ಎತ್ತ ನೋಡಿದತ್ತ ಚಿತ್ತ ಸೆಳೆದಿದೆ
ಮನೋಲ್ಲಾಸ ಬೀರಲು
ಎತ್ತಣ ಸಾಗಿದರು ಕಣ್ತೆರೆಸುತಿದೆ
ಹುರುಪಿನ ಬೆಳಕ ಚೆಲ್ಲಲು
ಕತ್ತಲೆಯಿಂದ ಬೆಳಕಿನತ್ತ ಸಾಗಿದೆ
ಹೊಸತನವ ಕಂಡುಕೊಳ್ಳಲು
ಅಜ್ಞಾನದಿಂದ ಸುಜ್ಞಾನದೆಡೆಗೆ ಸಾಗಿದೆ
ಬದುಕಿನೂದ್ದಕ್ಕೂ ನೆಮ್ಮದಿ ಪಡೆಯಲು
ಹಚ್ಚಿದ ಹಣತೆಯಿಂದ ಕಾಂತಿ ಸೂಸಿದೆ
ಮನದಿಂದಾದರವ ಪಡೆಯಲು
ಕ್ರೂರತೆಯಿಂದ ಮಮತೆ ಸೃಷ್ಠಿಸಿದೆ
ಭಾವ ಸಮ್ಮಿಲನದಿಂದಿರಲು
ಅಂಧಕಾರ ತೊರೆದು ಜ್ಯೋತಿ ಚೆಲ್ಲಿದೆ
ಸತ್ಯ ಸನ್ಮಾರ್ಗವ ಸೃಷ್ಠಿಸಲು
ಮಿಂಚುತ್ತಾ ಹೊಳೆಯತ್ತಾ ಹರಡಿದೆ
ಸಂತಸದ ಹಾದಿ ಸುಲಭವಾಗಿಸಲು
ಅಷ್ಟ ದಿಕ್ಕುಗಳಲ್ಲೂ ಆವರಿಸಿದೆ
ನವಾವತಾರವ ತೋರಿಸಲು
ಭಕುತಿಯಿಂದ ಪಾದಕ್ಕೆ ನಮಿಸಿದೆ
ಸುಖ ಶಾಂತಿ ಪಡೆಯಲು.
- ಸದ್ದಾಂ ತಗ್ಗಹಳ್ಳಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ