ಗುರುವಾರ, ಅಕ್ಟೋಬರ್ 26, 2023

ಅಣ್ಣನ ಒಲವು (ಕವಿತೆ) - ಶಾರದಾ ದೇವರಾಜ್ ಎ ಮಲ್ಲಾಪುರ.

ಅಣ್ಣನ ಪ್ರೀತಿಯ ಪಡೆದಿಹ ತಂಗಿಗೆ 
ಸುಖ ಸಮೃದ್ಧಿಯು ದೊರೆತಂತೆ/
 ಅಣ್ಣನ ಒಲವಿನ ಕರುಣೆಯು ಲಭಿಸಲು
 ಸುಂದರ ಪುಷ್ಪದ ತೇರಂತೆ ll

 ಅಣ್ಣನ ಅಕ್ಕರೆ ಗಳಿಸಿದ ತಂಗಿಗೆ
 ಸಕ್ಕರೆ ತುಪ್ಪದ ಔತಣವು/
 ಅಣ್ಣನ ಮಮತೆಯು ಮರುಕಳಿಸಿರಲು
 ತಂಗಿಗೆ ತವರಿನ ಆಶ್ರಯವು ll

 ಅಣ್ಣ ತಂಗಿಯ ಒಲವಿನ ಬಳ್ಳಿಗೆ
 ತಾಯಿಯೇ ಬೇರಿನ ಬುಡವಂತೆ/
 ಅಣ್ಣನ ಲತೆಯು ಹಬ್ಬಿದ ಹಾಗೆ
 ತಂಗಿಯು ಹರಳುವ ಹೂವಂತೆ ll

 ಒಂದೇ ಬೇರಿನ ಲತೆಗಳು ನಾವು
 ಎಲ್ಲರ ಮೆಚ್ಚುಗೆ  ಗಳಿಸೋಣ/
 ತಾಯಿ ತಂದೆಯರ ಕೀರ್ತಿಯ ಹರಡುವ
 ಸುಮಧುರ ಸಂಸ್ಕೃತಿ ಬೆಳೆಸೋಣ ll

- ಶಾರದಾ ದೇವರಾಜ್ 
 ಎ  ಮಲ್ಲಾಪುರ
 ಅರಸೀಕೆರೆ ತಾಲೂಕ್
 ಹಾಸನ ಜಿಲ್ಲೆ
 ಬಾಣಾವರ
ಮೋ.  ನಂಬರ್  9663113628

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...