ಮಂಗಳವಾರ, ನವೆಂಬರ್ 21, 2023

ಅಂತರಾಳದ ತುಡಿತ (ಕವಿತೆ) - ಮಾಲತಿ ಮೇಲ್ಕೋಟೆ.

ಭಾವಯಾನದಲಿಂದು ಜೀವನವು ಸಾಗಿಹುದು
ಅಂತರಾಳದ ನೋವ ಹೇಳದಾಗಿಹುದು
ಬಾಳಬದುಕಿನ ಪಯಣದಲಿ ಮಾತು ಮೌನದ ರಿಂಗಣ
ಮಾತು ಮರೆಯಾಗಿಹುದು ಮೌನದಾ ಹಿಂದೆ

ಮನದಲಿಹ ಭಾವಗಳು ಹೊರಬರದಾಗಿಹುದು
ನೀ ಕಂಡ ಕೂಡಲೇ ಮಾತು ಮೌನವಾಗುವುದು
ಕಣ್ಣನೋಟವದು ಮಾತ್ರ ಸಾರಿ ಹೇಳುತಲಿಹುದು
ಮನದೆಲ್ಲ ಭಾವಗಳ ನಿನಗರ್ಪಿಸಿಹುದು

ನೀನಿರದ ದಿನಗಳಲಿ ಬೆಳದಿಂಗಳಲು ತಾಪ
ತೋರುತಿಹೆ ಎಲ್ಲರಲು ಅರಿಯದೆಯೆ ಕೋಪ
ಮನದೆಲ್ಲ ಉಮ್ಮಳವ ನಿನ್ನೆದುರು ಬಿಚ್ಚಿಟ್ಟು
ಹಗುರವಾಗುವ ಬಯಕೆ ನನ್ನಲಿಹುದು

ನಿನ್ನೊಡನೆ ಕಳೆದಂಥ ಸಮಯವದು ಮನದಲ್ಲಿ
ಪುಳಕ ಹುಟ್ಟಿಸುತಿಹುದು ಇಂದು ನನ್ನಲ್ಲಿ
ನಿನ್ನಿಂದ ದೂರಾಗಿ ನೋವು ಹೆಪ್ಪುಗಟ್ಟಿಹುದು
ಕರಗುವಾ ಬಗೆ ಹೇಗೆ ತಿಳಿಯದಾಗಿಹುದು

- ಮಾಲತಿ ಮೇಲ್ಕೋಟೆ,
ಬೆಂಗಳೂರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...