ಬುಧವಾರ, ಸೆಪ್ಟೆಂಬರ್ 13, 2023

ಮುಟ್ಟು (ಪುಸ್ತಕ ಪರಿಚಯ) - ಮಾಣಿಕ್ ಪಂಚಾಳ ನಾಗೂರ.


ಪುಸ್ತಕದ ಹೆಸರು: ಮುಟ್ಟು ವಿಜ್ಞಾನ, ಸಂಸ್ಕೃತಿ, ಮತ್ತು ಅನುಭವ
ಲೇಖಕರು : ಡಾ. ಎಚ್.ಎಸ್.ಅನುಪಮಾ


ಮೊದಲಿಗೆ ಎಚ್.ಎಸ್. ಅನುಪಮ  ಅವರಿಗೆ ಧನ್ಯವಾದಗಳು. ಹೆಣ್ಣಿನ ಮುಟ್ಟಿನ ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ. ನಾನು ಮೊದಲೆಲ್ಲಾ ಇವರ ಕೆಲವು ಪುಸ್ತಕಗಳನ್ನು ಓದಿದ್ದೇನೆ ಸರಳವಾಗಿ ವಿಚಾರಗಳನ್ನು ತಿಳಿಸುವ ಬರಹಗಳಾಗಿವೆ. ಮುಟ್ಟು ಅನ್ನೋ ಹೆಸರು ಕೇಳಿದ್ದೆ ಮೊದಲು ಬಾರಿ ಈ ಹಿಂದೆ ಎಲ್ಲೂ ಕೇಳಿರಲಿಲ್ಲ ಇದೊಂದು ಪುಸ್ತಕಿಯ ಭಾಷೆ ನಮ್ಮ ಭಾಷೆಯಲ್ಲಿ ಇದನ್ನು ಡೇಟ್ ಅನ್ನುತ್ತಾರೆ ಈ ಪದ ಹೇಗೆ ಗೊತ್ತಾಯ್ತು ಅಂದರೆ ದಸರಾ ಸಮಯದಲ್ಲಿ ನಮ್ಮ ಕಡೆ ಮನೆ ಸ್ವಚ್ಛ ಮಾಡುತ್ತಾರೆ ಮಾಡಿದ ನಂತರ ತುಳಜಾಪುರ ದೇವಿಗೆ 9 ದಿನ ಕಾಲ ಪೂಜೆ ಮಾಡುತ್ತಾರೆ ಆ 9 ದಿನಗಳ ನಡುವೆ ನಮ್ಮ ಅಮ್ಮ ಹೊರಗಡೆ ಒಂದು ಮೂಲೆಯಲ್ಲಿ ಕೂತಿದ್ದರು ಒಂದಿನ ನಾನು ಹೊರಗಡೆಯಿಂದ ಬಂದು ನಮ್ಮಮ್ಮನ ಬಳಿ ಹೋದರೆ ಮುಟ್ಬೇಡ ದೂರ ಇರು ಅಂತ ನಮ್ಮಜ್ಜಿ ಹೇಳಿದ್ರು ಅದಕ್ಕೆ ನಾನು ಏಕೆ ಅಂದೆ ಅದಕ್ಕೆ ಅವರು ಮೂರು ದಿನ ನಿಮ್ಮಮ್ಮನ ಮುಟಬೇಡ ಅಂತ ಹೇಳಿದ್ರು ಅದು ಯಾಕೆ ಅಂತ ನನಗೆ ಗೊತ್ತಾಗ್ಲಿಲ್ಲ ಕೆಲವೊಮ್ಮೆ ಅವರು ಮಾತಾಡಿಕೊಳ್ಳುತ್ತಿದ್ದಾಗ ಡೇಟ್ ಬಂದಿದೆ ಅಂತ ಮಾತಾಡ್ತಿದ್ದರು ಆವಾಗ ಕೇಳಿದ್ದು ಈ ಪದ ದಸರಾ ಸಮಯದಲ್ಲಿ ಡೇಟ್ ಬಂದಾಗ ನಮ್ಮಮ್ಮ ಯಾರನ್ನು ಮುಟ್ಟಿಸಿಕೊಳ್ಳುತ್ತಿರಲಿಲ್ಲ ಮತ್ತು ಪೂಜೆ ಮಾಡುತ್ತಿರಲಿಲ್ಲ ಮತ್ತೆ ದೇವರ ಕೆಲಸ ಯಾವುವು ಮಾಡುತ್ತಿರಲಿಲ್ಲ ಯಾವಾಗಲೂ ಮೂಲೆಯಲ್ಲಿ ಕೋರುತ್ತಿದ್ದರು ಆ ಸಮಯದಲ್ಲಿ ಅವರು ಬೇರೆ ಕಡೆ ಮಲಗುತ್ತಿದ್ದರು ಇದನ್ನು ನೋಡಿ ನನಗೆ ಯಾಕೆ ಹೀಗೆ? ಅಂತ ಅನಿಸಿತು ಮುಟ್ಟು ಒಂದು ಸಹಜ ಕ್ರಿಯೆ ಇದನ್ನು ಈಗಿನ ಕಾಲದಲ್ಲಿ ಮೂಡನಂಬಿಕೆಯಿಂದಾಗಿ ಇದನ್ನು ಬೇರೆರಿತಿಯೆ ಕಾಣುತ್ತಿದ್ದಾರೆ. ಈ ಪುಸ್ತಕ ಓದಲು ಶುರು ಮಾಡಿದಾಗ ಏಕೆ ಏಕೆ? ಎಂದು ಪ್ರಶ್ನೆ ಹಾಕಲಾಗಿತ್ತು ನಾನು ಏನಿರಬಹುದು ಅಂತ ಅದನ್ನು ಪೂರ್ತಿ ಓದಿದೆ ಇದರಲ್ಲಿ ಅವರಿಗೆ ಆ ಸಮಯದಲ್ಲಿ ಮೂಡಿದ ಪ್ರಶ್ನೆಗಳನ್ನು ಮತ್ತು ಸಂದರ್ಭವನ್ನು ಬರೆದಿದ್ದರು. ಮೊದಲಿಗೆ ಅವರ ಮುಟ್ಟಿನ ಬಗೆಗಿನ ಅನುಭವವನ್ನು ನಮ್ಮ ಜೊತೆಗೆ ಹಂಚಿಕೊಂಡಿದ್ದಾರೆ. ಅವರ ಅನುಭವವನ್ನು ಓದಿ ನನಗೆ ಒಂದು  ಇನ್ನು ಜಾಸ್ತಿ ತಿಳಿದುಕೊಳ್ಳಬೇಕೆನಿಸಿತು ಹೀಗೆ ಓದುತ್ತಾ ಹೋದಂತೆ ಹೆಣ್ಣು ಮುಟ್ಟಿನ ಸಮಯದಲ್ಲಿ ಅಷ್ಟೆಲ್ಲಾ ಕಷ್ಟಗಳನ್ನು ಅನುಭವಿಸುತ್ತಾಳೆ ಅಂತ ಗೊತ್ತಾಯ್ತು ಮತ್ತು ಇಲ್ಲಿ ಎಲ್ಲಾ ಹೆಣ್ಣು ಮಕ್ಕಳು ನೋವು ತಿಂದವರೇ ಜಾಸ್ತಿ ಇದನ್ನು ಓದಿ ನನಗೆ ಅನಿಸ್ತು ನಾನು ಗಂಡಾಗಿ ಕೊಟ್ಟಿದ್ದೆ ಪುಣ್ಯ ಅಂತ ಸಾಮಾನ್ಯವಾಗಿ ಎಲ್ಲಾ ಗಂಡಸರು ಯೋಚಿಸುವುದು ಹೆಣ್ಣು ಮಕ್ಕಳ ಜೀವನಾನೆ ಚೆನ್ನಾಗಿದೆ ಅವರಿಗೇನು ಚಿಂತನೆ ಇಲ್ಲ ಅವರು ಕೆಲಸ ಮಾಡುವ ಚಿಂತನೆ ಇಲ್ಲ ಅಂತ ಏಕೆಂದರೆ ಗಂಡನೇ ದುಡಿದು ಸಾಕುತ್ತಾನೆ ಅಂತ ಅವರು ಜೀವನಾನೆ ಆರಾಮಾಗಿದೆ ಅಂತ ಹೇಳ್ತಾರೆ ಆದರೆ ಈ ಪುಸ್ತಕ ಓದಿದ ನಂತರ ಗೊತ್ತಾಯ್ತು ಹೆಣ್ಣಿನ ಕಷ್ಟ ಏನು ಅಂತ ಅವರ ಆ ಮುಟ್ಟಿನ ಸಮಯದಲ್ಲಿ ಅನುಭವಿಸುವ ನೋವು ಯಾರಿಗೂ ಬೇಡ ಮುಟ್ಟು ಅನ್ನುವುದು ಮಹಿಳೆಯ ದೇಹದಲ್ಲಿ ಸಹಜವಾದ ಕ್ರಿಯೆ ಅದನ್ನು ನಮ್ಮ ಜನ ಮೈಲ್ಗೆ ಅಂತ ಅವರನ್ನು ದೂರ ಇಡುತ್ತಾರೆ ಅದನ್ನು ನಾನು ಒಪ್ಪುವುದಿಲ್ಲ ನಾನು ಯಾವತ್ತೂ ಈ ರೀತಿ ಮಾಡುವುದಿಲ್ಲ ನಮ್ಮ ಮನೆಯಲ್ಲಿ ಯಾರೇ ಮುಟ್ಟಾದರೂ ಅವರಿಗೆ ದೂರವಿಡದೆ ಅವರಿಗೆ ಆತ್ಮೀಯತೆಯಿಂದ ಕಾಳಜಿಯಿಂದ ನೋಡಿಕೊಳ್ಳಬೇಕು. ನಾವು ನಮ್ಮ ಕಷ್ಟಗಳು ಮತ್ತು ನೋವುಗಳೊಡನೆ ಹೆಣ್ಣಿನ ಕಷ್ಟಗಳನ್ನು ಅರಿತುಕೊಂಡು ಬಾಳುವುದು ಉತ್ತಮ ಈ ಪುಸ್ತಕ ಓದಿದ್ದರಿಂದ ನಾನು ಮುಟ್ಟಿನ ಬಗ್ಗೆ ಮತ್ತು ಅದರ ಬಗೆಗಿನ ಸಮಸ್ಯೆಗಳು ಮತ್ತು ಬಿಳಿ ಮುಟ್ಟು ಆಗಲು ಕಾರಣ ಮತ್ತು ಪರಿಹಾರ ಆ ಸಮಯದಲಾಗುವ ಸಮಸ್ಯೆಗಳು ಚೆನ್ನಾಗಿ ತಿಳಿದುಕೊಂಡಿದ್ದೇನೆ ನಾನು ಮುಂದೆ ನಮ್ಮ ಮನೆ ಹೆಣ್ಣು ಮಕ್ಕಳಾದ ತಾಯಿ ಅಕ್ಕ ತಂಗಿಯ ಕಷ್ಟಕ್ಕೆ ಸ್ಪಂದಿಸುತ್ತೇನೆ ಮತ್ತು ಅವರನ್ನು ಪ್ರೀತಿ ಮತ್ತು ಕಾಳಜಿಯಿಂದ ನೋಡಿಕೊಳ್ಳುತ್ತೇನೆ. ಪುಸ್ತಕ ಓದಿದ್ದು ನನಗೆ ಒಂದು ಒಳ್ಳೆ ಅನುಭವ ಕೊಟ್ಟಿದೆ ಹೆಣ್ಣಿನ ಬಗ್ಗೆ ತಿಳಿದುಕೊಳ್ಳಲು ಸಹಾಯವಾಗಿದೆ.

- ಮಾಣಿಕ್ ಪಂಚಾಳ ನಾಗೂರ ಕಲಬುರಗಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...