ಮಂಗಳವಾರ, ನವೆಂಬರ್ 21, 2023

ನಾ ಕರಿಯನೆಂದುನೀ ಜರಿಯ ಬೇಡ ಓ ಬಿಳಿಗೆಳತಿ (ಕವಿತೆ) - ಬಿ ಎಂ ಮಹಾಂತೇಶ.

ಆ ನಿನ್ನ ಬಿಳಿ ಮೋಡದಂತ
ಮುದ್ದಾದ ಗಲ್ಲದ ಮೇಲೆ ಮುದದಿ
ಮುದ್ದಾಡುವ ಕಪ್ಪುಬೊಟ್ಟಾಗುವೆ...

ಮಯೂರಿಯಂತೆ ನಟಿಸುವ
ಆ ನಿನ್ನ ಕಣ್ ರೆಪ್ಪೆಗಳಿಗೆ
ಮಾಧುರ್ಯ ಕಪ್ಪಾಗುವೆ...

ನಿನ್ನೊಲವಿನ ಬಿಳಿಯಾಳೆಯ
ಮೇಲೆ, ಚೆಲುವ ಭಾವ
ಗೀಚಲು ಮಧುರ ಮಸಿಯಾಗುವೆ...

ಅಳೆಯಲಾಗದ ಆ ನಿನ್ನ
ಅಂದ ಚೆಂದ, ಮೈ ಬಣ್ಣವನು
ಮುಚ್ಚುವ ಕತ್ತಲೆಯಾಗುವೆ...

ಮುಪ್ಪಿನಲೆಯು ನಿನಗಪ್ಪಳಿಸಿ,
ಬಿಳಿ ಕೇಶರಾಶಿ ಮೂಡಿದಾಗ
ಅವುಗಳಿಗೆ, ಕರಿ ಮಸಿಯಾಗುವೆ...


- ಬಿ ಎಂ ಮಹಾಂತೇಶ
ಕ್ಯಾಸನಕೆರೆ, ಕೂಡ್ಲಿಗಿ ತಾ,
ವಿಜಯನಗರ ಜಿ,
9731418615

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...