗ ಮುನಿಸು ತೋರಿ
 ಬೇಡವೆಂದಾಗ ಸುಮ್ಮನೆ ಸುರಿದು
 ಕಾಡುವ ಈ ಮಳೆ ಏಕೆ ಹೀಗೆ ?
 ಪ್ರಕೃತಿಯ ಮರ್ಮವೇ ಹಾಗೆ...

 ಬೇಡದ ಬಯಕೆಗಳ ಹೊತ್ತು
 ಮರಗಳ ಮಾರಣಹೋಮ ಮಾಡಿ 
 ಕಾಡು ಕಡಿದು ನಾಡು ಕಟ್ಟುವ
 ಆಣೆಕಟ್ಟು ಕಟ್ಟಿ ನೀರಿಂಗಿಸುವ
 ಈ ಮನುಜನೇಕೆ ಹೀಗೆ ?

 ಹೇ ಮಾನವ
 ಏಕಾಗುತ್ತಿರುವೆ ದಾನವ
 ತರುವಾಯದ ಪೀಳಿಗೆಗೆ 
 ಕೊಂಚವಾದರೂ
 ಉಳಿಸು ಈ ನಿಸರ್ಗವ...

 ಸವಿ ಪ್ರಕೃತಿಯ ಸೌಂದರ್ಯವ
 ತೋರಿಸಬೇಡ ಸ್ವಾರ್ಥವ
 ನೀ ಬದುಕಲಾದರೂ
 ಬದುಕಿಸಬೇಕಲ್ಲ ಈ ಪರಿಸರವ ?

ನಿತ್ಯ ನಿರ್ಮಲವಾಗಿ
ನಾವು ಉಸಿರಾಡಲು ಬೇಕು ಪ್ರಕೃತಿ.
ಇಂದಾದರೂ ಒಂದು ಗಿಡ ನೆಟ್ಟರೆ, ಬದಲಾದಿತು ಮುಂದಿನ ಪೀಳಿಗೆಯ ಆಕೃತಿ.

- ಕು. ಜ್ಯೋತಿ ಆನಂದ ಚಂದುಕರ, ಬಾಗಲಕೋಟೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...