ಸೋಮವಾರ, ಜನವರಿ 15, 2024

ಮರಣ ಮಾಲಿಕೆ (ಕವಿತೆ) - ಬಿ ಎಂ ಮಹಾಂತೇಶ.

ಬದುಕಿನ ಮರಕೆ ಸುತ್ತಿದ,
ಕರುಳ ಬಳ್ಳಿಗಳನು ಕ್ಷಣದಲೆ ಬಿಡಿಸುವ,
ಸಾವೇ ನೀನೇದೆಂತ ಅದ್ಭುತ..
ನೀ ಮಾತಿಗಿಂತ ಹರಿತ...

ನಾನು ನನ್ನೆದೆಂಬುವ,
ಸೊಕ್ಕನು ಕುಕ್ಕುವ,
ನೆತ್ತಿಯ ಮೇಲಿನ ಹದ್ದೆ...
ತಿಳಿಯಲಿಲ್ಲ ನೀ ಬಂದ ಸದ್ದೆ..

ಇಳೆಯಗಲದ ಬಯಕೆಗಳನು,
ಮುಗಿಲಗಲದ ಕನಸುಗಳನು,
ಹೊತ್ತು ಸಾಗುವ ಪಯಣಕೆ...
ಒಮ್ಮೆಲೇ ಹಾಕುವೆ ಮರಣ ಮಾಲಿಕೆ...

ಎನಗರಿವಿಲ್ಲ ನಿನ್ನಾಗಮನ,
ಆದರೂ ನಿನ್ನ ಮೇಲೆಯೇ ನನ್ನ ಗಮನ,
ಒಂದಲ್ಲ ಒಂದು ದಿನ ನೀ ಬರುವುದು ಖಚಿತ...
ಬಂದಾಗ ನನ್ನ ನೆನಪುಗಳು ಮಾತ್ರ ಇಲ್ಲಿ ಪರಿಚಿತ...

- ಬಿ ಎಂ ಮಹಾಂತೇಶ
SAVT ಕಾಲೇಜ್ ಕೂಡ್ಲಿಗಿ
ವಿಜಯನಗರ,
9731418615

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...