ಶುಕ್ರವಾರ, ಜನವರಿ 5, 2024

ತಾಯಿಯ ಹಾರೈಕೆ (ಕವಿತೆ) - ಪ್ರೊ. ಜಯಶ್ರೀ ಹಿರೇಮಠ.

ನೀ ಜನಿಸಿದಂದು ನನ್ನೆಲ್ಲಾ ಕಷ್ಟ ಕರಗಿ
ಶಾಪ ವಿಮೋಚಿತಳಾದೆ ಆನಂದವಾಗಿ
ನನ್ನ ಬದುಕಿಗೊಂದು ಅರ್ಥ ಸಿಕ್ಕಿತೆಂದು
ಹಿರಿ ಹಿರಿ ಹಿಗ್ಗಿದೆ ಜೀವನವು ಬೇಕಾಗಿ//೧//

ಮಗು ನೀ ಕಂಡ ಕನಸೆಲ್ಲಾ ನನಸಾಗಲಿ
ಹಡೆದಿರುವೆ ಹಣೆ ಬರಹ ಬರೆಯಲಿಲ್ಲ
ಹೋರಾಟದಲ್ಲಿಂದು ಏಕಾಂಗಿ ನೀನು
ಗೆದ್ದಾಗ  ಜಗ ನಿನ್ನ ಹಿಂದೇ ಬರುವುದಲ್ಲ..! //೨//

ನಿನ್ನ ಹಿತ ಶತ್ರುಗಳನ್ನು ಸದಾ ದೂರವಿಡು
ಶರಣಾದ ಬದ್ಧ ವೈರಿಯನ್ನೂ ಕ್ಷಮಿಸಿಬಿಡು 
ಯುದ್ಧವೇ ಜೀವನವು  ಅಂತಾದ ಮೇಲೆ
ವೈರಿಗಳು ಎಷ್ಟಾದರೂ ಇರಲಿ ಬಿಡು//೩//

ಕಷ್ಟವೆಷ್ಟೇ ಬರಲಿ ಧರ್ಮವನ್ನು ಬಿಡದಿರು
ಸತ್ಯ ನಿಷ್ಠೆಗೆ ಗೆಲುವು ಶತ ಸಿದ್ಧವು ತಿಳಿದಿರು
ಬದಲಾವಣೆ ಜಗದ ನಿಯಮವು ತಿಳಿ ನೀನು
ರಾಜಿಸೂತ್ರಕೆ ಬಂದರೆ ರಾಜ್ಯಭಾರ ಬಿಡದಿರು//೪//

ಸೋಲಿನಾ ನಂತರ ಗೆಲುವಿರುವುದು ತಾಳು
ಇತಿಹಾಸ ರಚಿಸಿದವರು ಸೋತವರೆ ಕೇಳು
ಅದೃಷ್ಟದ ಬಾಗಿಲು ನಿನಗೆ ತೆರೆಯ ಬೇಕಷ್ಟೇ 
ಮುಂದೊಂದು ದಿನ ಸಾಧಿಸುವೆ  ಕೇಳು//೫//

ಅಕ್ಕ, ತಂಗಿಯರ ಹಾರೈಕೆ  ನಿನಗಿರುವುದು
ಮಗ ಗೆದ್ದು ಬರಲೆಂದು ತಾಯಿ ಬೇಡುವುದು
ಎಲ್ಲೇ ಇದ್ದರೂ ನೀ ನೆಮ್ಮದಿಯಿಂದಿರು ಮಗು
ನಿನಗೆ ಪರಶಿವನ ಕೃಪೆಯು ಕವಚ ಆಗುವುದು//೬//

ಅನ್ಯಾಯವನ್ನು ನೀನಿನ್ನು  ಸಹಿಸಿದ್ದು ಸಾಕು
ಧರ್ಮ ಮಾರ್ಗದಿ ನೀನು ನಡೆಯಲೇ ಬೇಕು 
ಕತ್ತೆಗೆ ಲತ್ತೆ ಪೆಟ್ಟೇ ಕೊಡ ಬೇಕು ಎಂದಾಗ
ರೌದ್ರ ರೂಪವ ನೀನು ತಾಳಲೇ  ಬೇಕು //೭//

- ಪ್ರೊ. ಜಯಶ್ರೀ ಹಿರೇಮಠ
ಆಯುರ್ವೇದ ಮತ್ತು ಜಾನಪದ ವೈದ್ಯರು ಮತ್ತು ಸಾಹಿತಿ, ಧಾರವಾಡ.
ಮೋ. 9449819425.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...