ಮಂಗಳವಾರ, ನವೆಂಬರ್ 21, 2023

ನಿನಗಾರು ಸಾಟಿ (ಕವಿತೆ) - ಶ್ರೀ ಮುತ್ತು. ಯ. ವಡ್ಡರ.

ಮಮತೆಯಿಂದ ಪ್ರೀತಿಸುವ ತಾಯಿ ನಿನಗಾರು ಸಾಟಿ
ಕಾಳಜಿಯಿಂದ ನೋಡಿಕೊಳ್ಳುವ ತಂದೆ ನಿನಗಾರು ಸಾಟಿ
ಹೆಗಲಿಗೆ ಹೆಗಲು ನೀಡುವ ಸಹೋದರ ನಿನಗಾರು ಸಾಟಿ
ಕಷ್ಟಕ್ಕೆ ಸ್ಪಂದಿಸುವ ಸಹೋದರಿ ನಿನಗಾರು ಸಾಟಿ

ಹಸಿದವರಿಗೆ ಅನ್ನ ನೀಡುವ ರೈತರೆ ನಿಮಗಾರು ಸಾಟಿ
ನೊಂದವರಿಗೆ ನೆರಳಾಗುವ ಆಶ್ರಯದಾತರೇ ನಿಮಗಾರು ಸಾಟಿ
ಅಕ್ಷರ ಕಲಿಸುವ ಗುರುಗಳೇ ನಿಮಗಾರು ಸಾಟಿ
ಪ್ರಾಣ ಹೊತ್ತೆ ಇಟ್ಟು ದೇಶ ಸೇವೆ ಮಾಡುವ ಯೋಧರೆ ನಿಮಗಾರು ಸಾಟಿ 

ಇಡೀ ವಿಶ್ವಕೆ ಬೆಳಕು ನೀಡುವ ಸೂರ್ಯನೇ ನಿನಗಾರು ಸಾಟಿ
ಪ್ರತಿಯೊಬ್ಬರ ಬದುಕಿಗೆ ಉಸಿರಾದ ಗಾಳಿಯೇ ನಿನಗಾರು ಸಾಟಿ
ಜೀವ ಉಳಿಸುವ ಅಮೃತ ಜಲವೇ ನಿನಗಾರು ಸಾಟಿ

ಸಾವಲ್ಲೂ ಜೊತೆನಿಲ್ಲುವ ಸ್ನೇಹಿತನೇ ನಿನಗಾರು ಸಾಟಿ
ಬದುಕಿನಲಿ ಕೈ ಹಿಡಿದು ಬಾಳುವ ಸತಿ ನಿನಗಾರು ಸಾಟಿ 
ಭಾರ ಹೊತ್ತು ಸಲಹುತಿರುವ ಭೂತಾಯಿ ನಿನಗಾರು ಸಾಟಿ
ಅಮೃತದ ಹಾಲು ನೀಡುವ ಗೋಮಾತೆ ನಿನಗಾರು ಸಾಟಿ. 

- ಶ್ರೀ ಮುತ್ತು. ಯ. ವಡ್ಡರ
(ಶಿಕ್ಷಕರು, ಹಿರೇಮಾಗಿ)
ಬಾಗಲಕೋಟ
Mob-9845568484

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...