ಬೇಕೆಂದಾಗ ಮುನಿಸು ತೋರಿ
ಬೇಡವೆಂದಾಗ ಸುಮ್ಮನೆ ಸುರಿದು
ಕಾಡುವ ಈ ಮಳೆ ಏಕೆ ಹೀಗೆ ?
ಪ್ರಕೃತಿಯ ಮರ್ಮವೇ ಹಾಗೆ...
ಬೇಡದ ಬಯಕೆಗಳ ಹೊತ್ತು
ಮರಗಳ ಮಾರಣಹೋಮ ಮಾಡಿ
ಕಾಡು ಕಡಿದು ನಾಡು ಕಟ್ಟುವ
ಆಣೆಕಟ್ಟು ಕಟ್ಟಿ ನೀರಿಂಗಿಸುವ
ಈ ಮನುಜನೇಕೆ ಹೀಗೆ ?
ಹೇ ಮಾನವ
ಏಕಾಗುತ್ತಿರುವೆ ದಾನವ
ತರುವಾಯದ ಪೀಳಿಗೆಗೆ
ಕೊಂಚವಾದರೂ
ಉಳಿಸು ಈ ನಿಸರ್ಗವ...
ಸವಿ ಪ್ರಕೃತಿಯ ಸೌಂದರ್ಯವ
ತೋರಿಸಬೇಡ ಸ್ವಾರ್ಥವ
ನೀ ಬದುಕಲಾದರೂ
ಬದುಕಿಸಬೇಕಲ್ಲ ಈ ಪರಿಸರವ ?
ನಿತ್ಯ ನಿರ್ಮಲವಾಗಿ
ನಾವು ಉಸಿರಾಡಲು ಬೇಕು ಪ್ರಕೃತಿ.
ಇಂದಾದರೂ ಒಂದು ಗಿಡ ನೆಟ್ಟರೆ, ಬದಲಾದಿತು ಮುಂದಿನ ಪೀಳಿಗೆಯ ಆಕೃತಿ.
- ಕು. ಜ್ಯೋತಿ ಆನಂದ ಚಂದುಕರ, ಬಾಗಲಕೋಟೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ