ಮಂಗಳವಾರ, ನವೆಂಬರ್ 21, 2023

ಕಲ್ಪನಾ ಲೋಕ (ಕವಿತೆ) - ರೂಪ ಅಶೋಕ್.

ಮಿತಿಯಿಲ್ಲದೆ ವಿಹರಿಸಿದೆ ಕಲ್ಪನಾ ಲೋಕದಲ್ಲಿ
ಬಾಲ್ಯದ ಕೆಲ ಸಮಯ ಕೊಳ್ಳುವ ಆಸೆಯಲ್ಲಿ
ಭಾವನೆಗಳ ಮಹಪೂರದ ಚಿತ್ತ ಸಂತೆಯಲ್ಲಿ
ನನಗರಿಯದೆ ನಕ್ಕು ನಲಿದು ಅಂತರಂಗದಲ್ಲಿ

ನಿನ್ನದೇ ನೆನಪಲ್ಲಿ ಗುನುಗುನಿಸಿದೆ ಪದದಲ್ಲಿ 
ಕೈಗೆಟುಕುದ ಆಸೆಗೆ ಕಾಲ್ಪನಿಕ ರೂಪದಲ್ಲಿ
ಕೋಗಿಲೆಯಂತೆ ಹಾಡಿದೆ ನನ್ನೊಳ ಮನದಲ್ಲಿ
ಹಗಲಿರುಳು ನೀ ಬಯಸಿದ್ದು ಹೃದಯದಲ್ಲಿ

ಗಳಿಸಿದೆ ಪ್ರತಿದಿನ ಪ್ರೀತಿಯ ಹೆಸರಲ್ಲಿ
ಕುಣಿದಾಡಿದೆ ಮಾಯೆ ಮನಸ್ಸಿನ ಜಂತೆಯಲ್ಲಿ
ಎಂದೂ ಮರೆಯದಿರಲಿ ನನ್ನ ಚಿತ್ತದಲ್ಲಿ
ನಲಿದಿದೆ ಆಂತರ್ಯ  ಮುಸ್ಸಂಜೆಯಲ್ಲಿ

ಅನಿಸುತಿದೆ ಯಾಕೋ ರವಿಯಂತೆ ಮಿಂಚಲು
ಸೂರ್ಯನಂತೆ ಉರಿಯುವ ಆಸೆ ಮೊದಲು
ಜೀವನ ನೌಕೆಯಲ್ಲಿ ಆವರಿಸಿದ್ದಾಗಿದೆ ಕತ್ತಲು 
ಕಾತರಿಸಿದೆ ಮನ ಸಂಪೂರ್ಣತೆ ಹೊಂದಲು

- ರೂಪ ಅಶೋಕ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...