ಅಂಗಳದಲಿ ಹಾಳು
ಕಸವು, ಧೂಳಾಗಿ
ದೇಹದ ಸುತ್ತ ಸುಳಿದಿತ್ತು...
ನಿನ್ನೆ ನಲಿದಿದ್ದ ಹಾಲು
ಇಂದು ನಲುವಿನಲ್ಲಿ
ಮೊಸರಾಗಿ ಅಳುತಿತ್ತು...
ನನ್ನ ತಲೆ ಬಳಿಯ
ಕಂದೀಲು ನನಗಷ್ಟೇ,
ಮೌನದ ಬೆಳಕ ನೀಡಿತ್ತು...
ಹೇ ಆತ್ಮವೇ ನೀ ನನ್ನ
ತೊರೆದ ಸುದ್ದಿಯ ಸಾರಲು,
ಕಾಗೆಯು ಗೊಗರೆದಿತ್ತು...
ಮಸಣದ ಮಣ್ಣು
ಮೈಗಪ್ಪಲು, ಸಪ್ಪನೆ
ಮಾರಿ ಹಾಕಿ ಚದುರಿತ್ತು...
ಹೇ ಆತ್ಮವೇ ನೀ ತೊರೆದ ಆ ದಿನ..
ಆವರಿಸಿದ್ದು ಬರಿ ಮೌನ...
- ಬಿ. ಎಂ. ಮಹಾಂತೇಶ
SAVT ಕಾಲೇಜು ಕೂಡ್ಲಿಗಿ
ವಿಜಯನಗರ ಜಿಲ್ಲಾ
9731418615.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ